ಪಠಾಣ್ ಸಿನಿಮಾ ಸ್ಟಿಲ್ 
ಬಾಲಿವುಡ್

'ಪಠಾಣ್ ದಿನ': ಶುಕ್ರವಾರ ದೇಶದಾದ್ಯಂತ ಎಲ್ಲಾ ಥಿಯೇಟರ್‌ಗಳಲ್ಲಿ 110 ರೂ.ಗೆ ಚಿತ್ರದ ಟಿಕೆಟ್ ಲಭ್ಯ

ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್, ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ನಟಿಸಿರುವ ಸ್ಪೈ ಆಕ್ಷನ್ ಚಿತ್ರ 'ಪಠಾನ್'ಗೆ ಶುಕ್ರವಾರ ಭಾರತದಾದ್ಯಂತ ಥಿಯೇಟರ್‌ಗಳಲ್ಲಿ ಕಡಿಮೆ ದರದಲ್ಲಿ ಟಿಕೆಟ್ ಲಭ್ಯವಿರುತ್ತದೆ. ಈ ಸಿನಿಮಾ ಭಾರತದಲ್ಲಿನ ಚಿತ್ರಮಂದಿರಗಳಾದ್ಯಂತ ಫ್ಲಾಟ್ 110 ರೂ.ಗೆ ಪ್ರದರ್ಶನಕ್ಕೆ ಲಭ್ಯವಿರುತ್ತದೆ.

ಮುಂಬೈ: ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್, ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ನಟಿಸಿರುವ ಸ್ಪೈ ಆಕ್ಷನ್ ಚಿತ್ರ 'ಪಠಾನ್'ಗೆ ಶುಕ್ರವಾರ ಭಾರತದಾದ್ಯಂತ ಥಿಯೇಟರ್‌ಗಳಲ್ಲಿ ಕಡಿಮೆ ದರದಲ್ಲಿ ಟಿಕೆಟ್ ಲಭ್ಯವಿರುತ್ತದೆ. ಈ ಸಿನಿಮಾ ಭಾರತದಲ್ಲಿನ ಚಿತ್ರಮಂದಿರಗಳಾದ್ಯಂತ ಫ್ಲಾಟ್ 110 ರೂ.ಗೆ ಪ್ರದರ್ಶನಕ್ಕೆ ಲಭ್ಯವಿರುತ್ತದೆ.

ಗಲ್ಲಾಪೆಟ್ಟಿಗೆಯಲ್ಲಿ ಚಿತ್ರದ ಪ್ರದರ್ಶನವನ್ನು ಆಚರಿಸಲು ಈ ಕ್ರಮವನ್ನು ಕೈಗೊಳ್ಳಲಾಗುತ್ತಿದೆ. ಏಕೆಂದರೆ, ಸಾಲು ಸಾಲು ಸಿನಿಮಾಗಳ ಸೋಲಿನಿಂದ ಕಂಗೆಟ್ಟಿದ್ದ ಹಿಂದಿ ಚಲನಚಿತ್ರೋದ್ಯಮವನ್ನು ಏಕಾಂಗಿಯಾಗಿ ರಕ್ಷಿಸಿದೆ ಮತ್ತು ವಿಶ್ವದಾದ್ಯಂತ ಬಾಕ್ಸ್‌ ಆಫೀಸ್‌ನಲ್ಲಿ 963 ಕೋಟಿ ರೂ. ಗಳನ್ನು ಸಂಗ್ರಹಿಸುವ ಮೂಲಕ ದಾಖಲೆ ಬರೆದಿದೆ.

ಹಿಂದಿ ಚಿತ್ರರಂಗದ ಇತಿಹಾಸದಲ್ಲಿ ಪಠಾಣ್ ವಿಶ್ವದಾದ್ಯಂತ ಅತಿ ಹೆಚ್ಚು ಗಳಿಕೆ ಮಾಡಿದ ಹಿಂದಿ ಚಲನಚಿತ್ರ ಎಂದು ಆಚರಿಸಲು, ಭಾರತದ ಅಗ್ರ ಥಿಯೇಟರ್ ಸರಪಳಿಗಳಾದ ಪಿವಿಆರ್, Inox, Cinepolis, Miraj, Movietime, MuktaA2 ಮತ್ತು ಇತರ ಚಿತ್ರಮಂದಿರಗಳು ಈ ಶುಕ್ರವಾರವನ್ನು 'ಪಠಾಣ್ ದಿನ' ಎಂದು ಆಚರಿಸಲು ಒಗ್ಗೂಡಿವೆ.

ಶಾರುಖ್ ಖಾನ್ ಅಭಿನಯದ 'ಪಠಾನ್' ಭಾರತದಲ್ಲಿ 498.85 ಕೋಟಿ (ಹಿಂದಿ - 481.35 ಕೋಟಿ ರೂ., ಡಬ್ಬಿಂಗ್- 17.50 ಕೋಟಿ ರೂ.) ರೂಪಾಯಿಗಳನ್ನು ಗಳಿಸಿದೆ.

ಯಶ್ ರಾಜ್ ಫಿಲ್ಮ್ಸ್ ನಿರ್ಮಿಸಿದ ಮತ್ತು ಸಿದ್ಧಾರ್ಥ್ ಆನಂದ್ ನಿರ್ದೇಶನದ ಈ ಚಿತ್ರವು, ತನ್ನ ಕುಟುಂಬದ ಮೇಲೆ ದಾಳಿ ಮಾಡಿ ಕೊಲ್ಲಲ್ಪಟ್ಟ ನಂತರ ಉಗ್ರವಾಗಿ ಹಿಂತಿರುಗಿದ ಮಾಜಿ RAW ಏಜೆಂಟ್‌ನ ದುಷ್ಟ ಯೋಜನೆಗಳಿಂದ ದೇಶವನ್ನು ಉಳಿಸಲು ಹೋರಾಡುವ ಪತ್ತೇದಾರಿಯ ಕಥೆಯನ್ನು ಹೇಳುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT