ನಿರ್ದೇಶಕ ಪ್ರೇಮ್, ಶಿವರಾಜ ಕುಮಾರ್ ಮತ್ತು ಸುದೀಪ್ 
ಸಿನಿಮಾ ಸುದ್ದಿ

ಪ್ರೇಮ್ ನಿರ್ದೇಶನದಲ್ಲಿ ಶಿವಣ್ಣ-ಕಿಚ್ಚ ಒಟ್ಟಿಗೆ ನಟನೆ

ನಿರ್ದೇಶಕ ಪ್ರೇಮ್ ಮಹತ್ತರವಾದ ಸಿನೆಮಾವೊಂದಕ್ಕೆ ಕೈಹಾಕಿದ್ದಾರೆ. ಗಾಂಧಿನಗರದ ವದಂತಿಗಳನ್ನು ನಂಬುವುದಾದರೆ ಕನ್ನಡದ ಇಬ್ಬರು ಖ್ಯಾತ ನಟರನ್ನು ಒಟ್ಟಿಗೆ ನಟಿಸಲು

ಬೆಂಗಳೂರು: ನಿರ್ದೇಶಕ ಪ್ರೇಮ್ ಮಹತ್ತರವಾದ ಸಿನೆಮಾವೊಂದಕ್ಕೆ ಕೈಹಾಕಿದ್ದಾರೆ. ಗಾಂಧಿನಗರದ ವದಂತಿಗಳನ್ನು ನಂಬುವುದಾದರೆ ಕನ್ನಡದ ಇಬ್ಬರು ಖ್ಯಾತ ನಟರನ್ನು ಒಟ್ಟಿಗೆ ನಟಿಸಲು ಒಪ್ಪಿಸಲು ಪ್ರೇಮ್ ಯಶಸ್ವಿಯಾಗಿದ್ದಾರೆ. ಶಿವರಾಜ ಕುಮಾರ್ ಮತ್ತು ಸುದೀಪ್ ಒಟ್ಟಿಗೆ ನಟಿಸುತ್ತಿರುವುದು ಇದೇ ಮೊದಲು.

ಸಿನೆಮಾದ ನಿರ್ಮಾಪಕರು ಈ ಯೋಜನೆ ಬಗ್ಗೆ ತುಟಿ ಬಿಚ್ಚುತ್ತಿಲ್ಲವಾದರೂ ಇದು ಸಿ ಆರ್ ಮನೋಹರ್ ಅವರ ದೊಡ್ಡ ಬಜೆಟ್ ಚಿತ್ರ ಎಂದು ಮೂಲಗಳಿಂದ ತಿಳಿದುಬಂದಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಇದೇ  ಡಿಸೆಂಬರ್ 7ರಂದು ಚಿತ್ರದ ಮುಹೂರ್ತ ನೆರವೇರಲಿದ್ದು, ಚಿತ್ರೀಕರಣಕ್ಕೂ ಮುಂಚಿನ ಕಾರ್ಯಗಳು ಪ್ರಾರಂಭವಾಗಿವೆ. ಚಿತ್ರೀಕರಣ ಜನವರಿ ೨೦೧೬ರಿಂದ ಪ್ರಾರಂಭವಾಗಲಿದೆ" ಎಂದು ಮೂಲಗಳು ತಿಳಿಸಿವೆ.

ಇದು ಬಹುಭಾಷಾ ಚಲನಚಿತ್ರ ಎಂದು ತಿಳಿದುಬಂದಿದ್ದು, ಸುದೀಪ್ ಎಲ್ಲ ಭಾಷೆಗಳಲ್ಲೂ ಪಾತ್ರ ಪಡೆದಿದ್ದರೆ, ಶಿವರಾಜ್ ಕುಮಾರ್ ಕನ್ನಡ ಅವತರಿಣಿಕೆಯಲ್ಲಿ ಮಾತ್ರ ಇರಲಿದ್ದಾರೆ ಎನ್ನಲಾಗಿದೆ. ಇವರಲ್ಲದೆ ದಕ್ಷಿಣ ಭಾರತದ ಇತರ ದೊಡ್ಡ ನಟರ ತಾರಾಗಣವೂ ಇರಲಿದೆಯಂತೆ. ಶಿವಣ್ಣ ಮತ್ತು ಸುದೀಪ್ ಜೋಡಿ ಇದೇ ಮೊದಲ ಬಾರಿಗೆ ಬೆಳ್ಳಿತೆರೆಯನ್ನು ಹಂಚಿಕೊಳ್ಳುತ್ತಿದ್ದು, ಚಿತ್ರಕ್ಕೆ 'ಕುಂಭಮೇಳ' ಎಂದು ಶೀರ್ಷಿಕೆ ಇಡಲಾಗುತ್ತದೆ  ಎಂಬ ಸುದ್ದಿಯೊಂದು ಗಾಂಧಿನಗರದಿಂದ ಕೇಳಿಬರುತ್ತಿದೆ.

ಸದ್ಯಕ್ಕೆ ಶಿವರಾಜಕುಮಾರ್ 'ಕಿಲ್ಲಿಂಗ್ ವೀರಪ್ಪನ್' ಬಿಡುಗಡೆಗೆ ಕಾಯುತ್ತಿದ್ದರೆ, 'ಕಬೀರ' ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಕೆ ಎಸ್ ರವಿಕುಮಾರ್ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಸಿನೆಮಾದ ಚಿತ್ರೀಕರಣದಲ್ಲಿ ಸುದೀಪ್ ನಿರತರಾಗಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT