ಬೈಜೂಸ್ 
ವಾಣಿಜ್ಯ

'ಮಹಾ ಆರ್ಥಿಕ ಬಿಕ್ಕಟ್ಟಿನ ನಡುವೆಯೂ' ಸಿಬ್ಬಂದಿಗೆ ಮೇ ತಿಂಗಳ ಸಂಬಳ ನೀಡಿದ BYJU'S

ಆರ್ಥಿಕ ಮುಗ್ಗಟ್ಟಿಗೆ ಸಿಲುಕಿರುವ ಖ್ಯಾತ್ ಎಡ್ ಟೆಕ್ ಸಂಸ್ಥೆ ಬೈಜೂಸ್ ತನ್ನ ಸಿಬ್ಬಂದಿಗೆ ಮೇ ತಿಂಗಳ ವೇತನ ಪ್ರಕ್ರಿಯೆಗೊಳಿಸಿದ್ದು, ಇಂದು ಸಿಬ್ಬಂದಿಗಳಿಗೆ ವೇತನ ಹಂಚಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ನವದೆಹಲಿ: ಆರ್ಥಿಕ ಮುಗ್ಗಟ್ಟಿಗೆ ಸಿಲುಕಿರುವ ಖ್ಯಾತ್ ಎಡ್ ಟೆಕ್ ಸಂಸ್ಥೆ ಬೈಜೂಸ್ ತನ್ನ ಸಿಬ್ಬಂದಿಗೆ ಮೇ ತಿಂಗಳ ವೇತನ ಪ್ರಕ್ರಿಯೆಗೊಳಿಸಿದ್ದು, ಇಂದು ಸಿಬ್ಬಂದಿಗಳಿಗೆ ವೇತನ ಹಂಚಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಹೌದು.. Edtech ಸಂಸ್ಥೆ BYJU'S ತನ್ನ ಉದ್ಯೋಗಿಗಳ ಮೇ ತಿಂಗಳ ಸಂಬಳವನ್ನು ತಿಂಗಳ ವ್ಯವಹಾರ ಸಂಗ್ರಹದಿಂದ ಪ್ರಕ್ರಿಯೆಗೊಳಿಸಿದೆ ಎಂದು ಕಂಪನಿಯ ನಿಕಟ ಮೂಲಗಳು ಸೋಮವಾರ ತಿಳಿಸಿವೆ. ಕಳೆದ ವರ್ಷ, ಎಡ್ಟೆಕ್ ಸಂಸ್ಥೆಯ ಸಂಸ್ಥಾಪಕರು ಉದ್ಯೋಗಿಗಳ ಸಂಬಳಕ್ಕಾಗಿ ಸಾಲವನ್ನು ಹೆಚ್ಚಿಸಲು ತಮ್ಮ ಮನೆಯನ್ನು ಬ್ಯಾಂಕ್ ಗೆ ಗಿರವಿ ಇಡಬೇಕಾಗಿತ್ತು .

ಆದರೆ ಈ ತಿಂಗಳು ಸಂಸ್ಥೆಯ ಆದಾಯದಿಂದಲೇ ಮೇ ತಿಂಗಳ ಸಂಬಳವನ್ನು ಉದ್ಯೋಗಿಗಳಿಗೆ ಪ್ರಕ್ರಿಯೆಗೊಳಿಸಲಾಗಿದೆ ಎಂದು BYJU's ಮೂಲಗಳು ತಿಳಿಸಿವೆ. ಹಾಲಿ ಬೆಳವಣಿಗದೆ ಸಂಸ್ಥೆಯ ಉದ್ಯೋಗಿಗಳಲ್ಲಿ ಆಶಾಭಾವ ಮೂಡಿಸಿದ್ದು, ಈ ಮೈಲಿಗಲ್ಲು BYJU ಗೆ ವಿಶೇಷವಾಗಿದೆ. ಏಕೆಂದರೆ ಈ ಬಾರಿ ಕಂಪನಿಯ ತಿಂಗಳ ಸಂಗ್ರಹಣೆಯಿಂದಲೇ ಸಂಬಳವನ್ನು ಪಾವತಿಸಲಾಗಿದೆ ಎಂದು ಮೂಲವೊಂದು ತಿಳಿಸಿದೆ.

ಈ ಹಿಂದೆ ಸಂಸ್ಥೆಯು ಫೆಬ್ರವರಿಯಲ್ಲಿ ತನ್ನ ಹಕ್ಕುಗಳ ಮೂಲಕ ಸಂಗ್ರಹಿಸಲಾದ USD 200 ಮಿಲಿಯನ್ ನಿಧಿಯನ್ನು ಬಳಸಲು ಸಾಧ್ಯವಾಗದ ಕಾರಣ ಕಳೆದ ತಿಂಗಳು ಕಂಪನಿಯು ಸಂಬಳ ವೆಚ್ಚವನ್ನು ಭರಿಸಲು ವಿವಿಧ ಸಾಲಗಳನ್ನು ಸಂಗ್ರಹಿಸಿತ್ತು. ಆದರೆ ಈ ಬಾರಿ ಸಂಸ್ಥೆಯ ಸಂಗ್ರಹಣೆಯಿಂದಲೇ ವೇತನ ವಿತರಣೆ ಮಾಡಲಾಗಿದೆ.

"ಇತ್ತೀಚಿನ ತಿಂಗಳುಗಳಲ್ಲಿ, BYJU'S ಕಾರ್ಯಾಚರಣೆಗಳನ್ನು ಅತ್ಯುತ್ತಮವಾಗಿಸಲು ಮತ್ತು ಅದರ ಆರ್ಥಿಕ ಆರೋಗ್ಯವನ್ನು ಬಲಪಡಿಸುವ ಗುರಿಯನ್ನು ಹೊಂದಿರುವ ಕಾರ್ಯತಂತ್ರದ ಉಪಕ್ರಮಗಳ ಸರಣಿಯನ್ನು ಜಾರಿಗೆ ತಂದಿದೆ. ಮಾಸಿಕ ಸಂಗ್ರಹಣೆಗಳಿಂದ ಸಂಬಳ ವೆಚ್ಚಗಳನ್ನು ಸರಿದೂಗಿಸುವ ಸಾಮರ್ಥ್ಯವು ಈ ಕ್ರಮಗಳ ಧನಾತ್ಮಕ ಪರಿಣಾಮವನ್ನು ಒತ್ತಿಹೇಳುತ್ತದೆ" ಎಂದು ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

ಸಮಸ್ತ ಜನರಿಗೆ ಸುಗಮ ಆಡಳಿತ, ಶುದ್ಧ ನೀರಿನ ಪೂರೈಕೆ: ಸ್ವಚ್ಚತೆ- ಸಂಚಾರ ವ್ಯವಸ್ಥೆಗೆ ಸಿಎಂ ಸಿದ್ದರಾಮಯ್ಯ ಕಟ್ಟಪ್ಪಣೆ

ಸಿದ್ದರಾಮಯ್ಯ ಮೇಲೆ ತೂಗುಗತ್ತಿ: ಅಧಿಕಾರದಲ್ಲಿ ಉಳಿಯಲು ಸಂಪುಟ ಪುನಾರಚನೆ ಕಸರತ್ತು; ಬಿಹಾರ-ಕೇರಳ ಚುನಾವಣೆಯತ್ತ ಡಿಕೆಶಿ ಚಿತ್ತ!

ವೀರೇಂದ್ರ ಪಪ್ಪಿ ಕರ್ಮಕಾಂಡ ನೋಡುತ್ತಿದ್ದರೆ CM- DCM ಇನ್ಯಾವ ಪರಿ ಲೂಟಿ ಮಾಡಿ ಹೈಕಮಾಂಡ್ ಗೆ ಕಪ್ಪ ನೀಡುತ್ತಿರಬೇಡಾ?

ಈ ಬಾರಿ ನಾನು ಸಚಿವನಾಗುವ ಭರವಸೆ ಇದೆ: ಸಂಪುಟ ವಿಸ್ತರಣೆಯೇ ನವೆಂಬರ್ ಕ್ರಾಂತಿಯಿರಬಹುದು; ಸಲೀಂ ಅಹ್ಮದ್

SCROLL FOR NEXT