ಶ್! ಸಿನೆಮಾದ ಒಂದು ದೃಶ್ಯ 
ಸಿನಿಮಾ ಸುದ್ದಿ

ಶ್! ನಿಮ್ಮನ್ನು ಬೆಚ್ಚಿಬೀಳಿಸಲು ಮತ್ತೆ ತೆರೆಗೆ

ಕನ್ನಡದ ಚಿತ್ರರಂಗದಲ್ಲಿ ಇತಿಹಾಸ ಬರೆದ ಥ್ರಿಲ್ಲರ್ ಸಿನೆಮಾ 'ಶ್!' ಮತ್ತೆ ತೆರೆಗೆ ಬರಲಿದೆ. ಉಪೇಂದ್ರ ನಿರ್ದೇಶನದ 'ಓಂ' ಚಿತ್ರಮಂದಿರಗಳಲ್ಲಿ ಆಗಾಗ ಬಿಡುಗಡೆಯಾಗುವುದು

ಬೆಂಗಳೂರು: ಕನ್ನಡದ ಚಿತ್ರರಂಗದಲ್ಲಿ ಇತಿಹಾಸ ಬರೆದ ಥ್ರಿಲ್ಲರ್ ಸಿನೆಮಾ 'ಶ್!' ಮತ್ತೆ ತೆರೆಗೆ ಬರಲಿದೆ. ಉಪೇಂದ್ರ ನಿರ್ದೇಶನದ 'ಓಂ' ಚಿತ್ರಮಂದಿರಗಳಲ್ಲಿ ಆಗಾಗ ಬಿಡುಗಡೆಯಾಗುವುದು ಮಾಮೂಲಿ. ಈಗ ಇದೇ ನಿರ್ದೇಶಕನ 'ಶ್' ಕೂಡ ಎರಡನೆ ಬಾರಿಗೆ ಹಿರಿತೆರೆಗೆ ಹಿಗ್ಗುತ್ತಿದೆ.

೨೨ ವರ್ಷದ ಹಿಂದೆ ಬಿಡುಗಡೆಯಾದ ಈ ಚಲನಚಿತ್ರಕ್ಕೆ ತಾಂತ್ರಿಕ ಗುಣಮಟ್ಟವನ್ನು ನವೀಕರಿಸಿವುದರೊಂದಿಗೆ ಈ ಸಿನೆಮಾ ಬಿಡುಗಡೆಯಾಗಲಿದೆ ಎಂದು ನಿರ್ಮಾಪಕ ಕುಮಾರ್ ಗೋವಿಂದ್ ತಿಳಿಸಿದ್ದಾರೆ.

ಈ ಸಿನೆಮಾವನ್ನು ೩೫ ಎಂ ಎಂ ರೀಲಿನಲ್ಲಿ ಚಿತ್ರೀಕರಣ ಮಾಡಲಾಗಿತ್ತು ಈಗ ಅದನ್ನು ಡಿಜಿಟಲ್ ಪ್ರದರ್ಶನಕ್ಕೆ ಸಜ್ಜುಗೊಳಿಸಲಾಗುತ್ತಿದೆ. ಹಾರರ್ ಭೀತಿಯನ್ನು ದ್ವಿಗುಣಗೊಳಿಸಲು ಕೆಲವು ಗ್ರಾಫಿಕ್ಸ್ ದೃಶ್ಯಗಳನ್ನು ಸೇರಿಸಲಾಗುವುದು ಎಂದು ಕೂಡ ಅವರು ತಿಳಿಸಿದ್ದಾರೆ.

"ಹೆಸರ ಪಟ್ಟಿ ಹೊರತುಪಡಿಸಿದರೆ, ಚಲನಚಿತ್ರವನ್ನು ಯಾವುದೇ ರೀತಿ ಬದಲಾಯಿಸುತ್ತಿಲ್ಲ. 'ಶ್' ಉಲಿತವನ್ನು ಸ್ವಲ್ಪ ಭೀಕರವಾಗಿ ಹೇಳಲಿದ್ದೇವೆ" ಎಂದಿದ್ದಾರೆ ಕುಮಾರ್ ಗೋವಿಂದ್.

ಇದಕ್ಕಾಗಿ ಅವರು ಉಪೇಂದ್ರ ಅವರನ್ನು ಸಂಪರ್ಕಿಸಲಿದ್ದಾರಂತೆ. "'ಶ್' ನ ಮೂಲ ನಿರ್ದೇಶಕ ಅವರು ಮತ್ತು ಹೊಸ ಅವತಾರದ ಬಗ್ಗೆ ಅವರ ನಿಲುವುಗಳನ್ನು ನಾನು ತಿಳಿದುಕೊಳ್ಳಬೇಕಿದೆ. ಸಿನೆಮಾಗೆ ಹೊಸ ಅವತಾರವನ್ನು ನೀಡಿದ ಮೇಲೆ ಅದಕ್ಕೆ ಮತ್ತೆ ಸೆನ್ಸಾರ್ ಆಗಬೇಕು. ನಂತರ ಒಂದೆರಡು ತಿಂಗಳುಗಳಲ್ಲಿ ಬಿಡುಗಡೆ ಮಾಡಲಾಗುವುದು" ಎಂದು ತಿಳಿಸಿದ್ದಾರೆ.

ಚೆನ್ನೈನ ಪ್ರಸಾದ್ ಲ್ಯಾಬ್ ನಲ್ಲಿ ಚಿತ್ರದ ನವೀಕರಣ ಕೆಲಸ ನಡೆಯುತ್ತಿದ್ದು "ನಾನಿದನ್ನು ೨೦ ದಿನಗಳಲ್ಲಿ ಮುಗಿಸಬಹುದಿತ್ತು ಆದರೆ ಗುಣಮಟ್ಟ ತೃಪ್ತಿದಾಯಕವಗಿರುವುದಿಲ್ಲ. ನನ್ನಂತೆಯೇ ಕೇರಳ ಮತ್ತು ಇತರ ಭಾಗದ ನಿರ್ಮಾಪಕರು ಅವರ ಸಿನೆಮಾಗಳನ್ನು ನವೀಕರಣಗೊಳಿಸಲು ಸಾಲಿನಲ್ಲಿದ್ದಾರೆ" ಎಂದು ಅವರು ತಿಳಿಸಿದ್ದಾರೆ.

ಇದೂ ಅಲ್ಲದೆ 'ಶ್-೨'ಕ್ಕೂ ಮಾತುಕತೆ ನಡೆದಿದೆಯಂತೆ. "ಉಪೇಂದ್ರ ಸದ್ಯಕ್ಕೆ ಉಪ್ಪಿ೨ನಲ್ಲಿ ನಿರತರಾಗಿದ್ದಾರೆ. ಅವರಿಗೆ ಒತ್ತಡ ಹೇರಲು ಇಷ್ಟವಿಲ್ಲ. 'ಶ್೨' ಮಾಡಿದರೆ ಅವರೊಟ್ಟಿಗೆ ಮಾಡುತ್ತೇನೆ" ಎನ್ನುತ್ತಾರೆ ಕುಮಾರ್.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೈಕಮಾಂಡ್ ಸೂಚನೆಗೆ ಮಣಿದ ಸಿದ್ದರಾಮಯ್ಯ: ಮುಖ್ಯಮಂತ್ರಿ ಸ್ಥಾನ ತ್ಯಜಿಸಲು ಸಮ್ಮತಿ; ಕಾಂಗ್ರೆಸ್ ಪವರ್ ಶಿಫ್ಟ್‌ಗೆ ಕೌಂಟ್‌ಡೌನ್ ಶುರು, ಡಿಕೆಶಿಗೆ ಸಿಎಂ ಪಟ್ಟ..?

CMRL ಹಣ ಅಕ್ರಮ ವರ್ಗಾವಣೆ ಪ್ರಕರಣ: ಕೇರಳ ಮಾಜಿ ಸಿಎಂ ಪಿಣರಾಯಿ ವಿಜಯನ್ ನಿವಾಸದ ಮೇಲೆ ED ದಾಳಿ..!

IPL 2026: ಗುಜರಾತ್ ವಿರುದ್ಧ ಭರ್ಜರಿ ಗೆಲುವು; ಸತತ 2ನೇ ಬಾರಿ ಫೈನಲ್ಸ್ ಪ್ರವೇಶಿಸಿದ RCB

IPL 2026: 33 ಎಸೆತ, 9 ಸಿಕ್ಸರ್, ಒಂದೇ ಒಂದು ಡಾಟ್.. Rajat Patidar ಸ್ಫೋಟಕ ಬ್ಯಾಟಿಂಗ್ ಗೆ ಕೊಹ್ಲಿ ಸೇರಿ ಕ್ರೀಡಾಂಗಣವೇ ದಂಗು!

ಈ ವಾರವೇ ಸಿದ್ದರಾಮಯ್ಯ ರಾಜೀನಾಮೆ ಸಾಧ್ಯತೆ; ಆಪ್ತರ ಬಳಿ CM ಹೇಳಿದ್ದೇನು?: ಮೇ.27 ರಂದು ರಾಜ್ಯಕ್ಕೆ ಹೈಕಮಾಂಡ್ ನಾಯಕರು

SCROLL FOR NEXT