ಸಂಗ್ರಹ ಚಿತ್ರ 
ವಾಣಿಜ್ಯ

ಕೊರೋನಾವೈರಸ್: ಜಾಗತಿಕ ಆರ್ಥಿಕತೆ ಮಹಾಪತನದ ಸೂಚನೆ ನೀಡಿದ ಮೂಡೀಸ್

ಕೋವಿಡ್--19 ವಿಶ್ವಾದ್ಯಂತ ಆರ್ಥಿಕ ಸುನಾಮಿಯನ್ನು ಸೃಷ್ಟಿಸಿದೆ ಮತ್ತು ಜಾಗತಿಕ ಆರ್ಥಿಕತೆಯು ಗಂಭೀರ ಕುಸಿತದಲ್ಲಿ ಮುಳುಗಿದೆ ಎಂದು ಮೂಡಿಸ್ ಅನಾಲಿಟಿಕ್ಸ್ ತಿಳಿಸಿದೆ

ಕೋವಿಡ್--19 ವಿಶ್ವಾದ್ಯಂತ ಆರ್ಥಿಕ ಸುನಾಮಿಯನ್ನು ಸೃಷ್ಟಿಸಿದೆ ಮತ್ತು ಜಾಗತಿಕ ಆರ್ಥಿಕತೆಯು ಗಂಭೀರ ಕುಸಿತದಲ್ಲಿ ಮುಳುಗಿದೆ ಎಂದು ಮೂಡಿಸ್ ಅನಾಲಿಟಿಕ್ಸ್ ತಿಳಿಸಿದೆ

ಏಷ್ಯಾ ಹಾಗೂ ಯುರೋಪ್ ಃಆಗೂ ಅಮೆರಿಕಾ ಆರ್ಥಿಕತೆಗಳ ಮೇಲೆ ಈ ಕೊರೋನಾವೈರಸ್ ಮಾರಕ ಹೊಡೆತ ನೀಡಿದೆ.

"ಸೋಂಕು ಮಾರಕವಾಗಿದ್ದು ಹರಡುವಿಕೆ ಹೆಚ್ಚುತ್ತಿದೆ. ಇದರೊಡನೆ ಹೆಚ್ಚಿನ ಆರ್ಥಿಕ ಸಂಕಷ್ಟಗಳು ಶೀಘ್ರವಾಗಿ ಬರಲಿವೆ, ವ್ಯವಹಾರ,  ಹೂಡಿಕೆಯನ್ನು ಕಡಿತಗೊಳಿಸುತ್ತವೆಮುಂಬರುವ ವಾರಗಳಲ್ಲಿ ಲಕ್ಷಾಂತರ ಉದ್ಯೋಗ ನಷ್ಟಗಳು ಸಂಭವಿಸುವ ಸಾಧ್ಯತೆಯಿದೆ, ಅದರಲ್ಲೂ ವಿಶೇಷವಾಗಿ ಸಂಬಳ  ನಂಬಿ ಬದುಕುವ ಮನೆಗಳಲ್ಲಿ ತೀವ್ರ ಕಷ್ಟದ ದಿನ ಎದುರಾಗಲಿದೆ"ವಿಶ್ಲೇಷಣೆಯಲ್ಲಿ  ಹೇಳಿದೆ.

ಜನವರಿಯಲ್ಲಿ, ವೈರಸ್‌ ಹಾವಳಿಗೆ ಮುನ್ನ ಮೂಡೀಸ್  2020 ರಲ್ಲಿ ಜಾಗತಿಕ ನೈಜ ಜಿಡಿಪಿ ಬೆಳವಣಿಗೆಯನ್ನು ಶೇಕಡಾ 2.6ಕ್ಕೆ ಕಡಿತಗೊಳಿಸಿತ್ತು. ಈಗ ಪ್ರಯಾಣ, ವ್ಯಾಪಾರ ಮತ್ತು ಅನೇಕ ವ್ಯವಹಾರಗಳನ್ನು ಸ್ಥಗಿತಗೊಳಿಸುವುದರೊಂದಿಗೆ, ಜಾಗತಿಕ ಆರ್ಥಿಕತೆಯು ನಿಜವಾದ ಜಿಡಿಪಿ ಶೇಕಡಾ 0.4 ರಷ್ಟಕ್ಕೆ ಕುಸಿಯುವ ಸಂಬವವಿದೆ.

ಮೊದಲ ತ್ರೈಮಾಸಿಕದಲ್ಲಿ ಚೀನಾದ ಜಿಡಿಪಿ ವಾರ್ಷಿಕ ದರಶೇಕಡಾ 27 ರಷ್ಟು ಕುಸಿತ ಕಂಡಿದೆ. ಯುಎಸ್ ಉದ್ಯೋಗದಾತರು ತಕ್ಷಣವೇ ಕೆಲಸಗಾರರನ್ನು ವಜಾಗೊಳಿಸಿವೆ. ನಿರುದ್ಯೋಗ ವಿಮೆಯ ಆರಂಭಿಕ ಹಕ್ಕುಗಳ ಮಟ್ಟ ಕಳೆದೊಂದು ವಾರದಲ್ಲಿ ಸುಮಾರು 210,000 ದಿಂದ 280,000 ಕ್ಕೆ ಏರಿತು. ಕಳೆದ ವರ್ಷ ಫೆಡರಲ್ ರಿಸರ್ವ್ ನಡೆಸಿದ ಸಮೀಕ್ಷೆಯ ಪ್ರಕಾರ, ಅರ್ಧದಷ್ಟು ಅಮೆರಿಕನ್ನರು ಉದ್ಯೋಗ ಕಳೆದುಕೊಂಡಿದ್ದಾರೆ.

ಕೋವಿಡ್-19  ಜಾಗತಿಕ ಸಾಂಕ್ರಾಮಿಕ ಮತ್ತು ಆರ್ಥಿಕ ಆಘಾತವಾಗಿದೆ . ಜಗತ್ತಿನಾದ್ಯಂತದ ಆರ್ಥಿಕತೆಗಳು ಸ್ಥಗಿತಗೊಳ್ಳುತ್ತಿವೆ ಮತ್ತು ವ್ಯವಹಾರವನ್ನು ಹಠಾತ್ತನೆ ಸ್ಥಗಿತಗೊಳಿಸುವುದರಿಂದ ಗಂಭೀರ ಆರ್ಥಿಕ ಹಾನಿ ಉಂಟಾಗುತ್ತದೆ ಎಂದು ಅದು ಹೇಳಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ

'ಕಿವಿಲಿ ಹೊಗೆ ಬರುವಂತಿದೆ': ಲಂಕಾ-ಭಾರತ ಟೆಸ್ಟ್ ಪಂದ್ಯದಲ್ಲಿ ಮತ್ತೊಂದು ವಿವಾದ, ಗ್ಲೌಸ್ ಕಿತ್ತೆಸೆದ ಬ್ಯಾಟರ್, ಆಗಿದ್ದೇನು?

ಬಿಜೆಪಿ MLC ಎನ್. ರವಿಕುಮಾರ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್