ಸ್ಕೈ ಫೋರ್ಸ್ ಚಿತ್ರದ ಸ್ಟಿಲ್ 
ಬಾಲಿವುಡ್

ಬಾಕ್ಸ್ ಆಫೀಸ್‌ನಲ್ಲಿ Sky Force ಅಬ್ಬರ: ಮೂರು ದಿನಗಳಲ್ಲಿ ಅಕ್ಷಯ್ ಕುಮಾರ್ ಅಭಿನಯದ ಚಿತ್ರ ಗಳಿಸಿದ್ದೆಷ್ಟು?

ಭಾರತದ ಮೊದಲ ಮತ್ತು ಅತ್ಯಂತ ಮಾರಕ ವೈಮಾನಿಕ ದಾಳಿಯ ಕಥೆಯನ್ನು ಒಳಗೊಂಡಿರುವ ಸ್ಕೈ ಫೋರ್ಸ್ ಚಿತ್ರವು ಶುಕ್ರವಾರ (ಜನವರಿ 24) ದಂದು ದೇಶದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು.

ನವದೆಹಲಿ: ಬಾಲಿವುಡ್ ಸೂಪರ್‌ಸ್ಟಾರ್ ಅಕ್ಷಯ್ ಕುಮಾರ್ ಮತ್ತು ಹೊಸಬರಾದ ವೀರ್ ಪಹಾರಿಯಾ ನಟನೆಯ 'ಸ್ಕೈ ಫೋರ್ಸ್' ಚಿತ್ರ ಉತ್ತಮ ಪ್ರದರ್ಶನ ಕಾಣುತ್ತಿದ್ದು, ಬಿಡುಗಡೆಯಾದ ಮೊದಲ ವಾರಾಂತ್ಯದಲ್ಲಿ ವಿಶ್ವದಾದ್ಯಂತ ಗಲ್ಲಾಪೆಟ್ಟಿಗೆಯಲ್ಲಿ 92.90 ಕೋಟಿ ರೂ. ಗಳಿಸಿದೆ.

ಭಾರತದ ಮೊದಲ ಮತ್ತು ಅತ್ಯಂತ ಮಾರಕ ವೈಮಾನಿಕ ದಾಳಿಯ ಕಥೆಯನ್ನು ಒಳಗೊಂಡಿರುವ ಸ್ಕೈ ಫೋರ್ಸ್ ಚಿತ್ರವು ಶುಕ್ರವಾರ (ಜನವರಿ 24) ದಂದು ದೇಶದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು.

ಚಿತ್ರವನ್ನು ಸಂದೀಪ್ ಕೆವ್ಲಾನಿ ಮತ್ತು ಅಭಿಷೇಕ್ ಕಪೂರ್ ನಿರ್ದೇಶಿಸಿದ್ದು, ಪ್ರೊಡಕ್ಷನ್ ಬ್ಯಾನರ್ ಮ್ಯಾಡಾಕ್ ಫಿಲ್ಮ್ಸ್ ಸೋಮವಾರ ಸಾಮಾಜಿಕ ಮಾಧ್ಯಮದಲ್ಲಿ ಚಿತ್ರದ ಗಳಿಕೆಯ ಕುರಿತು ಮಾಹಿತಿ ನೀಡಿದೆ.

'ಸ್ಕೈ ಫೋರ್ಸ್' ಹೊಸ ಎತ್ತರಕ್ಕೆ ಏರುತ್ತಿದೆ, ಗಣರಾಜ್ಯೋತ್ಸವದ ವಾರಾಂತ್ಯದಲ್ಲಿ ಪ್ರೇಕ್ಷಕರ ನೆಚ್ಚಿನ ಚಿತ್ರವಾಗಿ ಆಗಿ ಹೊರಹೊಮ್ಮುತ್ತಿದೆ! ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ Sky Force' ಎಂದು ಬರೆದಿದೆ. ಪೋಸ್ಟ್‌ನಲ್ಲಿ ಲಗತ್ತಿಸಲಾದ ಪೋಸ್ಟರ್ ಚಿತ್ರದ ದೇಶೀಯ ಗಲ್ಲಾಪೆಟ್ಟಿಗೆಯ ಸಂಗ್ರಹದ ಮಾಹಿತಿಯನ್ನು ಹಂಚಿಕೊಂಡಿದೆ.

ಚಿತ್ರ ಬಿಡುಗಡೆಯಾದ ಮೊದಲ ದಿನ 15.30 ಕೋಟಿ ರೂಪಾಯಿ ಗಳಿಸಿದ ಚಿತ್ರವು ಎರಡನೇ ದಿನ ಚಿತ್ರವು 26.30 ಕೋಟಿ ರೂ. ಗಳಿಸಿತು ಮತ್ತು ಭಾನುವಾರದಂದು 31.60 ಕೋಟಿ ರೂ. ಗಳಿಸಿದೆ ಎಂದು ಚಿತ್ರತಂಡ ತಿಳಿಸಿದೆ.

'ಸ್ಕೈ ಫೋರ್ಸ್' ಚಿತ್ರವು ದೇಶೀಯ ಗಲ್ಲಾಪೆಟ್ಟಿಗೆಯಲ್ಲಿ ಒಟ್ಟು 86.40 ಕೋಟಿ ರೂ. ಗಳಿಕೆ ಕಂಡಿದೆ ಮತ್ತು ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 92.90 ಕೋಟಿ ರೂ. ಗಳಿಸಿದೆ.

ಚಿತ್ರವು 1965 ರ ಭಾರತ-ಪಾಕಿಸ್ತಾನ ಯುದ್ಧದ ಸಮಯದಲ್ಲಿ ಕಾಣೆಯಾದ IAF ಅಧಿಕಾರಿ ಟಿ ವಿಜಯ (ಪಹಾರಿಯಾ) ಅವರ ಸುತ್ತ ಸುತ್ತುತ್ತದೆ.

ಚಿತ್ರದಲ್ಲಿ ಅಕ್ಷಯ್ ವಿಂಗ್ ಕಮಾಂಡರ್ KO ಅಜುಹಾ (ನಿಜ ಜೀವನದ OP ತನೇಜಾ ಅವರಿಂದ ಪ್ರೇರಿತ) ಮತ್ತು ಟಿ ವಿಜಯಾ ಪಾತ್ರದಲ್ಲಿ ವೀರ್ ಪಹರಿಯಾ (ಅಜ್ಜಮಾಡ ಬೊಪ್ಪಯ್ಯ ದೇವಯ್ಯ ಅವರಿಂದ ಪ್ರೇರಿತ) ನಟಿಸಿದ್ದಾರೆ. ಸ್ಕೈ ಫೋರ್ಸ್ ಚಿತ್ರದಲ್ಲಿ ನಿಮ್ರತ್ ಕೌರ್ ಮತ್ತು ಸಾರಾ ಅಲಿ ಖಾನ್ ಕೂಡ ನಟಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

ಹಗರಣ ರಹಿತ ಹುದ್ದೆ ಭರ್ತಿಗೆ ಕ್ರಮ: ಯುವಕರು ಧೈರ್ಯವಾಗಿರಿ, ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ, ಸದ್ಯದಲ್ಲೇ ಸಂದೇಶ ನೀಡುತ್ತೇವೆ; ಡಿ ಕೆ ಶಿವಕುಮಾರ್

ದಲಿತಾಸ್ತ್ರದ ಮೂಲಕ ಕಟ್ಟಿಹಾಕಲು ಸಿದ್ದು ಬಣ ಕಸರತ್ತು: ತೆರಮರೆಯಲ್ಲಿ ಡಿಕೆಶಿ ಬೆಂಬಲಿಗರ ಮಸಲತ್ತು; ಅಂತರ್ಯುದ್ಧದಲ್ಲಿ ಯಾರಿಗಿದೆ ಗೆಲ್ಲುವ ತಾಕತ್ತು?

Gold Rate Today: ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ವಿವರ...

ಆರೋಗ್ಯ ಇಲಾಖೆಯಿಂದ ಉರ್ದು ಭಾಷೆ ಆಹ್ವಾನ ಪತ್ರಿಕೆ: ಜನರನ್ನು ದಾರಿ ತಪ್ಪಿಸಲೇಬೇಕು ಎಂಬ ಹಠಕ್ಕೆ ಬಿದ್ದಿದ್ದೀರಾ?

SCROLL FOR NEXT