ಕಂಗನಾ ರಣಾವತ್-ಶಾರುಖ್ ಖಾನ್ 
ಬಾಲಿವುಡ್

ಶಾರುಖ್ ಖಾನ್ 'ಸಿನಿಮಾದ ದೇವರು': ಜವಾನ್ ಸಿನಿಮಾವನ್ನು ಹೊಗಳಿದ ಕಂಗನಾ ರಣಾವತ್!

ಶಾರುಖ್ ಖಾನ್ ಅಭಿನಯದ 'ಜವಾನ್' ಚಿತ್ರ ಸಂಚಲನ ಮೂಡಿಸಿದೆ. ಸೆಪ್ಟೆಂಬರ್ 7ರಂದು ಬಿಡುಗಡೆಯಾದ ತಕ್ಷಣ ಅಟ್ಲಿ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಸುನಾಮಿ ಎಬ್ಬಿಸಿದೆ. ವಿಮರ್ಶಕರಿಂದ ಹಿಡಿದು ಸಾಮಾನ್ಯ ಜನರವರೆಗೆ ಎಲ್ಲರೂ ಶಾರುಖ್ ಮತ್ತು 'ಜವಾನ್' ಅನ್ನು ಬ್ಲಾಕ್‌ಬಸ್ಟರ್ ಎಂದು ಹೊಗಳುತ್ತಿದ್ದಾರೆ.

ಶಾರುಖ್ ಖಾನ್ ಅಭಿನಯದ 'ಜವಾನ್' ಚಿತ್ರ ಸಂಚಲನ ಮೂಡಿಸಿದೆ. ಸೆಪ್ಟೆಂಬರ್ 7ರಂದು ಬಿಡುಗಡೆಯಾದ ತಕ್ಷಣ ಅಟ್ಲಿ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಸುನಾಮಿ ಎಬ್ಬಿಸಿದೆ. ವಿಮರ್ಶಕರಿಂದ ಹಿಡಿದು ಸಾಮಾನ್ಯ ಜನರವರೆಗೆ ಎಲ್ಲರೂ ಶಾರುಖ್ ಮತ್ತು 'ಜವಾನ್' ಅನ್ನು ಬ್ಲಾಕ್‌ಬಸ್ಟರ್ ಎಂದು ಹೊಗಳುತ್ತಿದ್ದಾರೆ. 

ಇದೀಗ ಈ ಅಭಿಮಾನಿಗಳಲ್ಲಿ ಕಂಗನಾ ರಣಾವತ್ ಹೆಸರೂ ಸೇರಿಕೊಂಡಿದೆ. ಮೊದಲ ದಿನ 'ಜವಾನ್' ಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆ ನೋಡಿ ಕಂಗನಾ ಅಚ್ಚರಿಗೊಂಡಿದ್ದಾರೆ. ಶಾರುಖ್ ಖಾನ್ ಅವರನ್ನು 'ಸಿನಿಮಾ ದೇವರು' ಎಂದು ಕರೆದ ಅವರು, ದೇಶಕ್ಕೆ ಅಂತಹ ದೇವರು ಬೇಕು ಎಂದು ಹೇಳಿದರು.

ಕಂಗನಾ ರಣಾವತ್ ಅವರು ಜವಾನ್ ಮತ್ತು ಶಾರುಖ್ ಖಾನ್ ಅವರನ್ನು ಹೊಗಳಿ Instagram ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದಾರೆ. ಅಲ್ಲದೇ ಚಿತ್ರದ ಇಡೀ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಕಂಗನಾ 'ಜವಾನ್' ಚಿತ್ರದ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ. ಶಾರುಖ್ ಖಾನ್ ಮತ್ತು ಚಿತ್ರಕ್ಕಾಗಿ ದೀರ್ಘ ಟಿಪ್ಪಣಿಯನ್ನು ಬರೆದಿದ್ದಾರೆ.

ಶಾರುಖ್ ಹೋರಾಟವನ್ನು ಕಂಗನಾ ಶ್ಲಾಘನೆ
'90 ದಶಕದ ಲವರ್ ಬಾಯ್ ಆಗಿ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿದರು. ನಂತರ ಶಾರುಖ್ ಖಾನ್ ಒಂದು ದಶಕದ ಕಾಲ ಸಾಕಷ್ಟು ಹೋರಾಟ ನಡೆಸಿದರು. ಪ್ರೇಕ್ಷಕರೊಂದಿಗೆ ಮತ್ತೆ ಸಂಪರ್ಕ ಸಾಧಿಸಲು ಶ್ರಮಿಸಿದರು. ಮತ್ತು ಈಗ ಅವರು ತಮ್ಮ 50ರ ದಶಕದಲ್ಲಿ ಜನರ ಮಾಸ್ ಸೂಪರ್ ಹೀರೋ ಆಗಿ ಹೊರಹೊಮ್ಮಿದ್ದಾರೆ. ಇದು ನಿಜ ಜೀವನದಲ್ಲಿ ಸೂಪರ್ ಹೀರೋ ಕಥೆಗಿಂತ ಕಡಿಮೆಯಿಲ್ಲ. ಜನರು ಆತನನ್ನು ನಿರ್ಲಕ್ಷಿಸಿ, ಗೇಲಿ ಮಾಡಿದ ಸಮಯಗಳು ನನಗೆ ನೆನಪಿದೆ, ಆದರೆ ಅವರ ಹೋರಾಟವು ಸುದೀರ್ಘ ವೃತ್ತಿಜೀವನವನ್ನು ಆನಂದಿಸುವ ಎಲ್ಲಾ ನಟರಿಗೆ ಆದರ್ಶವಾಗಿದೆ. ಅವರು ಹೇಗೆ ನಿಲ್ಲಬೇಕು ಮತ್ತು ಮತ್ತೊಮ್ಮೆ ತಮ್ಮನ್ನು ತಾವು ಸ್ಥಾಪಿಸಿಕೊಳ್ಳಬೇಕೆಂದು ನೋಡಿ ಕಲಿಯಬೇಕು ಎಂದು ಕಂಗನಾ ಬರೆದುಕೊಂಡಿದ್ದಾರೆ.

'ಜವಾನ್' ಮೊದಲ ದಿನ ಗಳಿಸಿದ್ದೇಷ್ಟು?
'ಜವಾನ್' ಸೆಪ್ಟೆಂಬರ್ 7ರಂದು ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಬಾಕ್ಸ್ ಆಫೀಸ್ ಅಂಕಿಅಂಶಗಳ ಪ್ರಕಾರ, ಚಿತ್ರವು ಮೊದಲ ದಿನದಲ್ಲಿ 73-75 ಕೋಟಿ ರೂಪಾಯಿಗಳ ನಿವ್ವಳ ಕಲೆಕ್ಷನ್ ಅನ್ನು ಸಂಗ್ರಹಿಸಬಹುದು. ಹಿಂದಿ ಭಾಷೆಯಿಂದ 65 ಕೋಟಿ ಗಳಿಸುವ ನಿರೀಕ್ಷೆ ಇದೆ. ಅದೇ ಸಮಯದಲ್ಲಿ ತಮಿಳು ಮತ್ತು ತೆಲುಗು ಭಾಷೆಗಳಿಂದ 5-5 ಕೋಟಿ ರೂ. ಗಳಿಸಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

2030 Commonwealth Games: ಭಾರತದ ಬಿಡ್‌ಗೆ ಕ್ಯಾಬಿನೆಟ್ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

Theaterisation: 'ಥಿಯೇಟರ್ ಕಮಾಂಡ್‌' ರಚನೆ: ಪ್ರಯತ್ನದಲ್ಲಿ ಪ್ರಗತಿ ಸಾಧಿಸಲಾಗುತ್ತಿದೆಯೇ? ಆಡ್ಮಿರಲ್ ಡಿಕೆ ತ್ರಿಪಾಠಿ ಹೇಳಿದ್ದು ಹೀಗೆ...

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

'ಧಮ್ ಇದ್ರೆ.. ಸನಾತನಧರ್ಮ, ಬಿಹಾರಿಗಳ ಕುರಿತ ಹೇಳಿಕೆ ಮತ್ತೆ ಹೇಳ್ತೀರಾ?': MK Stalin ಗೆ ಬಿಜೆಪಿ-ಜೆಡಿಯು ಸವಾಲು!

SCROLL FOR NEXT