ಸಾಂದರ್ಭಿಕ ಚಿತ್ರ  
ವಾಣಿಜ್ಯ

ದರ ತರ್ಕಬದ್ಧಗೊಳಿಸುವಿಕೆ, ವಿಮೆ ಮೇಲಿನ ತೆರಿಗೆ ಕುರಿತು ಚರ್ಚೆ: ಇಂದು ಜಿಎಸ್ ಟಿ ಕೌನ್ಸಿಲ್ ಸಭೆ

ರಿಯಲ್ ಎಸ್ಟೇಟ್‌ನಲ್ಲಿನ ಜಂಟಿ ಅಭಿವೃದ್ಧಿ ಒಪ್ಪಂದಗಳಲ್ಲಿ (JDAs) ಅಭಿವೃದ್ಧಿ ಹಕ್ಕುಗಳ ವರ್ಗಾವಣೆಯ ಮೇಲಿನ ಜಿಎಸ್‌ಟಿ ಅನ್ವಯವನ್ನು ಚರ್ಚಿಸಲಾಗುವುದು.

ಮುಂಬೈ: ಜೀವವಿಮೆ ಮತ್ತು ಆರೋಗ್ಯ ವಿಮೆ ಪಾಲಿಸಿಗಳ ಮೇಲಿನ ಬಹುಚರ್ಚಿತ ಜಿಎಸ್‌ಟಿ ದರ ಸೇರಿದಂತೆ ಪ್ರಮುಖ ವಿಷಯಗಳ ಕುರಿತು ಚರ್ಚಿಸಲು ಇಂದು ಸೋಮವಾರ ಸಾಯಂಕಾಲ ಜಿಎಸ್ ಟಿ ಕೌನ್ಸಿಲ್ ಸಭೆ ನಡೆಯಲಿದೆ. ಜಿಎಸ್‌ಟಿ ಅಡಿಯಲ್ಲಿ ದರ ರಚನೆಯನ್ನು ತರ್ಕಬದ್ಧಗೊಳಿಸುವ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆಯಿದೆ.

ಪ್ರಸ್ತುತ ಪ್ರಸ್ತುತ ಮೆಡಿಕ್ಲೈಮ್ ಪ್ರೀಮಿಯಂಗಳ ಮೇಲೆ ಶೇಕಡಾ 18ರಷ್ಟು ತೆರಿಗೆಯನ್ನು ವಿಧಿಸುವ ಜಿಎಸ್ ಟಿ ರಚನೆಗಳ ಮೇಲೆ ಸಭೆ ಚರ್ಚಿಸಲಿದೆ ಎಂದು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ(New Indian Express) ಈ ಹಿಂದೆಯೇ ವರದಿ ಮಾಡಿತ್ತು. ಈ ದರವು ಗ್ರಾಹಕರು ಮತ್ತು ವಿಮಾದಾರರಿಗೆ ಸಮರ್ಥನೀಯವಾಗಿಲ್ಲ ಎಂದು ಅನೇಕ ಸಂಬಂಧಪಟ್ಟವರ ವಾದವಾಗಿದೆ.

ಮೂಲಗಳ ಪ್ರಕಾರ, ಪರಿಗಣನೆಯಲ್ಲಿರುವ ಪ್ರಸ್ತಾವನೆಗಳಲ್ಲಿ ಮೆಡಿಕ್ಲೈಮ್ ಕಂಪನಿಗಳು ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ (ITC) ಶೇಕಡಾ 5ರಷ್ಟು ಕಡಿಮೆ ಜಿಎಸ್ ಟಿ ದರವನ್ನು ವಿಧಿಸಲು ಅಥವಾ ವ್ಯಾಪಾರದಿಂದ ಗ್ರಾಹಕರಿಗೆ ನಿರ್ದಿಷ್ಟವಾಗಿ ಏಕರೂಪದ ಶೇಕಡಾ 5ರಷ್ಟು ಜಿಎಸ್ ಟಿ ದರವನ್ನು ಜಾರಿಗೆ ತರಲು ಅವಕಾಶ ನೀಡುತ್ತದೆ.

ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಇತ್ತೀಚೆಗೆ ಪ್ರಸ್ತಾಪಿಸಲಾದ ಅಮ್ನೆಸ್ಟಿ ಯೋಜನೆಗೆ ಸಂಬಂಧಿಸಿದಂತೆ ಹಣಕಾಸು ಸಚಿವಾಲಯವು ಸುತ್ತೋಲೆಯನ್ನು ಹೊರಡಿಸಲಿದೆ ಎಂದು ಆಗಸ್ಟ್‌ನಲ್ಲಿ TNIE ವರದಿ ಮಾಡಿತ್ತು. 2017ರ ಜುಲೈ 1 ಮತ್ತು ಮಾರ್ಚ್ 31, 2020ರ ನಡುವೆ ತೆರಿಗೆ ವಿಷಯಗಳಿಗೆ ಕೆಲವು ಷರತ್ತುಗಳ ಅಡಿಯಲ್ಲಿ ಬಡ್ಡಿ ಮತ್ತು ದಂಡವನ್ನು ಮನ್ನಾ ಮಾಡುವ ಮೂಲಕ ತೆರಿಗೆದಾರರಿಗೆ ಪರಿಹಾರವನ್ನು ಒದಗಿಸುವ ಗುರಿಯನ್ನು ಈ ಯೋಜನೆ ಹೊಂದಿದೆ.

ರಿಯಲ್ ಎಸ್ಟೇಟ್‌ನಲ್ಲಿನ ಜಂಟಿ ಅಭಿವೃದ್ಧಿ ಒಪ್ಪಂದಗಳಲ್ಲಿ (JDAs) ಅಭಿವೃದ್ಧಿ ಹಕ್ಕುಗಳ ವರ್ಗಾವಣೆಯ ಮೇಲಿನ ಜಿಎಸ್‌ಟಿ ಅನ್ವಯವನ್ನು ಚರ್ಚಿಸಲಾಗುವುದು. ಜೆಡಿಎ ಎಂಬುದು ಕಾನೂನು ಒಪ್ಪಂದವಾಗಿದ್ದು, ಭೂಮಾಲೀಕರ ಆಸ್ತಿಯಲ್ಲಿ ನಿರ್ಮಾಣ ಯೋಜನೆಗಳನ್ನು ಕೈಗೊಳ್ಳಲು ಭೂಮಾಲೀಕರು ಮತ್ತು ಡೆವಲಪರ್‌ಗಳ ನಡುವಿನ ಸಹಯೋಗವನ್ನು ಸುಗಮಗೊಳಿಸುತ್ತದೆ. ಭಾರತದಲ್ಲಿ, ಜೆಡಿಎಗಳು ವಿವಿಧ ಕ್ಷೇತ್ರಗಳಲ್ಲಿ ರಿಯಲ್ ಎಸ್ಟೇಟ್ ಅಭಿವೃದ್ಧಿಗೆ ಪ್ರಚಲಿತ ವಿಧಾನವಾಗಿದೆ.

ಹೆಚ್ಚುವರಿಯಾಗಿ, ನಿರ್ಮಾಣ ಹಂತದಲ್ಲಿರುವ ಆಸ್ತಿಗಳ ಬಗ್ಗೆ ಕೌನ್ಸಿಲ್ ಉದ್ದೇಶಪೂರ್ವಕವಾಗಿ ಚರ್ಚಿಸಬಹುದು.ನಿರ್ಮಾಣ ಹಂತದಲ್ಲಿರುವ ಆಸ್ತಿಗಳ ಮೇಲಿನ ಜಿಎಸ್‌ಟಿ ದರಗಳನ್ನು ಕಡಿಮೆ ಮಾಡುವ ಪರವಾಗಿ ರಿಯಲ್ ಎಸ್ಟೇಟ್ ಸಮಿತಿಯು ವರದಿ ನೀಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ವೆನೆಜುವೆಲಾ ಪರಿಸ್ಥಿತಿ ನಿಮಗೂ ಬರಬಹುದು.. ತಡ ಮಾಡದೇ ನಮ್ ಜೊತೆ ಒಪ್ಪಂದ ಮಾಡ್ಕೊಳ್ಳಿ': ಕ್ಯೂಬಾಗೂ Donald Trump ಎಚ್ಚರಿಕೆ!

ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ತ್ರಿಪುರದಲ್ಲಿ ಎರಡು ಸಮುದಾಯಗಳ ನಡುವೆ ಘರ್ಷಣೆ: ಉನಕೋಟಿಯಲ್ಲಿ ಮಸೀದಿ-ಮುಸ್ಲಿಂ ಅಂಗಡಿಗಳಿಗೆ ಬೆಂಕಿ

ಒಂದು ವಾರದ ಚಿಕಿತ್ಸೆ ಬಳಿಕ ಆಸ್ಪತ್ರೆಯಿಂದ ಸೋನಿಯಾ ಗಾಂಧಿ ಡಿಸ್ಚಾರ್ಜ್!

Tubelight in his head: ಹಿಮಂತಾ ಬಿಸ್ವಾ ಶರ್ಮಾ ವಿರುದ್ಧ AIMIM ಮುಖ್ಯಸ್ಥ ಓವೈಸಿ ಕಿಡಿ! ಏನಿದು ವಿವಾದ?

SCROLL FOR NEXT