ಹನುಮಾನ್ ಅಂಶ್ ಚಿತ್ರ 
ಬಾಲಿವುಡ್

ಬಾಕ್ಸ್ ಆಫೀಸ್‌ನಲ್ಲಿ 'ಹನುಮಾನ್ ಅಂಶ್' ಅಬ್ಬರ; ₹300 ಕೋಟಿಗೂ ಅಧಿಕ ಗಳಿಕೆ ಕಂಡ ನೀಮ್ ಕರೋಲಿ ಬಾಬಾ ಜೀವನಾಧರಿತ ಚಿತ್ರ!

ಕೇವಲ ₹2 ಕೋಟಿಗಳ ಅಲ್ಪ ಬಜೆಟ್‌ನಲ್ಲಿ ನಿರ್ಮಾಣವಾದ ಈ ಚಿತ್ರವು ಆಗಸ್ಟ್ 7 ರಂದು ಭಾರತೀಯ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು.

ನವದೆಹಲಿ: ಆಧ್ಯಾತ್ಮಿಕ ನಾಯಕ ನೀಮ್ ಕರೋಲಿ ಬಾಬಾ ಅವರ ಜೀವನ ಮತ್ತು ಬೋಧನೆಗಳನ್ನು ಆಧರಿಸಿದ 'ಹನುಮಾನ್ ಅಂಶ' (Hanuman Ansh) ಚಿತ್ರವು ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ 300 ಕೋಟಿ ರೂಪಾಯಿಗೂ ಹೆಚ್ಚು ಗಳಿಕೆ ಕಂಡಿದೆ.

ವಿಶಾಲ್ ಚತುರ್ವೇದಿ ನಿರ್ದೇಶನದ ಈ ಚಿತ್ರವು, ತಾಯಿಯ ಮರಣದ ನಂತರ ದೇವರ ಹುಡುಕಾಟದಲ್ಲಿ ಆಧ್ಯಾತ್ಮಿಕ ಪಯಣವನ್ನು ಕೈಗೊಳ್ಳುವ ಲಕ್ಷ್ಮೀನಾರಾಯಣ ಎಂಬ ಶೋಕತಪ್ತ ವ್ಯಕ್ತಿಯ ಕಥೆಯನ್ನು ಒಳಗೊಂಡಿದೆ.

ಫಿಲ್ಮ್ ಟ್ರೇಡ್ ಪೋರ್ಟಲ್ 'ಸ್ಯಾಕ್ನಿಲ್ಕ್' (Sacnilk) ವೆಬ್‌ಸೈಟ್‌ನ ಪ್ರಕಾರ, ಈ ಚಿತ್ರವು ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ ಒಟ್ಟು ₹329.30 ಕೋಟಿ ಗಳಿಕೆ ಕಂಡಿದೆ.

ಕೇವಲ ₹2 ಕೋಟಿಗಳ ಅಲ್ಪ ಬಜೆಟ್‌ನಲ್ಲಿ ನಿರ್ಮಾಣವಾದ ಈ ಚಿತ್ರವು ಆಗಸ್ಟ್ 7 ರಂದು ಭಾರತೀಯ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಆರಂಭದಲ್ಲಿ ಸಾಧಾರಣ ಗಳಿಕೆಯನ್ನು ಕಂಡಿದ್ದರೂ, ಮೊದಲ ಎರಡು ವಾರಗಳ ನಂತರ ಜನರ ಸಕಾರಾತ್ಮಕ ಪ್ರತಿಕ್ರಿಯೆ ಮತ್ತು ಪ್ರಶಂಸೆಯ ಕಾರಣದಿಂದಾಗಿ ಚಿತ್ರದ ಗಳಿಕೆಯ ವೇಗ ಹೆಚ್ಚಾಯಿತು.

ಚಿತ್ರದಲ್ಲಿ ಶೋಭಿನವ್ ಸತ್ಯ, ವಿಹಾನ್ ಶೆಡ್ಗೆ, ಚಂದನ್ ಕೆ. ಆನಂದ್, ಪೂರ್ಣಿಮಾ ತಿವಾರಿ, ಅನಿಲ್ ರಸ್ತೋಗಿ, ಗುಲ್ಶನ್ ಪಾಂಡೆ ಮತ್ತು ಭಗವಾನ್‌ದಾಸ್ ಪಟೇಲ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಬಾಬಾ ನೀಮ್ ಕರೋಲಿ ಅವರು 1900ರ ಸುಮಾರಿಗೆ ಉತ್ತರ ಪ್ರದೇಶದ ಫಿರೋಜಾಬಾದ್ ಜಿಲ್ಲೆಯ ಗ್ರಾಮವೊಂದರಲ್ಲಿ ಜನಿಸಿದರು ಮತ್ತು 1973ರಲ್ಲಿ ನಿಧನರಾದರು.

ಅವರು ಚಿಕ್ಕ ವಯಸ್ಸಿನಲ್ಲೇ ವಿವಾಹವಾದರು ಮತ್ತು ನಂತರ ಸಂಚಾರಿ ತಪಸ್ವಿಯಾದರು. ಅವರ ಭಕ್ತರ ಪೈಕಿ ಜೂಲಿಯಾ ರಾಬರ್ಟ್ಸ್, ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರಂತಹ ಪ್ರಸಿದ್ಧ ವ್ಯಕ್ತಿಗಳು ಸೇರಿದ್ದಾರೆ.

ಸ್ಟೀವ್ ಜಾಬ್ಸ್ ಮತ್ತು ಮಾರ್ಕ್ ಜುಕರ್‌ಬರ್ಗ್ ಕೂಡ ಪರ್ವತ ಪ್ರದೇಶದಲ್ಲಿರುವ ಕೈಂಚಿ ಧಾಮದಲ್ಲಿನ ಅವರ ಆಶ್ರಮಕ್ಕೆ ಭೇಟಿ ನೀಡಿದ್ದರು ಎಂದು ವರದಿಯಾಗಿದೆ.

ಈ ಚಿತ್ರವು ಆರಂಭದಲ್ಲಿ 250 ಪರದೆಗಳಲ್ಲಿ ಬಿಡುಗಡೆಯಾಗಿತ್ತು. ಆದರೆ, ಬಾಕ್ಸ್ ಆಫೀಸ್‌ನಲ್ಲಿನ ಭಾರಿ ಯಶಸ್ಸಿನ ನಂತರ ಈ ಸಂಖ್ಯೆ 2,000ಕ್ಕೆ ಏರಿಕೆಯಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮುಂಗಾರು ಹಿಂತೆಗೆತ ಆರಂಭ; ‘Arnab’ ಚಂಡಮಾರುತ ಭೀತಿ, ಈ ರಾಜ್ಯಗಳಲ್ಲಿ ಭಾರಿ ಮಳೆ ಸಾಧ್ಯತೆ!

ಮುಂಬೈ ಗಣೇಶೋತ್ಸವ ವೇಳೆ ದುರಂತ: ವಿದ್ಯುತ್ ತಗುಲಿ 8 ವರ್ಷದ ಬಾಲಕಿ ಸೇರಿ ಇಬ್ಬರ ಸಾವು!

ಬೆಂಗಳೂರಿಗೆ ಗುಡ್‌ನ್ಯೂಸ್; ಮಾನ್ಸೂನ್ ಅಂತ್ಯವಾದರೂ ಭಾರಿ ವರ್ಷಧಾರೆ, ಮಂಗಳವಾರದಿಂದ ಮತ್ತಷ್ಟು ಚುರುಕು!

ಮಧ್ಯಪ್ರಾಚ್ಯದಲ್ಲಿ ಮಹಾಯುದ್ಧ ಭೀತಿ: ಅಮೆರಿಕಕ್ಕೆ Iran 'Deadline'.. Trumpಗೆ ಕತಾರ್ ಮೂಲಕ 7 ಷರತ್ತುಗಳ ರವಾನೆ, ಟೆಹ್ರಾನ್‌ ಇಟ್ಟ ಬೇಡಿಕೆಗಳೇನು..?

ಹೊರಗುತ್ತಿಗೆ, ದಿನಗೂಲಿ ನೌಕರರಿಗೆ ಗುಡ್‌ನ್ಯೂಸ್; ಕನಿಷ್ಠ ವೇತನ ಹೆಚ್ಚಳ ತಡೆದಿದ್ದ ಸರ್ಕಾರದ ಸುತ್ತೋಲೆಗಳಿಗೆ ಹೈಕೋರ್ಟ್ ಬ್ರೇಕ್!