ನಟ ಮನೋರಂಜನ್ 
ಸಿನಿಮಾ ಸುದ್ದಿ

ಡಬ್ಬಿಂಗ್ ನಿರತನಾಗಿರುವ 'ಸಾಹೇಬ' ಮನೋರಂಜನ್'

ಮನೋರಂಜನ್ ರವಿಚಂದ್ರನ್ ತಮ್ಮ ಚೊಚ್ಚಲ ಚಲನಚಿತ್ರ 'ಸಾಹೇಬ'ನಿಗೆ ಡಬ್ಬಿಂಗ್ ಬಹುತೇಕ ಮುಗಿಸಿರುವುದಕ್ಕೆ ಅತೀವ ಸಂತಸದಿಂದಿದ್ದಾರೆ. ಕಳೆದ ಕೆಲವು ದಿನಗಳಿಂದ ನಿರತನಾಗಿರುವ ನಟ ತಮ್ಮ

ಬೆಂಗಳೂರು: ಮನೋರಂಜನ್ ರವಿಚಂದ್ರನ್ ತಮ್ಮ ಚೊಚ್ಚಲ ಚಲನಚಿತ್ರ 'ಸಾಹೇಬ'ನಿಗೆ ಡಬ್ಬಿಂಗ್ ಬಹುತೇಕ ಮುಗಿಸಿರುವುದಕ್ಕೆ ಅತೀವ ಸಂತಸದಿಂದಿದ್ದಾರೆ. ಕಳೆದ ಕೆಲವು ದಿನಗಳಿಂದ ನಿರತನಾಗಿರುವ ನಟ ತಮ್ಮ ಡಬ್ಬಿಂಗ್ ಅನುಭವಗಳನ್ನು ಹಂಚಿಕೊಂಡಿದ್ದಾರೆ. 
"ಮೊದಲ ಎರಡು ದಿನಗಳು ಸ್ವಲ್ಪ ಕಷ್ಟ ಇತ್ತು" ಎನ್ನುವ ಅವರು "ಆದರೆ ಸ್ಟುಡಿಯೋಗೆ ಹೋಗುವ ಮುಂಚೆ ಸಿದ್ಧವಾಗಿ ಹೋಗುತ್ತಿದ್ದೆ. ಪಾತ್ರದ ನಟನೆಯ ಜೊತೆಗೆ ನಮ್ಮ ಕಂಠವನ್ನು ಸಿಂಕ್ ಮಾಡುವುದು ಸವಾಲಿನ ಕೆಲಸ ಎಂದು ತಿಳಿಯಿತು. ಆದರೆ ಅದು ಸಿನೆಮಾದ ಪ್ರಮುಖ ಅಂಗ. ಈಗ ನಾನು ಅದಕ್ಕೆ ನಿಧಾನವಾಗಿ ಹೊಂದಿಕೊಳ್ಳುತ್ತಿದ್ದೇನೆ" ಎನ್ನುತ್ತಾರೆ ಮನೋರಂಜನ್. ಇಂದು ಅವರ ಭಾಗದ ಡಬ್ಬಿಂಗ್ ನ ಕೊನೆಯ ದಿನ. 
ಇನ್ನು ಎರಡು ಹಾಡುಗಳ ಚಿತ್ರೀಕರಣ ಬಾಳಿಯುಳಿದಿದ್ದು ಈ ತಿಂಗಳ ಕೊನೆಗೆ ಚಿತ್ರತಂಡ ಇದನ್ನು ಸಂಪೂರ್ಣಗೊಳಿಸಲಿದೆ. "ಸಾಹೇಬ ಸಂಪೂರ್ಣಗೊಂಡ ನಂತರ ರಾಕ್ಲೈನ್ ವೆಂಕಟೇಶ್ ನಿರ್ಮಾಣದ, ನಂದ ಕಿಶೋರ್ ನಿರ್ದೇಶನದ ಎರಡನೇ ಸಿನೆಮಾದಲ್ಲಿ ತೊಡಗಿಸಿಕೊಳ್ಳಲಿದ್ದೇನೆ. ಅದು ಬಹುಷಃ ನವೆಂಬರ್ ನಲ್ಲಿ ಚಿತ್ರೀಕರಣ ಪ್ರರಾಂಭಿಸಲಿದೆ" ಎನ್ನುತ್ತಾರೆ ಮನೋರಂಜನ್. 
ಜಯಣ್ಣ ಕಂಬೈನ್ಸ್ ನಿರ್ಮಿಸುತ್ತಿರುವ 'ಸಾಹೇಬ' ನಿರ್ದೇಶಕ 'ಕಂಠಿ' ಖ್ಯಾತಿಯ ಭರತ್. ಶಾನ್ವಿ ಶ್ರೀವಾಸ್ತವ ನಾಯಕನಟಿಯಾಗಿದ್ದು, ವಿ ಹರಿಕೃಷ್ಣ ಸಂಗೀತ ನಿರ್ದೇಶಕ ಹಾಗು ಜಿ ಎಸ್ ವಿ ಸೀತಾರಾಮ್ ಸಿನೆಮ್ಯಾಟೋಗ್ರಾಫರ್. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಜೂನ್ 30ರೊಳಗೆ ಮುಗಿಸಿ: ರಾಜ್ಯ ಸರ್ಕಾರಕ್ಕೆ 'ಸುಪ್ರೀಂ' ಗಡುವು

'ಆ ದೇಶಕ್ಕೂ ನಾನೇ 'ಹಂಗಾಮಿ' ಸರ್ವೋಚ್ಛ ನಾಯಕ': Donald Trump ಘೋಷಣೆ, ಬೆಚ್ಚಿಬಿದ್ದ ವೆನೆಜುವೆಲಾ!

ಟಿ20 ವಿಶ್ವಕಪ್: 'ಅಲ್ಲಿ ಬೇಡ ಅಂದ್ರೆ ಇಲ್ಲಿ ಆಡಿ..': ಬಾಂಗ್ಲಾದೇಶಕ್ಕೆ ಹೊಸ ಮೈದಾನಗಳ ಸೂಚಿಸಿದ ICC

ಕ್ರಿಕೆಟ್ ಇತಿಹಾಸದಲ್ಲೇ ಮೊದಲು: ಅಂತಾರಾಷ್ಟ್ರೀಯ ಕ್ರಿಕೆಟ್ ಲೀಗ್ ನಲ್ಲಿ ಜೊತೆಯಾಗಿ ಕಣಕ್ಕಿಳಿದ ಅಪ್ಪ-ಮಗ.. ಯಾರಿವರು?

PSLV-C62 ಮಿಷನ್ ವಿಫಲ: ಕೊನೆಯ ಹಂತದಲ್ಲಿ ಎದುರಾದ ಸಮಸ್ಯೆ, ISROಗೆ ಹಿನ್ನಡೆ

SCROLL FOR NEXT