ಅನನ್ಯಾ ಪಾಂಡೆ 
ಬಾಲಿವುಡ್

'ಚಾಂದ್ ಮೇರಾ ದಿಲ್' ಚಿತ್ರಕ್ಕಾಗಿ ಮಾಡಿದ 'ಭರತನಾಟ್ಯ' ವಿವಾದ; ಟೀಕೆಗಳ ನಡುವೆಯೂ 'ಲೈಫ್ ಈಸ್ ಬ್ಯೂಟಿಫುಲ್' ಎಂದ ಅನನ್ಯಾ ಪಾಂಡೆ

ವೈರಲ್ ಆದ ಸಿನಿಮಾದ ಕ್ಲಿಪ್‌ನಲ್ಲಿ ಅನನ್ಯಾ ಅವರ ಭರತನಾಟ್ಯಂ ಅನ್ನು ಸಾಮಾಜಿಕ ಮಾಧ್ಯಮದ ಒಂದು ವರ್ಗವು ಟೀಕಿಸಿದರೆ, ಕೆಲವರು ಅವರನ್ನು ಸಮರ್ಥಿಸಿಕೊಂಡಿದ್ದಾರೆ.

ನವದೆಹಲಿ: ಇತ್ತೀಚೆಗಷ್ಟೇ ಬಿಡುಗಡೆಯಾದ ಚಿತ್ರ 'ಚಾಂದ್ ಮೇರಾ ದಿಲ್'ಕ್ಕಾಗಿ ಬಾಲಿವುಡ್ ನಟಿ ಅನನ್ಯಾ ಪಾಂಡೆ ಅವರ 'fusion' ಭರತನಾಟ್ಯ ಇದೀಗ ಟ್ರೋಲ್‌ಗೆ ಗುರಿಯಾಗಿದೆ. ಈ ಬೆನ್ನಲ್ಲೇ, 'ಲೈಫ್ ಈಸ್ ಬ್ಯೂಟಿಫುಲ್' ಎಂಬ ಶೀರ್ಷಿಕೆಯೊಂದಿಗೆ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

ಪೋಸ್ಟ್‌ನಲ್ಲಿ ಸಹೋದರಿ ರೈಸಾ ಜೊತೆಗಿನ ಅವರ ಚಿತ್ರಗಳು, ಪಿಜ್ಜಾ ಮತ್ತು ಹೂವುಗಳ ಗುಚ್ಛವಿದೆ. ನಟಿ ಮ್ಯೂಸಿಕ್ ಕೇಳುತ್ತಾ ಮತ್ತು ತನ್ನ ಸುತ್ತಲಿನ ಪ್ರಕೃತಿ ಸೌಂದರ್ಯವನ್ನು ಸವಿಯುತ್ತಾ ಸಂತೋಷದಿಂದ ಕಾಲ ಕಳೆಯುತ್ತರುವುದು ಕಂಡುಬಂದಿದೆ.

ವೈರಲ್ ಆದ ಸಿನಿಮಾದ ಕ್ಲಿಪ್‌ನಲ್ಲಿ ಅನನ್ಯಾ ಅವರ ಭರತನಾಟ್ಯಂ ಅನ್ನು ಸಾಮಾಜಿಕ ಮಾಧ್ಯಮದ ಒಂದು ವರ್ಗವು ಟೀಕಿಸಿದರೆ, ಕೆಲವರು ಅವರನ್ನು ಸಮರ್ಥಿಸಿಕೊಂಡಿದ್ದಾರೆ. ಅದರ ಜವಾಬ್ದಾರಿ ಸಂಪೂರ್ಣವಾಗಿ ನಟಿಯ ಮೇಲಿರುವುದಿಲ್ಲ ಎಂದು ಹೇಳಿದ್ದಾರೆ.

ಈ ಚಿತ್ರದ ಒಂದು ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ಇದರಲ್ಲಿ ಅನನ್ಯಾ ಪಾತ್ರವು ಭರತನಾಟ್ಯವನ್ನು ಹಿಪ್-ಹಾಪ್‌ನೊಂದಿಗೆ ಬೆರೆಸುವುದನ್ನು ಮತ್ತು ಲಾಕಿಂಗ್ ಮಾಡುವುದನ್ನು ಸಹನಟ ಲಕ್ಷ್ಯ ಮೆಚ್ಚುಗೆಯಿಂದ ನೋಡುತ್ತಿರುವುದು ಕಂಡುಬಂದಿದೆ. ಇದು ಇಂಟರ್ನೆಟ್‌ನಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಮೀಮ್‌ಗಳಿಂದ ವಿಮರ್ಶೆಗಳವರೆಗೆ, ಅನನ್ಯಾ ಪಾಂಡೆ ಅವರ ಭರತನಾಟ್ಯದ ಕುರಿತು ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಮತ್ತು ಅನುಭವಿ ಭರತನಾಟ್ಯ ಕಲಾವಿದರು ಸಹ ಪ್ರತಿಕ್ರಿಯೆ ನೀಡಿದ್ದಾರೆ.

ನೃತ್ಯ ಸಂಯೋಜಕರ ಸ್ಪಷ್ಟನೆ

ಅನನ್ಯಾ ಅವರ ಭರತನಾಟ್ಯದ ಬಗ್ಗೆ ಟೀಕೆಗಳು ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಸಹಾಯಕ ನೃತ್ಯ ಸಂಯೋಜಕಿ ಅನನ್ಯಾ ಆರ್. ಕುರುಪ್ ನಟಿಯನ್ನು ಸಮರ್ಥಿಸಿಕೊಂಡಿದ್ದಾರೆ. 'ಅನನ್ಯಾ ಪಾಂಡೆ ನೀವು ನಿಜವಾಗಿಯೂ ನನಗೆ ತಿಳಿದಿರುವ ಅತ್ಯಂತ ಸಿಹಿ ವ್ಯಕ್ತಿಗಳಲ್ಲಿ ಒಬ್ಬರು! ಭರತನಾಟ್ಯವನ್ನು ನಿಮಗೆ ಕಲಿಸುವುದು ತುಂಬಾ ಸುಂದರವಾದ ಅನುಭವವಾಗಿತ್ತು ಮತ್ತು ಚಾಂದ್ ಮೇರಾ ದಿಲ್‌ನಲ್ಲಿ ನಿಮ್ಮ ಅಭಿನಯವನ್ನು ನೀವು ಸಂಪೂರ್ಣವಾಗಿ ಅದ್ಭುತವಾಗಿಸಿದ್ದೀರಿ' ಎಂದು ಬರೆದಿದ್ದಾರೆ.

'ನಿಮ್ಮ ಕಂಫರ್ಟ್ ಝೋನ್ ಹೊರಗೆ ಶಾಸ್ತ್ರೀಯ ಕಲಾ ಪ್ರಕಾರವನ್ನು ಪ್ರಯತ್ನಿಸಲು ಧೈರ್ಯ ಮತ್ತು ಸಮರ್ಪಣೆ ಬೇಕಾಗುತ್ತದೆ. ಭರತನಾಟ್ಯವು ನರ್ತಕರು ವರ್ಷಗಳ ಕಾಲ ತರಬೇತಿ ಪಡೆಯುವ ಒಂದು ನೃತ್ಯವಾಗಿದ್ದು, ಅದರ ಸೊಬಗು, ಅಭಿವ್ಯಕ್ತಿಗಳು ಮತ್ತು ತಂತ್ರವನ್ನು ಪರಿಪೂರ್ಣಗೊಳಿಸಲು ಪ್ರಯತ್ನಿಸುತ್ತಾರೆ. ಅನನ್ಯಾ ಪಾಂಡೆ ಬಹಳ ಕಡಿಮೆ ಅವಧಿಯಲ್ಲಿ ನಿಜವಾದ ಕಠಿಣ ಪರಿಶ್ರಮ ಮತ್ತು ಶ್ರಮವನ್ನು ಹಾಕಿದ್ದಾರೆ ಮತ್ತು ಅದು ಮೆಚ್ಚುಗೆಗೆ ಅರ್ಹವಾಗಿದೆ. ಹೊಸದನ್ನು ಪ್ರಯತ್ನಿಸಿದ್ದಕ್ಕಾಗಿ ಯಾರನ್ನಾದರೂ ಕೆಣಕುವ ಬದಲು, ತಮ್ಮನ್ನು ತಾವು ಸವಾಲು ಮಾಡಿಕೊಳ್ಳುವ ಮತ್ತು ತಮ್ಮ ಅತ್ಯುತ್ತಮವಾದದ್ದನ್ನು ನೀಡುವ ಕಲಾವಿದರನ್ನು ಪ್ರೋತ್ಸಾಹಿಸೋಣ' ಎಂದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Karnataka CM News LIVE Updates | ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಬ್ರೇಕ್ ಫಾಸ್ಟ್ ಮೀಟಿಂಗ್: ಮುಂದಿನ CM ಡಿಕೆ.ಶಿವಕುಮಾರ್; ಸಚಿವರಿಗೆ ಸಿದ್ದರಾಮಯ್ಯ ಮಾಹಿತಿ, ಮಧ್ಯಾಹ್ನ 2.30ಕ್ಕೆ ರಾಜೀನಾಮೆ

ಮೋದಿಯವರ ಇತ್ತೀಚಿನ ಫಾರಿನ್ ಟ್ರಿಪ್ಪಿನಿಂದ ಭಾರತಕ್ಕೇನು ಲಾಭ? (ಹಣಕ್ಲಾಸು)

ಕಾಂಗ್ರೆಸ್‌ ಪವರ್ ಪಾಲಿಟಿಕ್ಸ್‌ಗೆ ಮತ್ತೊಂದು ಟ್ವಿಸ್ಟ್: ರಾಜ್ಯಪಾಲರ ಭೇಟಿಗೆ ಸಿದ್ದರಾಮಯ್ಯ ಸಮಯ ಕೇಳಿಲ್ಲ; ರಾಜೀನಾಮೆ ಊಹಾಪೋಹಕ್ಕೆ ಲೋಕಭವನ ಸ್ಪಷ್ಟನೆ..!

ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ: 4 ಇರಾನ್ ಡ್ರೋನ್‌ಗಳನ್ನು ಹೊಡೆದುರುಳಿಸಿದ ಅಮೆರಿಕಾ, ಹೋರ್ಮುಜ್‌ನಲ್ಲಿ ಉದ್ವಿಗ್ನತೆ ತೀವ್ರ..!

ಕ್ಲೈಮ್ಯಾಕ್ಸ್‌ ಹಂತಕ್ಕೆ ಕುರ್ಚಿ ಕದನ: ಸಿಎಂ ಸ್ಥಾನಕ್ಕೆ ಡಿಕೆ ಶಿವಕುಮಾರ್ ಹೆಸರು ಫೈನಲ್?, ಮೇ 31ಕ್ಕೆ ಪ್ರಮಾಣವಚನ ಸಾಧ್ಯತೆ

SCROLL FOR NEXT