ಸಿನಿಮಾ ಸುದ್ದಿ

'ಗರುಡ' ಸಿನೆಮಾಗೆ ದೀಪಾ ಸನ್ನಿಧಿ ನಾಯಕ ನಟಿ

Guruprasad Narayana
ಬೆಂಗಳೂರು: 'ಚೌಕ' ಸಿನೆಮಾದಲ್ಲಿ ಕಳೆದ ಬಾರಿಗೆ ಕಾಣಿಸಿಕೊಂಡ ನಟಿ ದೀಪಾ ಸನ್ನಿಧಿ, ನಟ ದರ್ಶನ್ ಜೊತೆಗೆ ನಟಿಸಿರುವ 'ಚಕ್ರವರ್ತಿ' ಸಿನೆಮಾದ ಮೆಗಾ ಬಿಡುಗಡೆಗೆ ಕಾಯುತ್ತಿದ್ದಾರೆ. 
'ಮಾಂಝಾ' ಸಿನೆಮಾದ ಚಿತ್ರೀಕರಣ ಪ್ರಾರಂಭವಾಗಲು ಕಾಯುತ್ತಿರುವ ನಟಿ ಈಮಧ್ಯೆ ಮತ್ತೊಂದು ಸಿನೆಮಾಗೆ ಸಹಿ ಹಾಕಿದ್ದಾರೆ. 'ಗರುಡ' ಶೀರ್ಷಿಕೆಯೊತ್ತ ಈ ಸಿನೆಮಾದಲ್ಲಿ ಅವರು ಸಿದ್ಧಾರ್ಥ್ ಮಹೇಶ್ ಎದುರು ನಟಿಸಲಿದ್ದಾರೆ. ಈ ವಿಷಯವನ್ನು ಧೃಢೀಕರಿಸಿದ ದೀಪಾ "'ಗರುಡ' ಕಮರ್ಷಿಯಲ್ ಸಿನೆಮಾ ಮತ್ತು ಇದರಲ್ಲಿ ನನಗೆ ಒಳ್ಳೆಯ ಪಾತ್ರವಿದೆ. ಆಸಕ್ತಿದಾಯಕ ಚಿತ್ರತಂಡ. ಅವೆರೆಲ್ಲರೂ ಸಿನೆಮಾ ಬಗ್ಗೆ ಪ್ಯಾಷನೇಟ್ ಆಗಿರುವಂತವರು. ಒಂದು ತಿಂಗಳಲ್ಲಿ ಪ್ರಾರಂಭವಾಗುವ ಚಿತ್ರೀಕರಣವನ್ನು ಎದುರು ನೋಡುತ್ತಿದ್ದೇನೆ" ಎನ್ನುತ್ತಾರೆ. 
'ಮಾಂಝಾ' ಸಿನೆಮಾದಲ್ಲಿ ನಟಿ ಅನಿಶ್ ತೇಜೇಶ್ವರ್ ಎದುರು ನಟಿಸುತ್ತಿದ್ದಾರೆ. ಕೇವಲ ಸ್ಟಾರ್ ನಟರೊಂದಿಗೆ ಮಾತ್ರ ದೀಪಾ ನಟಿಸುವುದು ಎಂಬ ಗ್ರಹಿಕೆಯನ್ನು ಮುರಿಯಲು ದೀಪಾ ಮುಂದಾಗಿದ್ದಾರೆ. "ಕನ್ನಡ ಸಿನೆಮಾ ಉದ್ಯಮದಲ್ಲಿ ನನ್ನ ಬಗ್ಗೆ ತಪ್ಪುಗ್ರಹಿಕೆಯಿದೆ. ನಾನು ಸ್ಟಾರ್ ನಟರೊಂದಿಗೆ ಮಾತ್ರ ನಟಿಸಲು ಬಯಸುತ್ತೇನೆ ಎಂದು ಅವರು ತಿಳಿದಿದ್ದಾರೆ. ನಾನು ಹೊಸಬರೊಂದಿಗೆ ಕೆಲಸ ಮಾಡುವುದಿಲ್ಲ ಎಂದು ತಪ್ಪಾಗಿ ತಿಳಿದಿರುವ ಎಷ್ಟೋ ಜನ ನಿರ್ದೇಶಕರು ಮತ್ತು ನಿರ್ಮಾಪಕರು ನನ್ನನ್ನು ಕೇಳಲು ಎರಡು ಬಾರಿ ಚಿಂತಿಸುತ್ತಾರೆ ಎಂದು ಆಂತರಿಕ ಮೂಲಗಳಿಂದ ತಿಳಿದಿದ್ದೇನೆ. ಆದರೆ ಹಾಗೇನಿಲ್ಲ. ನಾನು ತಾಜಾ ವಿಷಯಗಳು ಮತ್ತು ಪಾತ್ರಗಳಲ್ಲಿ ನಟಿಸಲು, ಹೊಸ ತಂಡಗಳೊಂದಿಗೆ ಕೆಲಸ ಮಾಡಲು ಸದಾ ಸಿದ್ದ" ಎನ್ನುತ್ತಾರೆ. 
"ನಾನು ಅತಿ ಹೆಚ್ಚು ಹಣ ಕೇಳುತ್ತೇನೆ ಎಂಬ ಸುದ್ದಿ ಹಬ್ಬಿರುವುದು ಕೂಡ ದುರದೃಷ್ಟಕರ. ನಾನು ಹೆಚ್ಚಾಗಿ ಬೆರೆಯುವುದಿಲ್ಲ ಮತ್ತು ಹೆಚ್ಚೆಚ್ಚು ಜನರ ಜೊತೆಗೆ ಸಂವಹಿಸುವುದಿಲ್ಲ ಎಂಬ ಅಂಶ ನನ್ನ ಬಗ್ಗೆ ತಪ್ಪು ಮಾಹಿತಿ ಹರಡುವಂತೆ ಮಾಡಿದೆ. ಇದು ಬದಲಾಗುತ್ತದೆ ಎಂದು ನಂಬಿದ್ದೇನೆ" ಎನ್ನುತ್ತಾರೆ ದೀಪ. 
SCROLL FOR NEXT