'ಮಾಸ್ತಿ ಗುಡಿ'ಯಲ್ಲಿ ದುನಿಯಾ ವಿಜಯ್ 
ಸಿನಿಮಾ ಸುದ್ದಿ

'ಮಾಸ್ತಿ ಗುಡಿ'ಗಾಗಿ 3ಡಿ ಮೊಬೈಲ್ ಗೇಮ್

ಮೊಬೈಲ್ ಆಪ್ ಸ್ಟೋರ್ ಗಳಲ್ಲಿ ಚಲನಚಿತ್ರ ಆಧಾರಿತ ಗೇಮ್ ಗಳು ಜನಪ್ರಿಯವಾಗುತ್ತಿರುವ ಹೊತ್ತಿನಲ್ಲಿ, ಈ ಟ್ರೆಂಡ್ ಬಳಸಿಕೊಳ್ಳಲು 'ಮಾಸ್ತಿಗುಡಿ' ಚಿತ್ರತಂಡ ಮುಂದಾಗಿದೆ.

ಬೆಂಗಳೂರು: ಮೊಬೈಲ್ ಆಪ್ ಸ್ಟೋರ್ ಗಳಲ್ಲಿ ಚಲನಚಿತ್ರ ಆಧಾರಿತ ಗೇಮ್ ಗಳು ಜನಪ್ರಿಯವಾಗುತ್ತಿರುವ ಹೊತ್ತಿನಲ್ಲಿ, ಈ ಟ್ರೆಂಡ್ ಬಳಸಿಕೊಳ್ಳಲು 'ಮಾಸ್ತಿಗುಡಿ' ಚಿತ್ರತಂಡ ಮುಂದಾಗಿದೆ. ಉತ್ತಮ ಗುಣಮಟ್ಟದ 3 ಡಿ ದೃಶ್ಯಗಳುಳ್ಳ ಈ ಗೇಮ್ ಅಭಿವೃದ್ಧಿಪಡಿಸಲು ನಿರ್ಮಾಪಕರು ವ್ಯಯಿಸುತ್ತಿರುವ ಮೊತ್ತ 30 ಲಕ್ಷ!
ಕನ್ನಡ ಸಿನೆಮಾ ರಂಗದಲ್ಲಿ ಸಿನೆಮಾ ಆಧಾರಿತ 3 ಡಿ ಗೇಮ್ ಆಪ್ ಇದೆ ಮೊದಲು ಎನ್ನುತ್ತಾರೆ ಈ ಗೇಮ್ ಹೊರತರುತ್ತಿರುವ ನಿರ್ಮಾಪಕ ಸುಂದರ್ ಪಿ ಗೌಡ್ರು. 
"ಮಾಸ್ತಿ ಗುಡಿ ಗೇಮ್ ನಲ್ಲಿ ಏಳು ಹಂತಗಳಿರುತ್ತವೆ ಮತ್ತು ಪ್ರತಿ ಹಂತದಲ್ಲಿ 10 ಉಪಹಂತಗಳಿರಲಿವೆ. ಇನ್ಫ್ಯಾಂಟ್ ಸ್ಟುಡಿಯೋ ಈ ಗೇಮ್ ಅಭಿವೃದ್ಧಿಪಡಿಸುತ್ತಿದೆ" ಎನ್ನುತ್ತಾರೆ ನಿರ್ಮಾಪಕ. 
ಸುಂದರ್ ಹೇಳುವಂತೆ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಈ ಗೇಮ್ ಬಿಡುಗಡೆಯಾಗಲಿದ್ದು, ದುನಿಯಾ ವಿಜಯ್, ಅಮೂಲ್ಯ, ಕೀರ್ತಿ ಕರಬಂಧ ಮತ್ತು ರವಿಶಂಕರ್ ಒಳಗೊಂಡಂತೆ ಸುಮಾರು 8 ರಿಂದ 10 ಸಿನೆಮಾದ ಪಾತ್ರಗಳು ಇರಲಿವೆಯಂತೆ. 
"ಪ್ರತಿ ಪಾತ್ರವನ್ನು ವಿನ್ಯಾಸ ಮಾಡುವುದಕ್ಕೆ ನಮಗೆ 50 ಸಾವಿರ ರೂ ತಗುಲಿದೆ. ಸದ್ಯಕ್ಕೆ ಹೀರೊ ಮತ್ತು ಇಬ್ಬರು ವಿಲನ್ ಪಾತ್ರಗಳ ವಿನ್ಯಾಸ ಮುಗಿಸಿದ್ದಾರೆ. ಉಳಿದ ಕೆಲಸ ನಡೆಯುತ್ತಿದೆ. ಈ ಗೇಮ್ ಸಿನೆಮಾದ ವಿಷಯಕ್ಕೆ ಸಂಬಂಧಿಸಿದ್ದು. ನಾವು ಆರು ಹಂತಗಳ ಈ ಗೇಮ್ ಅನ್ನು ಹಂತ ಹಂತವಾಗಿ ಬಿಡುಗಡೆ ಮಾಡುತ್ತೇವೆ. ಮತ್ತು ಏಳನೇ ಹಂತ 'ಮಾಸ್ತಿ ಗುಡಿ' ಸಿನೆಮಾದ ಬಿಡುಗಡೆಯ ದಿನ ಲೋಕಾರ್ಪಣೆಗೊಳಿಸಲಿದ್ದೇವೆ. ಎಲ್ಲ ಮೊಬೈಲ್ ನೆಟ್ ವರ್ಕ್ ಗಳಲ್ಲೂ ಈ ಗೇಮ್ ಸಿಗಲಿದೆ ಮತ್ತು ಗೂಗಲ್ ಪ್ಲೇಸ್ಟೋರ್ ನಿಂದ ಇದನ್ನು ಇಳಿಸಿಕೊಳ್ಳಬಹುದು. ಶೀಘ್ರದಲ್ಲೇ ಸಿನೆಮಾದ ಪ್ರಮೋ ಬಿಡುಗಡೆ ಮಾಡಿ, ಗೇಮ್ ನ ವಿವಿಧ ಹಂತಗಳನ್ನು ಬಿಡುಗಡೆ ಮಾಡಲಿದ್ದೇವೆ. ಹಾಗೆಯೇ ಈ ಗೇಮಿಂಗ್ ಆಪ್ ನಲ್ಲಿ ಸಿನೆಮಾದ ಕ್ಲಿಪ್ಪಿಂಗ್ ಗಳು, ಮೇಕಿಂಗ್ ವಿಡಿಯೋಗಳನ್ನು ಸೇರಿಸಿ ಪ್ರಚಾರಕ್ಕಾಗಿ ಬಳಸಿಕೊಳ್ಳಲಿದ್ದೇವೆ" ಎನ್ನುತ್ತಾರೆ ಸುಂದರ್. 
ನಾಗಶೇಖರ್ ನಿರ್ದೇಶನದ ಈ ಸಿನೆಮಾದಲ್ಲಿ ದೇವರಾಜ್, ಸುಹಾಸಿನಿ, ರಂಗಾಯಣ ರಘು, ಸಾಧು ಕೋಕಿಲಾ, ತಬಲಾ ನಾಣಿ, ಬುಲೆಟ್ ಪ್ರಕಾಶ್ ಮತ್ತು ಶರತ್ ಲೋಹಿತಾಶ್ವ ಕೂಡ ನಟಿಸುತ್ತಿರುವುದು ವಿಶೇಷ. ಸಾಧುಕೋಕಿಲಾ ಸಂಗೀತ ನೀಡಿದ್ದು, ಸತ್ಯ ಹೆಗಡೆ ಸಿನೆಮ್ಯಾಟೋಗ್ರಾಫರ್. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT