ನಟ ನವಾಜುದ್ದೀನ್ ಸಿದ್ದಿಕಿ ಮತ್ತು ನಿರ್ದೇಶಕ ಅನುರಾಗ್ ಕಶ್ಯಪ್ 
ಬಾಲಿವುಡ್

'ರಾಮನ್ ರಾಘವ್ ೨.೦' ಮೂಲಕ ಅನುರಾಗ್ ಕಶ್ಯಪ್ ಫಾರ್ಮ್ ಗೆ ಹಿಂದಿರುಗಲಿದ್ದಾರೆ: ನವಾಜುದ್ದೀನ್

ನಿರ್ದೇಶಕ ಅನುರಾಗ್ ಕಶ್ಯಪ್ ಅವರ ಕೊನೆಯ ಚಿತ್ರ 'ಬಾಂಬೆ ವೆಲ್ವೆಟ್' ಹುಟ್ಟಿಸಿದ್ದ ನಿರೀಕ್ಷೆಗಳನ್ನು ಉಳಿಸಿಕೊಳ್ಳಲು ವಿಫಲವಾಗಿರಬಹುದು ಆದರೆ ನಿರ್ದೇಶಕನ ಗೆಳೆಯ ಮತ್ತು ನಟ ನವಾಜುದ್ದೀನ್ ಸಿದ್ದಿಕಿ

ಮುಂಬೈ: ನಿರ್ದೇಶಕ ಅನುರಾಗ್ ಕಶ್ಯಪ್ ಅವರ ಕೊನೆಯ ಚಿತ್ರ 'ಬಾಂಬೆ ವೆಲ್ವೆಟ್' ಹುಟ್ಟಿಸಿದ್ದ ನಿರೀಕ್ಷೆಗಳನ್ನು ಉಳಿಸಿಕೊಳ್ಳಲು ವಿಫಲವಾಗಿರಬಹುದು ಆದರೆ ನಿರ್ದೇಶಕನ ಗೆಳೆಯ ಮತ್ತು ನಟ ನವಾಜುದ್ದೀನ್ ಸಿದ್ದಿಕಿ ಪ್ರಕಾರ 'ರಾಮನ್ ರಾಘವ್ ೨.೦' ಮೂಲಕ ಅನುರಾಗ್ ಕಶ್ಯಪ್ ಫಾರ್ಮ್ ಗೆ ಹಿಂದಿರುಗಲಿದ್ದಾರೆ ಎಂದಿದ್ದಾರೆ.

ಸೈಕೋ ರಾಘವ ಎಂದೆ ಹೆಸರಾಗಿದ್ದ ರಾಮನ್ ರಾಘವ್ ೬೦ ರ ದಶಕದ ಮುಂಬೈನ ಸರಣಿ ಕೊಲೆಗಾರ.

ಕೊಲೆಗಾರ ರಾಘವ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಪ್ರಶಸ್ತಿ ವಿಜೇತ ನಟ ನವಾಜುದ್ದೀನ್ ಇದು ಕಶ್ಯಪ್ ಅವರ ಅತ್ಯುತ್ತಮ ಸಿನೆಮಾಗಳಲ್ಲೊಂದು ಎಂದಿದ್ದಾರೆ.

"ರಾಮನ್ ರಾಘವ್ ಮೂಲಕ ಅನುರಾಗ್ ಕಶ್ಯಪ್ ಖಂಡಿತ ಮತ್ತೆ ಮಿಂಚಲಿದ್ದಾರೆ. ಅದರ ಬಗ್ಗೆ ನನಗೆ ವಿಶ್ವಾಸವಿದೆ. ಇದು ಅವರ ಅತ್ಯುತ್ತಮ ಸಿನೆಮಾಗಳಲ್ಲಿ ಒಂದು ಎಂದು ವಿಶ್ವಾಸದಿಂದ ಹೇಳಬಲ್ಲೆ. ಇದಕ್ಕಾಗಿ ಅವರು ಬಹಳ ಬೆವರು ಸುರಿಸಿದ್ದಾರೆ" ಎಂದು ಕೂಡ ನವಾಜುದ್ದೀನ್ ಹೇಳಿದ್ದಾರೆ.

೪೧ ವರ್ಷದ ನಟ ಈ ಮೊದಲು ಕಶ್ಯಪ್ ಅವರ 'ಬ್ಲಾಕ್ ಫ್ರೈಡೆ' ಮತ್ತು 'ಗ್ಯಾಂಗ್ಸ್ ಆಫ್ ವಸೀಪುರ್' ಸಿನೆಮಾಗಳಲ್ಲೂ ಕೆಲಸ ಮಾಡಿದ್ದಾರೆ.

"ಅನುರಾಗ್ ಜೊತೆಗೆ ಕೆಲಸ ಮಾಡುವುದೆಂದರೆ ಹೊಸದನ್ನು ಮತ್ತು ಗೊತ್ತಿಲ್ಲದ್ದನ್ನು ಹುಡುಕುವ ಅನುಭವ. ಅದು 'ದೇವ್ ಡಿ' ನಲ್ಲಿ ಒಂದು ಹಾಡಿನಲ್ಲಿ ಕಾಣಿಸಿಕೊಳ್ಳುವುದಾಗಲೀ ಅಥವಾ ರಾಮನ್ ರಾಘವ್ ಪಾತ್ರವಾಗಲಿ ಅನಿರೀಕ್ಷಿತವಾದದ್ದನ್ನು ಅವರು ನನಗೆ ನೀಡುತ್ತಾರೆ" ಎಂದು ನಿರ್ದೇಶಕರನ್ನು ಮನಸಾರೆ ಹೊಗಳಿದ್ದಾರೆ.

ವಿಕಿ ಕೌಶಲ್ ಕೂಡ ನಟಿಸಿರುವ 'ರಾಮನ್ ರಾಘವ್ ೨.೦' ಕಾನ್ ಅಂತರಾಷ್ಟ್ರೀಯ ಸಿನೆಮೋತ್ಸವದಲ್ಲಿ ಕೂಡ ಪ್ರದರ್ಶನ ಕಾಣಲಿದೆ. ಮತ್ತು ದೇಶದಾದ್ಯಂತ ಜೂನ್ ೨೪ಕ್ಕೆ ಬಿಡುಗಡೆಯಾಗಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಏನೇ ಆದ್ರೂ, ದಿನದ ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥರು ಹಿಂಗ್ಯಾಕಂದ್ರು?

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟದ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

Theaterisation: 'ಥಿಯೇಟರ್ ಕಮಾಂಡ್‌' ರಚನೆ: ಪ್ರಯತ್ನದಲ್ಲಿ ಪ್ರಗತಿ ಸಾಧಿಸಲಾಗುತ್ತಿದೆಯೇ? ಆಡ್ಮಿರಲ್ ಡಿಕೆ ತ್ರಿಪಾಠಿ ಹೇಳಿದ್ದು ಹೀಗೆ...

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

SCROLL FOR NEXT