ಶಾರುಖ್ ಖಾನ್ 
ಬಾಲಿವುಡ್

ವಿವಾದದ ನಡುವೆಯೇ ಪಠಾಣ್‌ಗೆ ಯಶಸ್ಸು; ತಮ್ಮ ಮನೆಯ ಹೊರಗೆ ಅಭಿಮಾನಿಗಳಿಗೆ ಧನ್ಯವಾದ ಹೇಳಿದ ಶಾರುಖ್ ಖಾನ್

ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಅವರ ಇತ್ತೀಚಿನ ಚಿತ್ರ 'ಪಠಾನ್' ಕಳೆದ ವಾರ ಬಿಡುಗಡೆಯಾದಾಗಿನಿಂದ ಹೊಸ ದಾಖಲೆಗಳನ್ನು ಸೃಷ್ಟಿಸುತ್ತಿದೆ. ವಿವಾದಗಳ ನಡುವೆಯೂ ಪಠಾಣ್ ಯಶಸ್ಸು ಸಾಧಿಸುತ್ತಿದ್ದು, ಕಳೆದ ರಾತ್ರಿ ಶಾರುಖ್ ಅವರ ಬಾಂದ್ರಾ ಮನೆಯ ಹೊರಗೆ ಜಮಾಯಿಸಿದ್ದ ಹಲವಾರು ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದರು.

ಮುಂಬೈ: ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಅವರ ಇತ್ತೀಚಿನ ಚಿತ್ರ 'ಪಠಾನ್' ಕಳೆದ ವಾರ ಬಿಡುಗಡೆಯಾದಾಗಿನಿಂದ ಹೊಸ ದಾಖಲೆಗಳನ್ನು ಸೃಷ್ಟಿಸುತ್ತಿದೆ. ವಿವಾದಗಳ ನಡುವೆಯೂ ಪಠಾಣ್ ಯಶಸ್ಸು ಸಾಧಿಸುತ್ತಿದ್ದು, ಕಳೆದ ರಾತ್ರಿ ಶಾರುಖ್ ಅವರ ಬಾಂದ್ರಾ ಮನೆಯ ಹೊರಗೆ ಜಮಾಯಿಸಿದ್ದ ಹಲವಾರು ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದರು.

ಹಲವಾರು ಅಭಿಮಾನಿಗಳು ತಮ್ಮ ಸ್ಮಾರ್ಟ್‌ಫೋನ್‌ಗಳಿಂದ ಹಲವಾರು ಫೋಟೊಗಳನ್ನು ಕ್ಲಿಕ್ ಮಾಡಲು ಮತ್ತು ವಿಡಿಯೋ ರೆಕಾರ್ಡಿಂಗ್ ಮಾಡಲು ನಟನಿಗಾಗಿ ಕಾಯುತ್ತಿದ್ದರು.

ಸಂಪೂರ್ಣ ಕಪ್ಪು ಮತ್ತು ಬಂದಾನ ಧರಿಸಿದ್ದ ಶಾರುಖ್ ಭಾನುವಾರ ಮುಂಬೈನ ಹೆಗ್ಗುರುತುಗಳಲ್ಲಿ ಒಂದಾದ ತಮ್ಮ ಸಮುದ್ರಾಭಿಮುಖವಾದ ಬಂಗಲೆ 'ಮನ್ನತ್' ನ ಬಾಲ್ಕನಿಯಲ್ಲಿ ಕಾಣಿಸಿಕೊಂಡು ಅಭಿಮಾನಿಗಳತ್ತ ಕೈಬೀಸಿ ಧನ್ಯವಾದ ತಿಳಿಸಿದರು.

ಸೋಮವಾರ ಮುಂಜಾನೆ 57 ವರ್ಷದ ನಟ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದು, ಅದರಲ್ಲಿ ಅಪರಾ ಸಂಖ್ಯೆಯ ಅಭಿಮಾನಿಗಳು ಶಾರುಖ್ ಅವರ ನಿವಾಸದ ಮುಂದೆ ಜಮಾಯಿಸಿ ತಮ್ಮ ನೆಚ್ಚಿನ ನಟನನ್ನು ತಮ್ಮ ಫೋನುಗಳಲ್ಲಿ ಸೆರೆಹಿಡಿಯುತ್ತಿರುವುದು ಕಂಡುಬಂತು. ಅಭಿಮಾನಿಗಳು ಬಸ್ ಮತ್ತು ಕಾರುಗಳಲ್ಲಿ ಬಂದಿದ್ದರು.

ಮೆಹಮಾನ್ ನವಾಜಿ ಪಠಾಣ್ ಕೆ ಘರ್ ಪಾರ್. ನನ್ನ ಭಾನುವಾರವನ್ನು ತುಂಬಾ ಪ್ರೀತಿಯಿಂದ ತುಂಬಿದ್ದಕ್ಕಾಗಿ ನನ್ನ ಎಲ್ಲಾ ಮೆಹಮಾನ್‌ಗಳಿಗೆ ಧನ್ಯವಾದಗಳು. ಕೃತಜ್ಞ. ಸಂತೋಷ. ಪ್ರೀತಿಸುತ್ತೇನೆ ಎಂದಿರುವ ಅವರು 'ಪಠಾನ್' ಸಿನಿಮಾದ ಜನಪ್ರಿಯ ಡೈಲಾಗ್ ಅನ್ನು ಉಲ್ಲೇಖಿಸಿ ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾರೆ.

ನಾಲ್ಕು ವರ್ಷಗಳ ನಂತರ ಬಿಡುಗಡೆಯಾಗಿರುವ ಶಾರುಖ್ ಅವರ ಮೊದಲ ಸಿನಿಮಾ ಪಠಾಣ್, ಬಾಕ್ಸ್ ಆಫೀಸ್‌ನಲ್ಲಿ ದಾಖಲೆಯ ಓಟವನ್ನು ಮುಂದುವರೆಸಿದೆ. ಚಿತ್ರ ಬಿಡುಗಡೆಯಾದ ನಾಲ್ಕೇ ದಿನಗಳಲ್ಲಿ ವಿಶ್ವದಾದ್ಯಂತ 429 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದೆ ಎಂದು ನಿರ್ಮಾಣ ಬ್ಯಾನರ್ ಯಶ್ ರಾಜ್ ಫಿಲ್ಮ್ಸ್ (ವೈಆರ್‌ಎಫ್) ಭಾನುವಾರ ಹೇಳಿದೆ. ಈ ಮೂಲಕ ಅತ್ಯಂತ ವೇಗವಾಗಿ 400 ಕೋಟಿ ಕ್ಲಬ್ ಸೇರಿದ ಬಾಲಿವುಡ್ ಸಿನಿಮಾ ಎಂಬ ಖ್ಯಾತಿಗೆ ಪಾತ್ರವಾಗಿದೆ.

ಸಿದ್ಧಾರ್ಥ್ ಆನಂದ್ ನಿರ್ದೇಶಿಸಿದ ಈ ಚಿತ್ರದಲ್ಲಿ ದೀಪಿಕಾ ಪಡುಕೋಣೆ, ಜಾನ್ ಅಬ್ರಹಾಂ ಮುಂತಾದವರು ನಟಿಸಿದ್ದಾರೆ. 'ಪಠಾಣ್' ಜನವರಿ 25 ರಂದು ಬಿಡುಗಡೆಯಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT