ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ 
ವಾಣಿಜ್ಯ

ಕೋವಿಡ್-19 ಸಂಬಂಧಿತ ಹೆಲ್ತ್ ಕೇರ್ ಮೂಲಸೌಕರ್ಯಕ್ಕೆ ಆರ್ ಬಿಐ ನಿಂದ 50,000 ಕೋಟಿ ರೂಪಾಯಿ ನಿಗದಿ!

ರಿಸರ್ವ್ ಬ್ಯಾಂಕ್ ನ ಗೌರ್ನರ್ ಶಕ್ತಿಕಾಂತ್ ದಾಸ್ ಅನಿಗದಿತ ಭಾಷಣ ಮಾಡಿದ್ದು, ಆರ್ಥಿಕತೆ ಮೇಲೆ ಕೋವಿಡ್-19 ಎರಡನೇ ಅಲೆಯ ಪರಿಣಾಮಗಳ ಬಗ್ಗೆ ಮಾತನಾಡಿದ್ದಾರೆ. 

ನವದೆಹಲಿ: ರಿಸರ್ವ್ ಬ್ಯಾಂಕ್ ನ ಗೌರ್ನರ್ ಶಕ್ತಿಕಾಂತ್ ದಾಸ್ ಅನಿಗದಿತ ಭಾಷಣ ಮಾಡಿದ್ದು, ಆರ್ಥಿಕತೆ ಮೇಲೆ ಕೋವಿಡ್-19 ಎರಡನೇ ಅಲೆಯ ಪರಿಣಾಮಗಳ ಬಗ್ಗೆ ಮಾತನಾಡಿದ್ದಾರೆ. 

ಕಳೆದ ಕೆಲವು ವಾರಗಳಿಂದ ಭಾರತದಲ್ಲಿ ಕೋವಿಡ್-19 ಪ್ರಕರಣಗಳು ಏರಿಕೆ ಕಂಡಿದ್ದು, ಒಟ್ಟಾರೆ 2 ಕೋಟಿ ಮಂದಿ ಸೋಂಕಿಗೆ ಗುರಿಯಾಗಿದ್ದಾರೆ. 

ಆರ್ ಬಿಐ ಗೌರ್ನರ್ ಕೋವಿಡ್ ಪರಿಸ್ಥಿತಿಯ ಬಗ್ಗೆ ಮಾತನಾಡಿದ್ದು, "ಬಲಿಷ್ಠ ಆರ್ಥಿಕ ಚೇತರಿಕೆಯಿಂದ ಹೊಸ ಸಮಸ್ಯೆಗಳನ್ನು ಎದುರಿಸುವ ರೀತಿಯಲ್ಲಿ ಪರಿಸ್ಥಿತಿಗಳು ಬದಲಾಗಿವೆ. 

ಕೋವಿಡ್-19 ಬಿಕ್ಕಟ್ಟಿನ ಪರಿಸ್ಥಿತಿಯಿಂದ ಭಾರತ ಹೊರಬರಲಿದೆ ಎಂಬ ವಿಶ್ವಾಸವಿರಲಿ" ಎಂದು ಶಕ್ತಿಕಾಂತ್ ದಾಸ್ ಹೇಳಿದ್ದಾರೆ. 

ಕೋವಿಡ್-19 ಪರಿಸ್ಥಿತಿಯನ್ನು ಆರ್ ಬಿಐ ಗಮನಿಸುವುದನ್ನು ಮುಂದುವರೆಸಲಿದ್ದು, ಕೋವಿಡ್-19 ವಿರುದ್ಧ ಹೋರಾಡಲು ಅಗತ್ಯವಿರುವ ತನ್ನ ಎಲ್ಲಾ ಸಂಪನ್ಮೂಲಗಳನ್ನೂ ನಿಯೋಜನೆ ಮಾಡಲಿದೆ.

ವ್ಯಾಪಕವಾದ, ಕ್ಷಿಪ್ರಗತಿಯ ಕ್ರಮಗಳನ್ನು ಕೋವಿಡ್-19 ವಿರುದ್ಧ ಹೋರಾಡಲು ಕೈಗೊಳ್ಳಬೇಕಿದೆ. 

"ಆರ್ ಬಿಐ ಕೋವಿಡ್-19 ಪರಿಸ್ಥಿತಿಯನ್ನು ನಿಭಾಯಿಸುವುದಕ್ಕಾಗಿ, ಕೋವಿಡ್-19 ಹೆಲ್ತ್ ಕೇರ್ ಗೆ ಮಾರ್ಚ್ 2022 ರ ವರೆಗೂ 50,000 ಕೋಟಿ ರೂಪಾಯಿಗಳನ್ನು ನೀಡಲಿದೆ. ಲಸಿಕೆ ಉತ್ಪಾದಕರಿಗೆ ಆಕ್ಸಿಜನ್ ಸಿಲೆಂಡರ್ ಹಾಗೂ ವೆಂಟಿಲೇಟರ್ ಗಳನ್ನು ಖರೀದಿಸುವುದಕ್ಕಾಗಿ ಈ ಹಣ ಬಳಕೆಯಾಗಲಿದೆ" ಎಂದು ಆರ್ ಬಿಐ ಗೌರ್ನರ್ ಹೇಳಿದ್ದಾರೆ. 

"ದುರ್ಬಲ ಕ್ಷೇತ್ರದವರಿಗೆ ಕ್ಷಿಪ್ರ ಸಾಲ ನೀಡುವುದಕ್ಕಾಗಿ ಬ್ಯಾಂಕ್ ಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಬ್ಯಾಂಕ್ ಗಳು ತಮ್ಮ ಬ್ಯಾಲೆನ್ಸ್ ಶೀಟ್ ನಲ್ಲಿ ಕೋವಿಡ್-19 ಲೋನ್ ಬುಕ್ ನ್ನು ಪ್ರಾರಂಭಿಸಲಿದ್ದು, ಕೋವಿಡ್-19 ಬುಕ್ ಗೆ ಸಮನಾದ ಹೂಡಿಕೆಯನ್ನು ಆರ್ ಬಿಐ ನಲ್ಲಿ 40 ಬಿಪಿಎಸ್ ಹಾಗೂ ಅದಕ್ಕಿಂತ ಮೇಲ್ಪಟ್ಟ ರಿವರ್ಸ್ ರೆಪೋ ದರದಲ್ಲಿ ಮಾಡಬಹುದಾಗಿದೆ ಎಂದು ಶಕ್ತಿಕಾಂತ್ ದಾಸ್ ಹೇಳಿದ್ದಾರೆ. 

ಸಾಲ ಪಡೆಯುವ ಖಾಸಗಿ ಹಾಗೂ ಎಂಎಸ್ಎಂಇಗಳಿಗೆ ಸೆ.30, 2021 ವರೆಗೂ ಒನ್-ಟೈಮ್ ರಿಸ್ಟ್ರಕ್ಚರಿಂಗ್ ಗೆ ಅವಕಾಶ ಇರಲಿದೆ. ಪುನಾರಚನೆಯ 1.0 ರ ಅಡಿಯಲ್ಲಿ ಮೊರಾಟೋರಿಯಮ್ ನ್ನು ಒಟ್ಟಾರೆ 2 ವರ್ಷಗಳ ಕಾಲ ವಿಸ್ತರಣೆ ಮಾಡಬಹುದಾಗಿದೆ ಎಂದು ಶಕ್ತಿಕಾಂತ್ ದಾಸ್ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT