ಅಕ್ಷಯ್ ಕುಮಾರ್ 
ಬಾಲಿವುಡ್

ಬೆಂಗಳೂರು ಲೈಂಗಿಕ ಕಿರುಕುಳ ವಿರುದ್ಧ ಅಕ್ಷಯ್ ಕುಮಾರ್ ಆಕ್ರೋಶ, ಭಾವನಾತ್ಮಕ ವೀಡಿಯೊ ಸಂದೇಶ

ಬೆಂಗಳೂರಿನ ಎಂಜಿ ರಸ್ತೆ ಮತ್ತು ಬ್ರಿಗೇಡ್ ರಸ್ತೆಗಳಲ್ಲಿ ಹೊಸ ವರ್ಷಾಚರಣೆ ವೇಳೆ ಯುವತಿಯರ ಮೇಲೆ ನಡೆದ ಸಾಮೂಹಿಕ ಲೈಂಕಿಗ ದೌರ್ಜನ್ಯ ದೇಶವ್ಯಾಪ್ತಿ ಸುದ್ದಿಯಾಗಿದ್ದು...

ಬೆಂಗಳೂರಿನ ಎಂಜಿ ರಸ್ತೆ ಮತ್ತು ಬ್ರಿಗೇಡ್ ರಸ್ತೆಗಳಲ್ಲಿ ಹೊಸ ವರ್ಷಾಚರಣೆ ವೇಳೆ ಯುವತಿಯರ ಮೇಲೆ ನಡೆದ ಸಾಮೂಹಿಕ ಲೈಂಕಿಗ ದೌರ್ಜನ್ಯ ದೇಶವ್ಯಾಪ್ತಿ ಸುದ್ದಿಯಾಗಿದ್ದು, ಈ ಘಟನೆ ವಿರುದ್ಧ ಬಾಲಿವುಡ್ ನಟ ಅಕ್ಷಯ್ ಕುಮಾರ್ ಆಕ್ರೋಶ್ ವ್ಯಕ್ತಪಡಿಸಿದ್ದಾರೆ. 
ಒಂದು ಮಾತು ಹೇಳ್ತೆನೆ, ಮನಸ್ಸಿನಿಂದ ಹೇಳ್ತಿದೀನಿ ಇಂದು ನಾನು ಮನುಷ್ಯ ಎಂದು ಹೇಳಿಕೊಳ್ಳೋಕೆ ನಾಚಿಕೆಯಾಗುತ್ತಿದೆ. ಹೊಸ ವರ್ಷಾಚರಣೆ ವೇಳೆ ಬೆಂಗಳೂರಿನಲ್ಲಿ ನಡೆದ ಯುವತಿಯರ ಮೇಲಿನ ಲೈಂಗಿಕ ದೌರ್ಜನ್ಯ ನಿಜಕ್ಕೂ ಅಕ್ಷಮ್ಯ. ಇಂತಹ ಘಟನೆಗಳು ಕಂಡರೇ ನಿಮಗೆ ಎನ್ನನಿಸುತ್ತದೆಯೋ ಗೊತ್ತಿಲ್ಲ ನನಗಂತು ಆಕ್ರೋಶ ಉಕ್ಕುತ್ತಿದೆ. ನಾನು ಒಬ್ಬ ಮಗಳ ತಂದೆಯಾಗಿದ್ದು ಸಮಾಜ ಹುಡುಗಿಯರಿಗೆ ಭದ್ರತೆ ನೀಡಲು ಸಾಧ್ಯವಾಗದೇ ಇದ್ದರೆ ಅಂತವರು ತಾವು ಮನುಷ್ಯರು ಅಂತ ಹೇಳಿಕೊಳ್ಳುವ ಯಾವುದೇ ಹಕ್ಕಿಲ್ಲ. ಇನ್ನೊಂದು ನಾಚಿಕೆಗೇಡಿನ ವಿಷಯವೆಂದರೆ ಕೆಲವರು ಇಂತಹ ಲೈಂಗಿಕ ದೌರ್ಜನ್ಯಗಳಿಗೆ ತಮ್ಮದೇ ವಿಡಂಬಣೆಯನ್ನು ಮಾಡುತ್ತಾರೆ. ಹುಡುಗಿಯರು ಹೊರಗಡೆ ಹೋಗುವಾಗ ಚಿಕ್ಕಪುಟ್ಟ ಉಡುಪುಗಳನ್ನು ಹುಡುತ್ತಾರೆ. ಮಧ್ಯ ರಾತ್ರಿ ಹೊರಗಡೆ ತಿರುಗುವುದರಿಂದ ಇಂತಹ ಘಟನೆಗಳು ನಡೆಯುತ್ತವೆ ಅಂತ. ನೀವು ತಿಳ್ಕೊಳ್ಳಬೇಕಾಗಿರುವುದು ಪುಟ್ಟದಾಗಿರುವುದು ಉಡುಪಲ್ಲ ನಿಮ್ಮ ಮನಸ್ಥಿತಿ. ಇವತ್ತು ಬೆಂಗಳೂರಿನಲ್ಲಿ ಯುವತಿಯರ ಮೇಲೆ ನಡೆದಿರುವುದು ಮುಂದೆ ನಿಮ್ಮ ಅಕ್ಕ-ತಂಗಿ, ಮಗಳ ಮೇಲೆ ನಡೆಯಬಹುದು. ಲೈಂಗಿಕ ದೌರ್ಜನ್ಯ ನಡೆಸಿದರು ಅನ್ಯಗ್ರಹದಿಂದ ಬಂದವರಲ್ಲಾ, ನಮ್ಮ ನಿಮ್ಮೊಂದಿಗಿರುವವರು. ನಾವು ಜಾಗೃತರಾಗಲು ಈಗಲು ಸಮಯವಿದೆ. ಈ ದೇಶದ ಹೆಣ್ಣುಮಕ್ಕಳು ನಿಮಗೆ ದಿಟ್ಟ ಉತ್ತರ ನೀಡಲು ಮುಂದಾದರೇ ನಿಮ್ಮನ್ನು ರಕ್ಷಿಸಲು ಯಾರಿಂದಲೂ ಸಾಧ್ಯವಾಗುವುದಿಲ್ಲ. 
ಇದೇ ವೇಳೆ, ಹೆಣ್ಣುಮಕ್ಕಳಿಗೂ ನಾನು ಕೆಲವೊಂದು ಉಪಾಯಗಳನ್ನು ನೀಡುತ್ತೇನೆ. ನಾವು ಹುಡುಗರಿಗಿಂತ ಯಾವುದರಲ್ಲು ಕಡಿಮೆ ಇಲ್ಲ. ನಿಮ್ಮ ರಕ್ಷಣೆಗಾಗಿ ನೀವು ಏನು ಬೇಕಾದರೂ ಮಾಡಬಹುದು. ನಿಮ್ಮ ಮೇಲೆ ದೌರ್ಜನ್ಯ ನಡೆಸುವ ಹುಡುಗರನ್ನು ಮಣಿಸಲು ಮಾರ್ಶಲ್ ಆರ್ಟ್ಸ್ ನಲ್ಲಿ ಕೆಲ ವಿದ್ಯೆಗಳಿವೆ. ಅವುಗಳನ್ನು ಕಲಿಯಿರಿ ಆಗ ನಿಮ್ಮ ಮೇಲೆ ಯಾರು ದೌರ್ಜನ್ಯ ಹೆದರುತ್ತಾರೆ ಎಂದು ಅಕ್ಷಯ್ ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?