ಜಬ್ ವಿ ಮೆಟ್ ಚಿತ್ರದ ಸ್ಟಿಲ್ 
ಬಾಲಿವುಡ್

ಶಾಹಿದ್ ಗೆ ಮದುವೆ -ಕರೀನಾಗೆ ಖುಷಿ

ಶಾಹಿದ್ ಮದುವೆಗೆ ಹೋಗುವಿರಾ ಎಂದು ಪ್ರಶ್ನಿಸಿದಾಗ, ಮದುವೆಗೆ ಆಮಂತ್ರಣ ನೀಡಿದರೆ ಖಂಡಿತಾ ಹೋಗುತ್ತೇನೆ ಎಂದರು...

ಮುಂಬೈ:ಕಪೂರ್ ಎಂಬ 'ಸರ್ ನೇಮ್' ಇಟ್ಟುಕೊಂಡು   ಬಾಲಿವುಡ್ ನ ತೆರೆಯ ಮೇಲೆ ಮತ್ತು ತೆರೆಯ ಹೊರಗೆ ಒಂದಷ್ಟು ವರ್ಷ ಪ್ರಣಯ ಹಕ್ಕಿಗಳಂತೆ ಓಡಾಡಿದ್ದ ಈ ಜೋಡಿ ಅಭಿಮಾನಿಗಳಿಗೆ ಇಷ್ಟವಾಗಿದ್ದರು. ಮದುವೆಯೇ ಆಗಿಬಿಡುತ್ತಾರೆ ಎಂದು ಜನ ಮಾತಾಡಿಕೊಂಡಿದ್ದರು. ಯಾವಾಗ ಇವರಿಬ್ಬರ 'ಜಬ್ ವಿ ಮೆಟ್' ಸಿನಿಮಾ ಬಿಡುಗಡೆಯಾಗಿ ಸೂಪರ್ ಹಿಟ್ ಆದ್ಮೇಲೆ ಅದೇನಾಯ್ತೋ ಗೊತ್ತಿಲ್ಲ, ಈ ಜೋಡಿ ನಾನೊಂದು ತೀರ, ನೀನೊಂದು ತೀರ ಅಂತ ದೂರಾಯ್ತು. ಕರೀನಾ ಸೈಫ್ ಆಲಿಖಾನ್ ತೆಕ್ಕೆಗೆ ಸೇರಿಕೊಂಡರು.

ಇತ್ತ ಶಾಹಿದ್ ಕಪೂರ್ ಮಂಕಾದಂತೆ ಕಂಡರು. ಆದರೆ ಇತ್ತೀಚೆಗೆ ಕೆರಿಯರ್ ನಲ್ಲಿಯೂ ಉತ್ತುಂಗದಲ್ಲಿರುವ ಶಾಹಿದ್ ದೆಲ್ಲಿಯ ಯುವತಿ ಮೀರಾ ರಜಪೂತ್ ಎಂಬಾಕೆಯನ್ನು ಮುಂದಿನ ತಿಂಗಳು ಕೈ ಹಿಡಿಯಲಿದ್ದಾರೆ.

ಈ ಸಂತೋಷದ ಸಮಾಚಾರವನ್ನು ಸ್ವತಹ ಶಾಹಿದ್ ತನ್ನ ಮಾಜಿ ಪ್ರಿಯಕರೆ ಕರೀನಾ ಕಪೂರ್ ಗೆ ಫಸ್ಟ್ ತಿಳಿಸಿದ್ದಂತೆ. ಹಾಗಂತ ಕರೀನಾನೇ ಇತ್ತೀಚೆಗೆ ಮಾಧ್ಯಮದ ಮುಂದೆ ಹೇಳಿಕೊಂಡಳು. ಮಾಧ್ಯಮಕ್ಕೆ ಗೊತ್ತಾಗುವ ಮೊದಲೇ ನನಗೆ ಶಾಹಿದ್ ಮದುವೆ ಸುದ್ದಿ ಸಿಕ್ಕಿದೆ. ಆತ ನನಗೇ ಮೊದಲು ತಿಳಿಸಿದ್ದು. ಕೆಲ ತಿಂಗಳ ಹಿಂದೆ ಯಶ್ ರಾಜ್ ಫಿಲ್ಮ್ ಸ್ಟುಡಿಯೋ ಫೆಮಿನಾ ಕಾರ್ಯಕ್ರಮದ ವೇಳೆ ಸಿಕ್ಕಿದ ಶಾಹಿದ್ ನಾನು ಮದುವೆಯಾಗುತ್ತಿದ್ದೇನೆ ಎಂದ.ನನಗೆ ಅತೀವ ಸಂತೋಷವಾಯಿತು. ನಾನು ಅವನಿಗೆ ಧನ್ಯವಾದ ಹೇಳಿದೆ, ವೃತ್ತಿಯಲ್ಲಿಯೂ ಇತ್ತೀಚೆಗೆ ಯಶಸ್ಸು ಕಾಣುತ್ತಿರುವ  ಶಾಹಿದ್ ಮದುವೆ ಮಾಡಿಕೊಳ್ಳುವ ಮೂಲಕ ಜೀವನದಲ್ಲಿ ಉತ್ತಮ ನಿರ್ಧಾರ ತೆಗೆದುಕೊಳ್ಳುತ್ತಿದ್ದಾನೆ ಎಂದು ನನಗನ್ನಿಸುತ್ತದೆ. ಅವನಿಗೆ ಒಳ್ಳೆಯದಾಗಲಿ ಎಂದು ಆಶಿಸುತ್ತೇನೆ ಎಂದು ಹರಸಿದ್ದಾಳೆ ಕರೀನಾ.

ಶಾಹಿದ್ ಇತ್ತೀಚೆಗೆ 'ಹೈದರ್' ಚಿತ್ರದ ನಟನೆಗೆ ಪ್ರಶಸ್ತಿ ಪಡೆದುಕೊಂಡಿರುವುದಕ್ಕೆ ಕರೀನಾಗೆ ಖುಷಿಯಾಗಿದೆ. ಆತನೊಂದಿಗೆ ನಟಿಸಲು ಸಿದ್ದಳಿರುವುದಾಗಿ ಹೇಳಿದ್ದಾಳೆ.
ದೀರ್ಘ ವರ್ಷಗಳ ಬಳಿಕ ಮತ್ತೆ ಇವರಿಬ್ಬರೂ 'ಉಡ್ತಾ ಪಂಜಾಬಾ' ಸಿನಿಮಾದಲ್ಲಿ ಒಟ್ಟಾಗಿ ನಟಿಸುತ್ತಿದ್ದಾರೆ. ಆದರೆ ಒಬ್ಬರಿಗೊಬ್ಬರು ರೊಮ್ಯಾನ್ಸ್ ಮಾಡುವುದಿಲ್ಲ. ಅಲಿಯಾ ಭಟ್  ಮತ್ತು ಪಂಜಾಬಿ ನಟ ದಿಲ್ಜಿತ್ ದೊಸಂಕ್ ಕೂಡ ಇದರಲ್ಲಿ ನಟಿಸುತ್ತಿದ್ದಾರೆ. ಪಂಜಾಬ್ ನಲ್ಲಿ ಮಾದಕ ವಸ್ತುಗಳ ಸಮಸ್ಯೆ ಬಗ್ಗೆ ಚಿತ್ರ ಒಳಗೊಂಡಿದೆ.

ನಾನು ಮತ್ತು ಶಾಹಿದ್ ಈ ಚಿತ್ರದಲ್ಲಿ ಒಟ್ಟಾಗಿ ನಟಿಸುವುದಕ್ಕೆ ಅಷ್ಟು ಉತ್ತಮವಾದ ಕಥೆ ಕಾರಣವಾಗಿದೆ. ನನ್ನ ಪಾತ್ರವೂ ಉತ್ತಮವಾಗಿದ್ದು, ಅಭಿನಯಿಸುವಾಗ ಖುಷಿ ಎನಿಸುತ್ತದೆ. ಉಡ್ತಾ ಪಂಜಾಬಾ' ಚಿತ್ರ ಹಿಟ್ ಆಗುವ ವಿಶ್ವಾಸ ಕರೀನಾ ಮಾತುಗಳಲ್ಲಿದ್ದವು.
 ಶಾಹಿದ್ ಮದುವೆಗೆ ಹೋಗುವಿರಾ ಎಂದು ಪ್ರಶ್ನಿಸಿದಾಗ, ಮದುವೆಗೆ ಆಮಂತ್ರಣ ನೀಡಿದರೆ ಖಂಡಿತಾ ಹೋಗುತ್ತೇನೆ ಎಂದರು.

ಮೂರು ವರ್ಷಗಳ ಹಿಂದೆ ಸೈಫ್ ಆಲಿಖಾನ್ ಮದುವೆಯಾಗಿ ಪಠೌಡಿ ಮನೆತನದ ಸೊಸೆಯಾಗಿರುವ ಕರೀನಾಗೆ ಮದುವೆ ಎಂಬ ಸಾಮಾಜಿಕ ವ್ಯವಸ್ಥೆ ಬಗ್ಗೆ ಬಲವಾದ ನಂಬಿಕೆ ಇದೆಯಂತೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT