ಚಿನ್ನದ ನಾಣ್ಯ online desk
ವಾಣಿಜ್ಯ

Akshaya Tritiya 2024: ಆನ್ ಲೈನ್ ನಲ್ಲಿ ಭರ್ಜರಿ ವ್ಯಾಪಾರ; ಚಿನ್ನದ ಬೆಲೆ ಇಳಿಕೆ; ಮಾರಾಟದಲ್ಲಿ ಶೇ.500 ರಷ್ಟು ಏರಿಕೆ!

ಅಕ್ಷಯ ತೃತೀಯದ ದಿನದಂದು ಭಾರತದಲ್ಲಿ ಚಿನ್ನದ ವ್ಯಾಪಾರ ಏರಿಕೆ ಕಂಡಿದೆ. ಆನ್ ಲೈನ್ ವೇದಿಕೆಗಳಲ್ಲಿ ಭರ್ಜರಿಯಾಗಿ ಚಿನ್ನದ ವ್ಯಾಪಾರ ನಡೆದಿದ್ದು, ಹಳದಿ ಲೋಹದ ಮಾರಾಟದಲ್ಲಿ ಶೇ.500 ರಷ್ಟು ಏರಿಕೆ ದಾಖಲಾಗಿದೆ.

ಬೆಂಗಳೂರು: ಅಕ್ಷಯ ತೃತೀಯದ (Akshaya Tritiya 2024 2024) ದಿನದಂದು ಭಾರತದಲ್ಲಿ ಚಿನ್ನದ ವ್ಯಾಪಾರ ಏರಿಕೆ ಕಂಡಿದೆ. ಆನ್ ಲೈನ್ ವೇದಿಕೆಗಳಲ್ಲಿ ಭರ್ಜರಿಯಾಗಿ ಚಿನ್ನದ ವ್ಯಾಪಾರ ನಡೆದಿದ್ದು, ಹಳದಿ ಲೋಹದ ಮಾರಾಟದಲ್ಲಿ ಶೇ.500 ರಷ್ಟು ಏರಿಕೆ ದಾಖಲಾಗಿದೆ.

ಬ್ಲಿಂಕ್ ಇಟ್, ಸ್ವಿಗ್ಗಿ ಇನ್ಸ್ಟಾಮಾರ್ಟ್, ಬಿಗ್ ಬ್ಯಾಸ್ಕೆಟ್, ಝೆಪ್ಟೋ ತಮ್ಮ ವೇದಿಕೆಗಳಲ್ಲಿ ಚಿನ್ನ ಖರೀದಿಸುವವರಿಗೆ 10 ನಿಮಿಷಗಳಲ್ಲಿ ಚಿನ್ನ ಹಾಗೂ ಬೆಳ್ಳಿ ನಾಣ್ಯಗಳನ್ನು ತಲುಪಿಸುವ ವಿಶೇಷ ಆಫರ್ ನೀಡಿತ್ತು.

ಅಕ್ಷಯ ತೃತೀಯದ ದಿನದಂದು ಗ್ರಾಹಕರ ಮನೆಬಾಗಿಲಿಗೆ ಚಿನ್ನ ಹಾಗೂ ಬೆಳ್ಳಿ ನಾಣ್ಯಗಳನ್ನು ತಲುಪಿಸುವ ಭಾಗವಾಗಿ ಬಿಗ್ ಬ್ಯಾಸ್ಕೆಟ್ ತನಿಷ್ಕ್ ಹಾಗೂ ಎಂಎಂಟಿಸಿ-ಪಿಎಎಂಪಿ ಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದರೆ, ಸ್ವಿಗ್ಗಿ ಇನ್ಸ್ಟಾಮಾರ್ಟ್ ಮಲ್ಬಾರ್ ಗೋಲ್ಡ್ ಹಾಗೂ ಡೈಮಂಡ್ಸ್ ಹಾಗೂ ಮುತ್ತೂಟ್ ಎಕ್ಸಿಮ್ ಗಳೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ಜೆಪ್ಟೋ ನೆಕ್ ಜ್ಯೂವೆಲರಿಯೊಂದಿಗೆ ಒಪ್ಪಂದ ಮಾಡಿಕೊಂಡಿತ್ತು.

ಈ ಬಗ್ಗೆ ಟ್ವಿಟರ್ ನಲ್ಲಿ ಮಾಹಿತಿ ನೀಡಿರುವ, ಇನ್ಸ್ಟಾಮಾರ್ಟ್ ನ ಮುಖ್ಯಸ್ಥರೂ ಆಗಿರುವ ಸ್ವಿಗ್ಗಿ ಸಹ ಸಂಸ್ಥಾಪಕ ಪಣಿ ಕಿಶನ್, ತಮ್ಮ ವೇದಿಕೆ ಧನತ್ರಯೋದಶಿ(Dhanteras) ಚಿನ್ನದ ಮಾರಾಟದಲ್ಲಿ ಶೇ.500 ರಷ್ಟು ಏರಿಕೆ ಕಂಡಿದೆ.

ಇದೇ ವೇಳೆ ಫೋನ್ ಪೇ ಆಫರ್ ಘೋಷಣೆ ಮಾಡಿದ್ದು, ತನ್ನ ಆಪ್ ಮೂಲಕ ಕನಿಷ್ಟ 1000 ರೂಪಾಯಿ ಮೌಲ್ಯದ ಆರ್ಡರ್ ಗಳಿಗೆ 2,000 ರೂಗಳವರೆಗೂ ಕ್ಯಾಶ್ ಬ್ಯಾಕ್ ಆಫರ್ ನೀಡಿದೆ. ಇದು ಏಕ ಕಾಲಕ್ಕೆ 24ಕೆ ಡಿಜಿಟಲ್ ಚಿನ್ನದ ಖರೀದಿಗೆ ಮಾತ್ರ ಅನ್ವಯವಾಗಲಿದೆ. ಮೇ 12ರವರೆಗೆ ಕ್ಯಾರಟ್‌ಲೇನ್ ಸ್ಟೋರ್‌ಗಳಲ್ಲಿ ಡಿಜಿಟಲ್ ಚಿನ್ನವನ್ನು ಪಡೆದುಕೊಳ್ಳಲು ವಿಶೇಷ ಕೊಡುಗೆಯನ್ನು ಸಹ ಫೋನ್ ಪೇ ಪ್ರಕಟಿಸಿದೆ.

ಚಿನ್ನದ ದರ ಇಳಿಕೆ

ಅಕ್ಷಯ ತೃತೀಯದ ನಂತರ ಇಂದು ಚಿನ್ನದ ದರದಲ್ಲಿ ಸ್ವಲ್ಪ ಇಳಿಕೆ ಕಂಡುಬಂದಿದೆ. ಬೆಂಗಳೂರಿನಲ್ಲಿ ಪ್ರತಿ 10 ಗ್ರಾಮ್ ಚಿನ್ನದ ದರದಲ್ಲಿ 300 ರೂಪಾಯಿ ಕಡಿಮೆಯಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT