ಸಂಗ್ರಹ ಚಿತ್ರ 
ವಾಣಿಜ್ಯ

127 ವರ್ಷಗಳ ನಂತರ ಗೊದ್ರೇಜ್ ಸಮೂಹ ಇಬ್ಭಾಗ!

127 ವರ್ಷಗಳ ದೀರ್ಘ ಇತಿಹಾಸ ಹೊಂದಿರುವ ಗೋದ್ರೆಜ್‌ ಸಮೂಹ ಸಂಸ್ಥೆ ಇಬ್ಭಾಗವಾಗಲು ನಿರ್ಧರಿಸಿದೆ. ದೇಶದ ಮುಖ ಕಂಪನಿಗಳಲ್ಲಿ ಒಂದಾಗಿರುವ ಗೋದ್ರೆಜ್‌ ಸಮೂಹ ಇಬ್ಭಾಗವಾಗಿದೆ.

ಮುಂಬೈ: 127 ವರ್ಷಗಳ ದೀರ್ಘ ಇತಿಹಾಸ ಹೊಂದಿರುವ ಗೋದ್ರೆಜ್‌ ಸಮೂಹ ಸಂಸ್ಥೆ ಇಬ್ಭಾಗವಾಗಲು ನಿರ್ಧರಿಸಿದೆ. ದೇಶದ ಮುಖ ಕಂಪನಿಗಳಲ್ಲಿ ಒಂದಾಗಿರುವ ಗೋದ್ರೆಜ್‌ ಸಮೂಹ ಇಬ್ಭಾಗವಾಗಿದೆ.

ಷೇರುಗಳನ್ನು ಪುನರ್‌ ರಚಿಸಲು ಕಂಪನಿ ಮುಂದಾಗಿದ್ದು, ಗೋದ್ರೇಜ್‌ ಎಂಟರ್‌ಪ್ರೈಸಸ್‌ ಹಾಗೂ ಗೋದ್ರೇಜ್ ಇಂಡಸ್ಟ್ರೀಸ್ ಎನ್ನುವ ಎರಡು ಪ್ರತ್ಯೇಕ ಕಂಪನಿಗಳಾಗಿ ಕಾರ್ಯನಿರ್ವಹಿಸಲಿವೆ ಎಂದು ಷೇರುಪೇಟೆಗೆ ನೀಡಿದ ಮಾಹಿತಿಯಲ್ಲಿ ತಿಳಿಸಿದೆ.

ಸಂಬಂಧಪಟ್ಟ ನಿಯಂತ್ರಕ ಅನುಮೋದನೆ ಲಭಿಸಿದ ಬಳಿಕ ಎರಡು ಪ್ರತ್ಯೇಕ ಉದ್ಯಮವಾಗಿ ಕಾರ್ಯನಿರ್ವಹಿಸಲಿದ್ದು, ಉಭಯ ಕಂಪನಿಗಳೂ ಗೋದ್ರೆಜ್ ಬ್ರಾಂಡ್‌ ಅನ್ನೇ ಬಳಸಲಿವೆ ಎಂದು ತಿಳಿಸಿದೆ.

ಜಮ್ಶೆಡ್ ಗೋದ್ರೆಜ್ ಅವರು ಗೋದ್ರೆಜ್‌ ಎಂಟರ್‌ಪ್ರೈಸಸ್ ಗ್ರೂಪ್‌ನ (ಜಿಇಜಿ) ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿರಲಿದ್ದು, ಅವರ ಸೊಸೆ ನೈರಿಕಾ ಹೋಳ್ಕರ್ ಅವರು ಕಾರ್ಯನಿರ್ವಾಹಕ ನಿರ್ದೇಶಕಿಯಾಗಿರಲಿದ್ದಾರೆ. ಅಂತರಿಕ್ಷಯಾನ, ​​ವಾಯುಯಾನ, ರಕ್ಷಣಾ ಮತ್ತು ದ್ರವ ಎಂಜಿನ್‌ಗಳ ಉತ್ಪಾದನಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದೆ.

73 ವರ್ಷದ ನಾದಿರ್ ಗೋದ್ರೆಜ್ ಅವರು ಗೋದ್ರೆಜ್ ಇಂಡಸ್ಟ್ರೀಸ್ ಗ್ರೂಪ್‌ನ (ಜಿಐಜಿ) ಅಧ್ಯಕ್ಷರಾಗಿರಲಿದ್ದಾರೆ. ಗೋದ್ರೆಜ್ ಇಂಡಸ್ಟ್ರೀಸ್‌, ಗೋದ್ರೆಜ್ ಕನ್ಸೂಮರ್ ಪ್ರಾಡಕ್ಟ್ಸ್, ಗೋದ್ರೆಜ್ ಪ್ರಾಪರ್ಟೀಸ್ ಮುಂತಾದ ಉದ್ಯಮಗಳು ಜಿಐಜಿಯ ಭಾಗವಾಗಿರಲಿದೆ.

ಸಿಎನ್‌ಬಿಸಿ ಆವಾಜ್ ವರದಿಯ ಪ್ರಕಾರ, ಆದಿ ಗೋದ್ರೇಜ್ ಮತ್ತು ನಾದಿರ್ ಗೋದ್ರೇಜ್ ಈ ವಿಭಜನೆಯ ಅಡಿಯಲ್ಲಿ ಪಟ್ಟಿ ಮಾಡಲಾದ ಕಂಪನಿಗಳಲ್ಲಿ ಹೆಚ್ಚಿನ ಪಾಲನ್ನು ಪಡೆಯುತ್ತಾರೆ. ಮತ್ತೊಂದೆಡೆ, ಗೋದ್ರೇಜ್ ಮತ್ತು ಬಾಯ್ಸ್ ನಿಯಂತ್ರಣವು ಜಮ್ಶೆಡ್ ಗೋದ್ರೇಜ್ ಮತ್ತು ಸ್ಮಿತಾ ಗೋದ್ರೇಜ್‌ಗೆ ಹೋಗಲಿದೆ.

ಅರ್ದೇಶಿರ್ ಗೋದ್ರೇಜ್ ಹುಟ್ಟುಹಾಕಿದ ಮೊದಲ ಕಂಪನಿಯಲ್ಲಿ ಮೇಡ್‌ ಇನ್‌ ಇಂಡಿಯಾ ಎಂದು ಬರೆದು ಇಂಗ್ಲಿಷರ ಕೆಂಗಣ್ಣಿಗೆ ಗುರಿಯಾಗಿದ್ದರು. ಸವಾಲುಗಳನ್ನೆಲ್ಲಾ ಮೆಟ್ಟಿನಿಂತು ಗೋದ್ರೇಜ್‌ ಎಂಬ ಕಂಪನಿಯನ್ನು ಸ್ಥಾಪಿಸಿದರು. ಈ ಕಂಪನಿ ನೋಡ ನೋಡುತ್ತಲೇ ಗೃಹೋಪಯೋಗಿ ಕ್ಷೇತ್ರದಲ್ಲಿ ತನ್ನ ಗುರುತನ್ನು ಮೂಡಿಸುತ್ತಾ ಸಾಗಿತು. ಅಲ್ಲದೆ ದೊಡ್ಡ ಕಾರ್ಪೊರೇಟ್‌ ಕಂಪನಿಯಾಗಿ ಬೆಳೆದು ನಿಂತಿತು. 127 ವರ್ಷಗಳ ಇತಿಹಾಸದ ಈ ಕಂಪನಿಯ ಈಗ ವಿಭಜನೆಯಾಗಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

SCROLL FOR NEXT