ಸ್ವಿಟ್ಜರ್ಲ್ಯಾಂಡಿನ ಜ್ಯೂರಿಕ್ ನಲ್ಲಿ ಪ್ರದರ್ಶನಗೊಂಡ ರಂಗಿತರಂಗ 
ಸಿನಿಮಾ ಸುದ್ದಿ

ವಿದೇಶದಲ್ಲಿ ಕನ್ನಡ ಸಿನೆಮಾಗಳ ಕಲರವ

ಥ್ರಿಲ್ಲರ್ ಸಿನೆಮಾ ರಂಗಿತರಂಗ ದೇಶದಾದ್ಯಂತ ಈ ವಾರ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದ್ದು, ಕನ್ನಡ ಚಿತ್ರರಂಗಕ್ಕೆ ಇದು ಸುಗ್ಗಿ ಕಾಲ

ಬೆಂಗಳೂರು: ಥ್ರಿಲ್ಲರ್ ಸಿನೆಮಾ ರಂಗಿತರಂಗ ದೇಶದಾದ್ಯಂತ ಈ ವಾರ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದ್ದು, ಕನ್ನಡ ಚಿತ್ರರಂಗಕ್ಕೆ ಇದು ಸುಗ್ಗಿ ಕಾಲ ಎನ್ನಲಾಗುತ್ತಿದೆ. ಸಾಮಾನ್ಯವಾಗಿ ಕರ್ನಾಟಕದಲ್ಲಿ ಅನ್ಯಭಾಷೆಗಳ ಸಿನೆಮಾಗಳು ಗಲ್ಲಾಪೆಟ್ಟಿಯಲ್ಲಿ ಕೊಳ್ಳೆಹೊಡೆಯುವುದು ಸಾಮಾನ್ಯ. ಇತ್ತೀಚೆಗೆ ಕನ್ನಡ ಸಿನೆಮಾಗಳು ಕೂಡ ಅನ್ಯ ರಾಜ್ಯಗಳಲ್ಲಿ ಅನ್ಯ ದೇಶಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿರುವುದು ಕನ್ನಡ ಚಿತ್ರೋದ್ಯಮಕ್ಕೆ ವಸಂತ ಕಾಲ ಎನ್ನಬೇಕೆ?

ರಂಗಿತರಂಗ ಸಿನೆಮಾ ಗುರಗಾಂವ್, ಕೋಲ್ಕತ್ತಾ, ಪುಣೆ, ಮುಂಬೈ, ಕೊಚಿ, ಹೈದರಾಬಾದ್, ಚೆನ್ನೈ, ಅಮೆರಿಕಾದ ಮತ್ತು ಯುರೋಪಿನ ಪ್ರಮುಖ ನಗರಗಳಲ್ಲಿ ಉತ್ತಮ ಪ್ರದರ್ಶನ ಕಂಡಿದೆ.

ಚೈತನ್ಯ ನಿರ್ದೇಶನದ ಆಟಗಾರ ದೇಶದಾದ್ಯಂತ ಪಿವಿರ್ ಸಿನೆಮಾಮಂದಿರಗಳಲ್ಲಿ ಬಿಡುಗಡೆ ಕಾಣಲಿದೆ ಎನ್ನಲಾಗಿದೆ. ದ್ವಾರಕೀಶ್ ನಿರ್ಮಾಣ ಸಂಸ್ಥೆಯಿಂದ ನಿರ್ಮಾಣವಾಗಿರುವ ಈ ಸಿನೆಮಾದ ನಿರ್ಮಾಪಕ ಹೇಳುವಂತೆ ಮುಂಬೈನಲ್ಲಿ ಈಗಾಗಲೇ ಆಟಗಾರ ಒಂದು ವಾರ ಮುಗಿಸಿದೆಯಂತೆ. ಮುಂದಿನ ವಾರ ಚನ್ನೈ, ದೆಹಲಿ, ಕೋಲ್ಕತ್ತಾ, ಹೈದರಾಬಾದ್ ಮತ್ತು ಪುಣೆ ನಗರಗಳಲ್ಲಿ ಬಿಡುಗಡೆ ಕಾಣಲಿದೆಯಂತೆ.

ಚೆನ್ನೈನಲ್ಲಿ ರಂಗಿತರಂಗ ಎರಡನೇ ವಾರ ಓಡುತ್ತಿದ್ದು, ನಿರ್ದೇಶಕ ಅನೂಪ್ ಭಂಢಾರಿ ಅವರಿಗೆ ಎಲ್ಲಿಲ್ಲದ ಸಂತಸ. "ನನ್ನ ಕನಸು ಏನೆಂದರೆ ಕನ್ನಡ ಸಿನೆಮಾಗಳನ್ನು ಆಂಧ್ರ, ತಮಿಳುನಾಡು ಮತ್ತು ಇನ್ನಿತರ ರಾಜ್ಯಗಳಲ್ಲಿ ಕನಿಷ್ಠ ೧೦೦ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಬೇಕೆಂಬುದು" ಎನ್ನುತ್ತಾರೆ ಅನೂಪ್.

ಈ ಮಧ್ಯೆ ಉಪೇಂದ್ರ ನಿರ್ದೇಶನದ ಉಪ್ಪಿ೨ ಸಿನೆಮಾ ಕೂಡ ಅಮೆರಿಕಾದಾದ್ಯಂತ ಸುಮಾರು ೫೦-೬೦ ಸಿನೆಮಾಮಂದಿರಗಳಲ್ಲಿ ಬಿಡುಗಡೆ ಕಾಣಲಿದೆಯಂತೆ. ಆಟಗಾರ ಸೆಪ್ಟಂಬರ್ ೧೮ ರಂದು ಸುಮಾರು ೧೦ ದೇಶಗಳಲ್ಲಿ ೧೦೦ ಕಡೆ ಪ್ರದರ್ಶನ ಕಾಣಲಿದೆಯಂತೆ. "ನಾವು ಅಮೇರಿಕಾದಲ್ಲಿ ೨೦ ಪ್ರದರ್ಶನ, ಯೂರೋಪಿನಲ್ಲಿ ೧೬ ಶೋಗಳು ಆಸ್ಟ್ರೇಲಿಯಾದಲ್ಲಿ ೧೦ ಮತ್ತು ಕೆನಡಾದಲ್ಲಿ ೬ ಪ್ರದರ್ಶನಗಳನ್ನು ಹಮ್ಮಿಕೊಂಡಿದ್ದೇವೆ" ಎನ್ನುತ್ತಾರೆ ನಿರ್ಮಾಪಕ ಯೋಗಿಶ್.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT