ಅಮೆಜಾನ್ 
ವಾಣಿಜ್ಯ

ಭಾರತದಲ್ಲಿ ಅಮೆಜಾನ್ ವೆಬ್ ಸರ್ವಿಸ್ ವಿಸ್ತರಣೆ: ಹೈದರಾಬಾದ್ ನಲ್ಲಿ 20,761 ಕೋ. ರೂ ವೆಚ್ಚದ ಹೊಸ ವಲಯ ಸ್ಥಾಪನೆ

ತೆಲಂಗಾಣದಲ್ಲಿ ಅತಿದೊಡ್ಡ ವಿದೇಶಿ ನೇರ ಹೂಡಿಕೆಯಲ್ಲಿ(ಎಫ್ ಡಿಐ) ಅಮೆಜಾನ್ ವೆಬ್ ಸರ್ವಿಸಸ್, ಹೈದರಾಬಾದ್ ನಲ್ಲಿ 20 ಸಾವಿರದ 761 ಕೋಟಿ ರೂಪಾಯಿ ಮೊತ್ತದಲ್ಲಿ ಹೊಸ ಕೇಂದ್ರವನ್ನು ಸ್ಥಾಪಿಸುವುದಾಗಿ ಘೋಷಣೆ ಮಾಡಿದೆ.

ಹೈದರಾಬಾದ್: ತೆಲಂಗಾಣದಲ್ಲಿ ಅತಿದೊಡ್ಡ ವಿದೇಶಿ ನೇರ ಹೂಡಿಕೆಯಲ್ಲಿ(ಎಫ್ ಡಿಐ) ಅಮೆಜಾನ್ ವೆಬ್ ಸರ್ವಿಸಸ್, ಹೈದರಾಬಾದ್ ನಲ್ಲಿ 20 ಸಾವಿರದ 761 ಕೋಟಿ ರೂಪಾಯಿ ಮೊತ್ತದಲ್ಲಿ ಹೊಸ ಕೇಂದ್ರವನ್ನು ಸ್ಥಾಪಿಸುವುದಾಗಿ ಘೋಷಣೆ ಮಾಡಿದೆ.

ಕಂಪೆನಿಯು 2022ರಲ್ಲಿ ಕಾರ್ಯನಿರ್ವಹಣೆಯನ್ನು ಆರಂಭಿಸಲಿದ್ದು ನೂತನ ಎಡಬ್ಲ್ಯುಎಸ್ ಏಷಿಯಾ ಫೆಸಿಫಿಕ್ ಹೈದರಾಬಾದ್ ಮೂರು ಲಭ್ಯತಾ ವಲಯಗಳನ್ನು ಆರಂಭದ ವೇಳೆ ಹೊಂದಿರಲಿದೆ. ನಂತರ ಮುಂದಿನ ದಿನಗಳಲ್ಲಿ 9 ಎಡಬ್ಲ್ಯುಎಸ್ ಪ್ರದೇಶಗಳನ್ನು ಮತ್ತು 26 ಸಾಧ್ಯತಾ ವಲಯಗಳನ್ನು ಭಾರತ, ಆಸ್ಟ್ರೇಲಿಯಾ, ಗ್ರೇಟರ್ ಚೀನಾ, ಜಪಾನ್, ಕೊರಿಯಾ ಮತ್ತು ಸಿಂಗಾಪುರಗಳಲ್ಲಿ ಹೊಂದಿರಲಿದೆ. 

ತಂತ್ರಜ್ಞಾನ ಮೂಲಸೌಕರ್ಯ ವಿವಿಧ ಸ್ಥಳಗಳಲ್ಲಿ ಸಿಗುವ ಸಾಧ್ಯತಾ ವಲಯಗಳನ್ನು ಅಮೆಜಾನ್ ವೆಬ್ ಸರ್ವಿಸಸ್ ಹೊಂದಿರಲಿದ್ದು, ಸಾಕಷ್ಟು ಅಂತರದಲ್ಲಿ ಹೊಂದುವುದರಿಂದ ಪ್ರಾಕೃತಿಕ ವಿಕೋಪಗಳು ಮತ್ತು ಇತರ ಘಟನೆಗಳನ್ನು ಕಡಿಮೆ ಮಾಡಲಿದೆ. ಪ್ರತಿ ಲಭ್ಯತಾ ವಲಯಗಳಲ್ಲಿ ಸ್ವತಂತ್ರ ವಿದ್ಯುತ್, ಕೂಲಿಂಗ್, ಶಾರೀರಿಕ ಭದ್ರತೆ, ಅಲ್ಟ್ರಾ ಲೋ ಲೇಟೆನ್ಸಿ ನೆಟ್ ವರ್ಕ್ ಗಳು ಇರುತ್ತವೆ.

ಎಡಬ್ಲ್ಯೂಎಸ್ ಏಷ್ಯಾ ಪೆಸಿಫಿಕ್ (ಹೈದರಾಬಾದ್) ಪ್ರದೇಶವನ್ನು ಪ್ರಾರಂಭಿಸುವುದರಿಂದ ದಕ್ಷಿಣ ಭಾರತದಾದ್ಯಂತ ಗ್ರಾಹಕರಿಗೆ ಇನ್ನೂ ಕಡಿಮೆ ಸುಪ್ತತೆ ಸಿಗಲಿದೆ ಎಂದು ಅಮೆಜಾನ್ ವೆಬ್ ಸರ್ವೀಸಸ್ ಹೇಳಿದೆ. ಈ ಹೊಸ ಕೇಂದ್ರವು ಹೆಚ್ಚಿನ ಡೆವಲಪರ್‌ಗಳು, ಸ್ಟಾರ್ಟ್ಅಪ್‌ಗಳು ಮತ್ತು ಉದ್ಯಮಗಳು ಮತ್ತು ಸರ್ಕಾರ, ಶಿಕ್ಷಣ ಮತ್ತು ಲಾಭೋದ್ದೇಶವಿಲ್ಲದ ಸಂಸ್ಥೆಗಳಿಗೆ ತಮ್ಮ ಅಪ್ಲಿಕೇಶನ್‌ಗಳನ್ನು ಚಲಾಯಿಸಲು ಮತ್ತು ಭಾರತದಲ್ಲಿರುವ ಡೇಟಾ ಕೇಂದ್ರಗಳಿಂದ ಅಂತಿಮ ಬಳಕೆದಾರರಿಗೆ ಸೇವೆ ಸಲ್ಲಿಸಲು ಅನುವು ಮಾಡಿಕೊಡುತ್ತದೆ.

ತೆಲಂಗಾಣ ಸರ್ಕಾರದ ಐಟಿ ಮತ್ತು ಕೈಗಾರಿಕಾ ಸಚಿವ ಕೆ ಟಿ ರಾಮ ರಾವ್ ಇದನ್ನು ಟ್ವಿಟ್ಟರ್ ನಲ್ಲಿ ಘೋಷಿಸಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಾಂವಿಧಾನಿಕ ಕರ್ತವ್ಯಗಳು ಪ್ರಜಾಪ್ರಭುತ್ವದ ಅಡಿಪಾಯ: ದೇಶದ ನಾಗರಿಕರಿಗೆ ಪ್ರಧಾನಿ ಮೋದಿ ಪತ್ರ

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಹಳದಿ ಮಾರ್ಗದ ಸಂಚಾರ ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇ ಶುರು..!

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

SCROLL FOR NEXT