ಕೋಟಿಗೊಂದ್ ಲವ್ ಸ್ಟೋರಿ ಚಿತ್ರದ ಸ್ಟಿಲ್ 
ಸಿನಿಮಾ ಸುದ್ದಿ

'ಶುಭಾ' ಚಿತ್ರಕ್ಕೆ ಕತ್ರಿನಾ!!??

ಬಿಡುಗಡೆಯ ಹಂತಕ್ಕೆ ಬಂದಿರುವ 'ಕೋಟಿಗೊಂದ್ ಲವ್ ಸ್ಟೋರಿ' ಚಿತ್ರ ಸೆನ್ಸಾರ್ ಕತ್ತರಿಯಲ್ಲಿ ಸಿಕ್ಕಿಕೊಂಡಿದೆ. ಈಗಾಗಲೇ ಬಿಡುಗಡೆಯ ದಿನಾಂಕವನ್ನು ಪ್ರಕಟಿಸಿರುವ ಈ ಚಿತ್ರಕ್ಕೆ ಸೆನ್ಸಾರ್ ಮಂಡಳಿ 'ಎ' ಸರ್ಟಿಫಿಕೇಟ್ ಕೊಟ್ಟಿದೆ.

'ಎ' ಜತೆಗೆ 'ಯು/ಎ' ಕೊಡಿ ಎಂಬುದು ಚಿತ್ರತಂಡದ ಬೇಡಿಕೆ. ಆದರೆ ಚಿತ್ರದಲ್ಲಿ ಸಾಕಷ್ಟು ಹಾಟ್ ದೃಶ್ಯಗಳಿವೆ ಎಂಬುದು ಸೆನ್ಸಾರ್ ಮಂಡಳಿ ವಾದ. ಹೀಗಾಗಿ ರಾಕೇಶ್ ಅಡಿಗ ಹಾಗೂ ಶುಭಾ ಪೂಂಜಾ ಜೋಡಿಯಾಗಿ ಅಭಿನಯಿಸಿರುವ 'ಕೋಟಿಗೊಂದ್ ಲವ್ ಸ್ಟೋರಿ' ಚಿತ್ರಕ್ಕೆ ಸೆನ್ಸಾರ್ ಸಮಸ್ಯೆ ಬಗೆಹರಿದಿಲ್ಲ. ಆದರೆ, ನಿರ್ಮಾಪಕ ಎಚ್ಎಲ್ಎನ್ ರಾಜು ಚಿತ್ರದ ಬಿಡುಗಡೆಯ ಗಡಿಯನ್ನು ಪ್ರಕಟಿಸಿ, ಚಿತ್ರಮಂದಿರವನ್ನೂ ಕಾಯ್ದಿರಿಸಿದ್ದಾರೆ. ಸೆನ್ಸಾರ್ ಮಂಡಳಿ ಈಗಾಗಲೇ ಚಿತ್ರ ವೀಕ್ಷಿಸಿ, 'ಮೌನ ಮುರಿದು...' ಎಂಬ ಹಾಟ್ ಹಾಡೊಂದರಲ್ಲಿ ಬರುವ ಒಂದಷ್ಟು ಸೀನ್ಗಳಿಗೆ ಕತ್ತರಿ ಹಾಕದಿದ್ದರೆ 'ಎ' ಸರ್ಟಿಫಿಕೆಟ್ ಕೊಡುವುದಾಗಿ ಹೇಳಿದೆ. 'ಎ' ಸರ್ಟಿಫಿಕೆಟ್ ಸಿಕ್ಕರೆ ಚಿತ್ರ ನೋಡಲು ಜನ ಬರುತ್ತಾರೆಯೇ? ಎನ್ನುವ ಅನುಮಾನ ಚಿತ್ರ ತಂಡದ್ದು.

ಸೆನ್ಸಾರ್ ಮಂಡಳಿ ಹೇಳಿರುವ ಅಷ್ಟೊಂದು ಸೀನ್ಗಳಿಗೇನಾದರೂ ಕತ್ತರಿ ಹಾಕಿದರೆ, ಹಾಡು ಹಾಳಾಗುತ್ತೆ. ಅಲ್ಲದೆ ಇದು ಕಥೆಗೆ ಪೂರಕವಾಗಿರುವುದರಿಂದ ಆ ದೃಶ್ಯಗಳು ಬೇಕೇ ಬೇಕು ಎಂಬುದು ನಿರ್ಮಾಪಕರ ಹಠ. ಮಂಡಳಿ ಹೇಳಿರೋದು ಹದಿನೈದು ಕಟ್ಸ್ . ಚಿತ್ರದ ನಾಯಕ, ನಾಯಕಿ, ಇಬ್ಬರೂ ಆತ್ಮಹತ್ಯೆ ಮಾಡಿಕೊಳ್ಳಲೆಂದು ಬಂದಾಗ, ಶುರುವಾಗುವ ಹಾಡದು. ಕೊಂಚ ರೊಮ್ಯಾನ್ಸ್ ಇಟ್ಟು ಚಿತ್ರೀಕರಿಸಲಾಗಿದೆ. ಜಾಸ್ತಿ ದೃಶ್ಯಗಳನ್ನು ತೆಗೆದರೆ ಅಲ್ಲಿ ಬೇರೆ ದೃಶ್ಯಗಳನ್ನು ಜೋಡಿಸಲು ಹೆಚ್ಚಿನ ಶಾಟ್ಸ್ಗಳಿಲ್ಲ. ಆದ್ದರಿಂದ ಸ್ವಲ್ಪ ಮಟ್ಟಿಗೆ ದೃಶ್ಯಗಳನ್ನು ತೆಗೆದುಹಾಕಿ, ಮುಂದಿನ ವಾರದೊಳಗೆ ಸೆನ್ಸಾರ್ ಮುಂದೆ ಇಡುತ್ತೇವೆ. ಮಂಡಳಿಯಿಂದ ಯು/ಎ ಸರ್ಟಿಫಿಕೆಟ್ ಸಿಗುವ ವಿಶ್ವಾಸವಿದೆ. ಏನೇ ಆದರೂ ಸೆನ್ಸಾರ್ ಮಂಡಳಿ ಕೊಡುವ ತೀರ್ಮಾನಕ್ಕೆ ನಾನು ಬದ್ಧ ಎನ್ನುತ್ತಾರೆ ನಿರ್ಮಾಪಕ ರಾಜು. ಜಗ್ಗು ಶಿರಸಿ ನಿರ್ದೇಶನದ ಚಿತ್ರವಿದು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT