ಗಾಯಕ ಮಿಕಾ ಸಿಂಗ್ 
ಬಾಲಿವುಡ್

ವೈದ್ಯರಿಗೆ ಕಪಾಳಮೋಕ್ಷ ಪ್ರಕರಣ: ಗಾಯಕ ಮಿಕಾ ಸಿಂಗ್ ಬಂಧನ, ಬಿಡುಗಡೆ

ಸಂಗೀತ ಸಮಾರಂಭದಲ್ಲಿ ವೈದ್ಯರೊಬ್ಬರಿಗೆ ಕಪಾಳ ಮೋಕ್ಷ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ಖ್ಯಾತ ಹಿನ್ನಲೆಯ ಗಾಯಕ ಮಿಕಾ ಸಿಂಗ್ ಅವರನ್ನು ದೆಹಲಿ ಪೊಲೀಸರು ಬಂಧಿಸಿ ಬಳಿಕ ಬಿಡುಗಡೆ ಮಾಡಿದ ಘಟನೆ ನಡೆದಿದೆ.

ನವದೆಹಲಿ: ಸಂಗೀತ ಸಮಾರಂಭದಲ್ಲಿ ವೈದ್ಯರೊಬ್ಬರಿಗೆ ಕಪಾಳ ಮೋಕ್ಷ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ಖ್ಯಾತ ಹಿನ್ನಲೆಯ ಗಾಯಕ ಮಿಕಾ ಸಿಂಗ್ ಅವರನ್ನು ದೆಹಲಿ ಪೊಲೀಸರು ಬಂಧಿಸಿ ಬಳಿಕ ಬಿಡುಗಡೆ ಮಾಡಿದ ಘಟನೆ ನಡೆದಿದೆ.

ಸಂಗೀತ ಕಾರ್ಯಕ್ರಮದಲ್ಲಿ ವೈದ್ಯರೊಬ್ಬರ ಕಪಾಳಕ್ಕೆ ಹೊಡೆದ ಆರೋಪ ಎದುರಿಸುತ್ತಿದ್ದ ಮಿಕಾ ಸಿಂಗ್ ಅವರನ್ನು ದೆಹಲಿಯ ಇಂಧ್ರಪುರಿ ಪೊಲೀಸರು ವಿಚಾರಣೆಗಾಗಿ ಇಂದು ಬರ ಹೇಳಿದ್ದರು. ಹುಟ್ಟಹಬ್ಬದ ಸಂಭ್ರಮದಲ್ಲಿದ್ದ ಮಿಕಾ ಸಿಂಗ್ ಅವರು ಕೂಡ ಕೇವಲ ವಿಚಾರಣೆ ಎಂದಷ್ಟೇ ಭಾವಿಸಿ ಠಾಣೆಗೆ ಹೋಗಿದ್ದರು. ಆದರೆ ಠಾಣೆಗೆ ಹೋದ ಮಿಕಾ ಸಿಂಗ್ ಅವರಿಗೆ ಪೊಲೀಸರು ದೊಡ್ಡ ಶಾಕ್ ಅನ್ನೇ ನೀಡಿದ್ದರು.

ಠಾಣೆಗೆ ಬಂದ ಮಿಕಾ ಸಿಂಗ್ ಅವರನ್ನು ಕೂಡಲೇ ಪೊಲೀಸರು ಬಂಧಿಸಿದರು. ಅಲ್ಲದೆ ಬಂಧಿತ ಮಿಕಾ ಸಿಂಗ್ ಅವರನ್ನು ಪೊಲೀಸರು ಕೋರ್ಟ್ ಗೆ ಹಾಜರುಪಡಿಸಿದ್ದು,  ನ್ಯಾಯಾಲಯ ಮಿಕಾ ಸಿಂಗ್ ಅವರಿಗೆ ಷರತ್ತು ಬದ್ಧ ಜಾಮೀನು ನೀಡಿದೆ. 20 ಸಾವಿರ ರೂಪಾಯಿ ವೈಯಕ್ತಿಕ ಬಾಂಡ್ ಆಧಾರದ ಮೇಲೆ ಕೋರ್ಟ್ ಮಿಕಾ ಸಿಂಗ್ ಅವರಿಗೆ ಜಾಮೀನು ನೀಡಿ, ಬಿಡುಗಡೆ ಮಾಡಿದೆ ಎಂದು ತಿಳಿದುಬಂದಿದೆ.

ದೆಹಲಿಯಲ್ಲಿ 2015ರ ಏಪ್ರಿಲ್ 12ರಂದು ದೆಹಲಿಯ ಇಂಧ್ರಪುರಿಯ ಪೂಸಾ ಇನ್ಸ್ಟಿಟ್ಯೂಟ್ ಮೇಳ ಮೈದಾನದಲ್ಲಿ ದೆಹಲಿ ನೇತ್ರ ಶಸ್ತ್ರಜ್ಞರ ಸಂಘದ ನೇರ ಪ್ರಸಾರದ ಸಂಗೀತ ಕಾರ್ಯಕ್ರಮದಲ್ಲಿ ಹಾಡುತ್ತಿದ್ದ ಗಾಯಕ ಮಿಕಾ ಸಿಂಗ್ ವೈದ್ಯರನ್ನು ವೇದಿಕೆ ಮೇಲೆ ಆಗಮಿಸುವಂತೆ ಹೇಳಿದ್ದರು. ರಸಸಂಜೆ ಕಾರ್ಯಕ್ರಮ ನಡೆಯುವಾಗ ಪ್ರೇಕ್ಷಕರನ್ನು ವೇದಿಕೆ ಮೇಲೆ ಕರೆದು ಏನಾದ್ರೂ ಚಟುವಟಿಕೆ ಮಾಡಿಸುತ್ತಾರೆ ಎಂದು ಭಾವಿಸಿದ್ದ ವೈದ್ಯ ಶ್ರೀಕಾಂತ್ ಕೂಡಾ ಮಿಕಾ ಕರೆದಾಗ ಸ್ಟೇಜ್ ಹತ್ತಿದ್ದಾರೆ. ಅದರೆ, ಮಿಕಾ ಮಾತನಾಡುತ್ತಾ ತೆಗೆದು ಬಾರಿಸಿದ್ದಾರೆ. ನಂತರ ತನ್ನ ಬೌನ್ಸರ್ ಪಡೆಗೆ ಈತನನ್ನು ಹೊರಕ್ಕೆ ಕರೆದುಕೊಂಡು ಹೋಗಿ ಎಂದಿದ್ದಾರೆ. ಈ ದೃಶ್ಯಾವಳಿಗಳು ಕೆಲ ತಿಂಗಳುಗಳಿಂದ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT