ರಿಂಗ್ ಮಾಸ್ಟರ್ ಚಲನಚಿತ್ರದಲ್ಲಿ ಅರುಣ್ ಸಾಗರ್ 
ಸಿನಿಮಾ ಸುದ್ದಿ

'ರಿಂಗ್ ಮಾಸ್ಟರ್' ನ ಸ್ಫೂರ್ತಿ ಏನು?

ಚೊಚ್ಚಲ ನಿರ್ದೇಶಕ ವಿಶೃತ್ ನಾಯಕ್ ಪ್ರವಾಸ ಏಜನ್ಸಿ ನಡೆಸುತ್ತಾರೆ. ಸಣ್ಣ ಸ್ಫೂರ್ತಿಯಿಂದ ಬೆಳೆದ ಐಡಿಯಾ ದೊಡ್ಡದಾಗಿ ಈಗ 'ರಿಂಗ್ ಮಾಸ್ಟರ್' ರೂಪದಲ್ಲಿ ಪೂರ್ಣ

ಬೆಂಗಳೂರು: ಚೊಚ್ಚಲ ನಿರ್ದೇಶಕ ವಿಶೃತ್ ನಾಯಕ್ ಪ್ರವಾಸ ಏಜನ್ಸಿ ನಡೆಸುತ್ತಾರೆ. ಸಣ್ಣ ಸ್ಫೂರ್ತಿಯಿಂದ ಬೆಳೆದ ಐಡಿಯಾ ದೊಡ್ಡದಾಗಿ ಈಗ 'ರಿಂಗ್ ಮಾಸ್ಟರ್' ರೂಪದಲ್ಲಿ ಪೂರ್ಣ ಪ್ರಮಾಣದ ಚಿತ್ರವಾಗಿ ಬೆಳೆದಿದೆ.

ಆದರೆ ಇದು ಹಾಲಿವುಡ್ ಸಿನೆಮಾದ ನಕಲು ಎಂಬ ಆರೋಪ ಕೇಳಿ ಬರುತ್ತಿದ್ದು ಇದು ನಿರ್ದೇಶ ವಿಶೃತ್ ಗೆ ಬೇಸರ ತಂದಿದೆಯಂತೆ. ಇದನ್ನು ಅಲ್ಲಗೆಳೆಯುವ ಅವರು "ಯಾವುದರಿಂದಾದರೂ ಸ್ಫೂರ್ತಿ ತೆಗೆದುಕೊಳ್ಳುವುದು ಅನೈತಿಕ ಅಲ್ಲ. ನಾನು ಶಾರ್ಟ್ ಸಿನೆಮಾ 'ಮಿಸ್ ಬಿಹೇವಿಯರ್' ನಿಂದ ಸ್ಫೂರ್ತಿಗೊಂಡಿದ್ದು ನಿಜ, ಆದರೆ ಹಾಲಿವುಡ್ಡಿನಲ್ಲಿ ಈ ರೀತಿಯ ಯಾವ ಸಿನೆಮಾವನ್ನು ನಾನು ನೋಡಿಲ್ಲ" ಎನ್ನುತ್ತಾರೆ.

ಅರುಣ್ ಸಾಗರ್ ಮತ್ತು ಅನುಶ್ರೀ ನಟನೆಯ 'ರಿಂಗ್ ಮಾಸ್ಟರ್' ವಿನೂತನವಾಗಿ ಹೇಳಿರುವ ಕಥೆ ಎನ್ನುತ್ತಾರೆ ವಿಶೃತ್. "ಸ್ವಾತಂತ್ರ್ಯ ಮತ್ತು ಅದರ ದುರ್ಬಳಕೆಯ ನಡುವೆ ಸಣ್ಣ ಗೆರೆಯಿದೆ. ಇದೇ ಸಿನೆಮಾದ ಮುಖ್ಯ ಎಳೆ" ಎನ್ನುತ್ತಾರೆ.

ತಮ್ಮ ಪ್ರವಾಸ ಏಜನ್ಸಿಯಲ್ಲಿ ಭೇಟಿ ಮಾಡಿದ ಹಲವು ಜನರು ಈ ಸಿನೆಮಾದ ಸ್ಕ್ರಿಪ್ಟ್ ಗೆ ಸ್ಫೂರ್ತಿ ನೀಡಿದ್ದಾರೆ ಎನ್ನುವ ವಿಶೃತ್, ತಮ್ಮ ಪತ್ನಿ ಮೇಘನಾ ಜೋಯಿಸ್ ಅವರ ಸಹಕಾರವನ್ನು ನೆನಪಿಸಿಕೊಳ್ಳಲು ಮರೆಯುವುದಿಲ್ಲ. "ನಾನು ಸಾಕಷ್ಟು ಕಥೆಗಳನ್ನು ಓದುತ್ತಿದ್ದೆ ಮತ್ತು ನನಗೆ ಬರೆಯುವುದರಲ್ಲಿರುವ ಆಸಕ್ತಿಯನ್ನು ತಿಳಿದ ನನ್ನ ಪತ್ನಿ ನನ್ನ ಆಸಕ್ತಿಯನ್ನು ಅನುಸರಿಸುವುದಕ್ಕೆ ನೂಕಿದ್ದಲ್ಲದೆ, ಬೆನ್ನಿಗೆ ನಿಂತು ಸಹಕರಿಸಿದರು" ಎನುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT