ಭಾರತೀಯ ಷೇರು ಮಾರುಕಟ್ಟೆ 
ವಾಣಿಜ್ಯ

Indian Stock Market: Sensex 721 ಅಂಕ ಕುಸಿತ, ಪವರ್ ಗ್ರಿಡ್ ಷೇರುಗಳ ಮೌಲ್ಯ ಗಣನೀಯ ಇಳಿಕೆ!

ಶುಕ್ರವಾರ ಭಾರತೀಯ ಷೇರುಮಾರುಕಟ್ಟೆ ಗಣನೀಯ ಪ್ರಮಾಣದ ಕುಸಿತ ಕಂಡಿದ್ದು, ಷೇರುಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ರೆಡ್ ನಲ್ಲಿ ವಹಿವಾಟು ಅಂತ್ಯಗೊಳಿಸಿದೆ.

ಮುಂಬೈ: ಭಾರತೀಯ ಷೇರುಮಾರುಕಟ್ಟೆ ವಾರದ ಕೊನೆಯ ದಿನ ಭಾರಿ ಕುಸಿತ ಕಂಡಿದ್ದು, ಷೇರುಮಾರುಕಟ್ಟೆಯ ಎರಡೂ ಸೂಚ್ಯಂಕಗಳು ರೆಡ್ ನಲ್ಲಿ ವಹಿವಾಟು ಅಂತ್ಯಗೊಳಿಸಿದೆ.

ಶುಕ್ರವಾರ ಭಾರತೀಯ ಷೇರುಮಾರುಕಟ್ಟೆ ಗಣನೀಯ ಪ್ರಮಾಣದ ಕುಸಿತ ಕಂಡಿದ್ದು, ಷೇರುಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ರೆಡ್ ನಲ್ಲಿ ವಹಿವಾಟು ಅಂತ್ಯಗೊಳಿಸಿದೆ.

ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ಶೇ.0.88ರಷ್ಟು ಇಳಿಕೆ ಕಂಡಿದ್ದರೆ, ನಿಫ್ಟಿ ಕೂಡ ಶೇ.0.90ರಷ್ಟು ಕುಸಿತ ದಾಖಲಿಸಿದೆ.

ಸೆನ್ಸೆಕ್ಸ್ ಇಂದು ಬರೊಬ್ಬರಿ 721.08 ಅಂಕಗಳ ಕುಸಿತದೊಂದಿಗೆ 81,463.09 ಅಂಕಗಳಿಗೆ ಇಳಿಕೆಯಾಗಿದ್ದರೆ, ನಿಫ್ಟಿ 225.10 ಅಂಕಗಳ ಇಳಿಕೆಯೊಂದಿಗೆ 24,837.00 ಅಂಕಗಳಿಗೆ ಕುಸಿತವಾಗಿ ದಿನದ ಮತ್ತು ವಾರದ ವಹಿವಾಟು ಅಂತ್ಯಗೊಳಿಸಿದೆ.

ಇಂದಿನ ವಹಿವಾಟಿನಲ್ಲಿ ಪವರ್ ಗ್ರಿಡ್ ಷೇರುಗಳ ಮೌಲ್ಯ ಗಣನೀಯ ಕುಸಿತಕಂಡಿದ್ದು, ಇದಲ್ಲದೆ ತಂತ್ರಜ್ಞಾನ ವಲಯದ ಷೇರುಗಳ ಸೇರಿದಂತೆ ಬಹುತೇಕ ಎಲ್ಲ ವಲಯಗಳ ಷೇರುಗಳ ಮೌಲ್ಯದಲ್ಲಿ ಇಳಿಕೆ ಕಂಡುಬಂದಿದೆ. ಬಜಾಜ್ ಫೈನಾನ್ಸ್ ಷೇರು ಮೌಲ್ಯದಲ್ಲಿ ಬರೊಬ್ಬರಿ ಶೇ.4.73 ರಷ್ಚು ಕುಸಿತವಾಗಿದ್ದು ದಿನದ ಅತಿ ದೊಡ್ಡ ನಷ್ಟ ದಾಖಲಾಗಿದೆ.

ಜೂನ್ ತ್ರೈಮಾಸಿಕ ಗಳಿಕೆ ಘೋಷಣೆಯ ನಂತರ ಬಜಾಜ್ ಫೈನಾನ್ಸ್ ಶೇ. 4.73 ರಷ್ಟು ಕುಸಿದಿದೆ. ಪವರ್ ಗ್ರಿಡ್, ಇನ್ಫೋಸಿಸ್, ಟೆಕ್ ಮಹೀಂದ್ರಾ, ಬಜಾಜ್ ಫಿನ್‌ಸರ್ವ್, ಟ್ರೆಂಟ್, ಟಾಟಾ ಮೋಟಾರ್ಸ್, ಎನ್‌ಟಿಪಿಸಿ ಮತ್ತು ಅದಾನಿ ಪೋರ್ಟ್ಸ್ ಸಹ ಹಿಂದುಳಿದಿವೆ. ಆದಾಗ್ಯೂ, ಸನ್ ಫಾರ್ಮಾ ಮತ್ತು ಭಾರ್ತಿ ಏರ್‌ಟೆಲ್ ಲಾಭ ಗಳಿಸಿವೆ.

ಯಾರಿಗೆ ಲಾಭ? ಯಾರಿಗೆ ನಷ್ಟ?

ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ನಲ್ಲಿ ಪಟ್ಟಿ ಮಾಡಲಾದ ಸಂಸ್ಥೆಗಳ ಪೈಕಿ ಪವರ್ ಗ್ರಿಡ್, ಇನ್ಫೋಸಿಸ್, ಟೆಕ್ ಮಹೀಂದ್ರಾ, ಬಜಾಜ್ ಫಿನ್‌ಸರ್ವ್, ಟ್ರೆಂಟ್, ಟಾಟಾ ಮೋಟಾರ್ಸ್, ಎನ್‌ಟಿಪಿಸಿ ಮತ್ತು ಅದಾನಿ ಪೋರ್ಟ್ಸ್ ಸಂಸ್ಥೆಯ ಷೇರುಗಳು ನಷ್ಟ ಕಂಡಿದೆ. ಅಂತೆಯೇ ಸನ್ ಫಾರ್ಮಾ ಮತ್ತು ಭಾರ್ತಿ ಏರ್‌ಟೆಲ್ ಸಂಸ್ಥೆಯ ಷೇರುಗಳು ಲಾಭಾಂಶ ಕಂಡಿವೆ.

ವಿದೇಶಿ ನಿಧಿಯ ನಿರಂತರ ಹೊರಹರಿವಿನ ನಡುವೆ ಹಣಕಾಸು, ಐಟಿ ಮತ್ತು ತೈಲ ಮತ್ತು ಅನಿಲ ಷೇರುಗಳಲ್ಲಿ ಭಾರೀ ಮಾರಾಟ ಕಂಡ ಹಿನ್ನಲೆಯಲ್ಲಿ ಷೇರು ಮಾರುಕಟ್ಟೆ ಕುಸಿದಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಸನಾತನಿಗಳ ಸಹವಾಸದಿಂದ ದೂರ ಇರಿ; RSS, ಸಂಘ ಪರಿವಾರದ ಬಗ್ಗೆ ಜಾಗರೂಕರಾಗಿರಿ: ಜನತೆಗೆ ಸಿಎಂ ಸಿದ್ದರಾಮಯ್ಯ ಕರೆ

BBK12: ರಕ್ಷಿತಾ ಶೆಟ್ಟಿಗೆ S*** ಪದ ಬಳಸಿದ್ದೇಕೆ ಅಶ್ವಿನಿ ಗೌಡ; ಸ್ಪರ್ಧಿಗಳ ಮುಖವಾಡ ಕಳಚಿದ ಸುದೀಪ್, Video!

ಮಣಿಕಂಠ ರಾಥೋಡ್ ಬಹಿರಂಗ ಬೆದರಿಕೆ! ಬಿಜೆಪಿ ನಾಯಕರಿಗೆ 'ಸವಾಲು' ಹಾಕಿದ ಪ್ರಿಯಾಂಕ್ ಖರ್ಗೆ!

ಜಾರ್ಖಂಡ್: 'ಮಿತಿ ಮೀರಬೇಡಿ, ನ್ಯಾಯಾಂಗದ ಬಗ್ಗೆ ದೇಶ ಹೊತ್ತಿ ಉರೀತಿದೆ'; ಹೈಕೋರ್ಟ್ ಜಡ್ಜ್ ಗೇ ಝಾಡಿಸಿದ ವಕೀಲ! Video

ದೀಪಾವಳಿಗೆ ನಿಮ್ಮ ಕುಟುಂಬ, ಸ್ನೇಹಿತರಿಗೆ FASTag ವಾರ್ಷಿಕ ಪಾಸ್ ಗಿಫ್ಟ್ ನೀಡಿ!

SCROLL FOR NEXT