ಸಾರಾ ಹರೀಶ್, ಮಂಜು ಮಾಂಡವ್ಯ ಮತ್ತು ಚಿಕ್ಕಣ್ಣ 
ಸಿನಿಮಾ ಸುದ್ದಿ

ತಮ್ಮದೇ ಚಿತ್ರಕ್ಕೆ ಮಂಜು ಮಾಂಡವ್ಯ ನಾಯಕ!

ಶ್ರೀ ಭರತ ಬಾಹುಬಲಿ ಚಿತ್ರಕ್ಕಾಗಿ ಮಂಜು ಮಾಂಡವ್ಯ ತುಂಬಾ ಶ್ರಮ ಹಾಕುತ್ತಿದ್ದಾರೆ. ಅವರ ನಿರ್ದೇಶನ...

ಶ್ರೀ ಭರತ ಬಾಹುಬಲಿ ಚಿತ್ರಕ್ಕಾಗಿ ಮಂಜು ಮಾಂಡವ್ಯ ತುಂಬಾ ಶ್ರಮ ಹಾಕುತ್ತಿದ್ದಾರೆ. ಅವರ ನಿರ್ದೇಶನದಲ್ಲಿಯೇ ಮೂಡಿಬರುತ್ತಿರುವ ಚಿತ್ರದಲ್ಲಿ ನಟನೆ ನಿರ್ದೇಶನ ಮತ್ತು ಕಾರ್ಯಕಾರಿ ನಿರ್ಮಾಪಕರಾಗಿ ಕೂಡ ಕೆಲಸ ಮಾಡುತ್ತಿದ್ದಾರೆ. ಐಶ್ವರ್ಯ ಫಿಲ್ಮ್ ಪ್ರೊಡಕ್ಷನ್ ನಲ್ಲಿ ಚಿತ್ರ ತಯಾರಾಗುತ್ತಿದೆ.

ಚಿತ್ರದ ಮೊದಲ ಭಾಗದ ಚಿತ್ರೀಕರಣ ಮುಗಿದಿದ್ದು ಜುಲೈ 2ನೇ ವಾರದಲ್ಲಿ ಮುಂದಿನ ಭಾಗದ ಚಿತ್ರೀಕರಣ ನಡೆಯಲಿದೆ. ಚಿತ್ರದಲ್ಲಿ ಮಂಜು ಮಾಂಡವ್ಯ ಜೊತೆಗೆ ಚಿಕ್ಕಣ್ಣ ಕೂಡ ಪ್ರಮುಖ ಪಾತ್ರ ನಿಭಾಯಿಸುತ್ತಿದ್ದಾರೆ. ಸಾರಾ ಹರೀಶ್ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.

45 ದಿನಗಳ ಚಿತ್ರೀಕರಣಕ್ಕೆ ನಾವು ಯೋಜನೆ ಹಾಕಿಕೊಂಡಿದ್ದು 12 ದಿನಗಳ ಶೂಟಿಂಗ್ ಮುಗಿದಿದೆ ಎನ್ನುವ ಮಂಜು ಮಾಂಡವ್ಯ ತಾವೇ ಏಕೆ ಚಿತ್ರದ ಹೀರೋ ಆದರು ಎಂಬುದಕ್ಕೆ ಈ ರೀತಿ ವಿವರಣೆ ನೀಡುತ್ತಾರೆ.  ರಾಜಾ ಹುಲಿಯಲ್ಲಿ ನನ್ನ ನಟನೆ ನೋಡಿ ಜನ ಗುರುತಿಸಿದರು.

ಯಶ್ ನಾಯಕನಾಗಿ ಅಭಿನಯಿಸಿರುವ ರಾಜಾಹುಲಿಯಲ್ಲಿ ನನ್ನ ನಟನೆಯನ್ನು ಗುರುತಿಸುವ ಅವಕಾಶ ಸಿಕ್ಕಿತು. ನಾನು ಕ್ಯಾಮರಾ ಮುಂದೆ ನಿಂತರೆ ಸುಂದರವಾಗಿ ಕಾಣುತ್ತೇನೆ ಮತ್ತು ಗ್ರಾಮೀಣ ಸೊಗಡು ಇರುವ ಪಾತ್ರವನ್ನು ಮಾಡಬೇಕು ಎಂದು ಸ್ನೇಹಿತರು ಮತ್ತು ಅಭಿಮಾನಿಗಳು ಹೇಳುತ್ತಿದ್ದರು. ಆಗ ಶ್ರೀ ಭರತ ಬಾಹುಬಲಿಯಂಥ ಕಥೆ ಸಿಕ್ಕಿತು. ಇದರಲ್ಲಿನ ಕಥೆಯ ಸಾರ ಹಾಸ್ಯಾಸ್ಪದವಾಗಿದೆ. ಇದನ್ನು ಚಿಕ್ಕಣ್ಣ ಜೊತೆ ಚರ್ಚೆ ನಡೆಸಿದೆ. ಅವರು ಕೂಡ ಒಪ್ಪಿಕೊಂಡರು. ಚಿತ್ರಕಥೆ ಬರೆಯುತ್ತಾ ಹೋದಂತೆ ನನಗೆ ಈ ಪಾತ್ರ ಹೊಂದಿಕೆಯಾಗುತ್ತದೆ ಎನಿಸಿತು. ಹೀಗಾಗಿ ಚಿತ್ರ ತಯಾರಿಸಲು ಆರಂಭಿಸಿದೆ ಎನ್ನುತ್ತಾರೆ.

ಚಿತ್ರದಲ್ಲಿ ನಾಯಕನನ್ನು ವೈಭವೀಕರಿಸುವ ವಿಷಯವಿಲ್ಲ ಹೀಗಾಗಿ ಯಾವುದೇ ಸ್ಟಾರ್ ನಟರನ್ನು ಕೇಳಲಿಲ್ಲ. ವ್ಯಾಪಾರದ ದೃಷ್ಟಿಯಿಂದ ನಾನು ಮತ್ತು ಚಿಕ್ಕಣ್ಣ ಈಗಾಗಲೇ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದೇವೆ ಹೀಗಾಗಿ ನಾವು ಆ ಪಾತ್ರಕ್ಕೆ ಸೂಕ್ತವಾಗುತ್ತೇವೆ ಎನಿಸಿತು ಎನ್ನುತ್ತಾರೆ ಮಂಜು ಮಾಂಡವ್ಯ.

ರಂಗಭೂಮಿ ಹಿನ್ನಲೆಯಿಂದ ಬಂದವರಾಗಿರುವುದರಿಂದ ಮಂಜು ಮಾಂಡವ್ಯಗೆ ಹಲವು ಕೆಲಸಗಳನ್ನು ನಿಭಾಯಿಸುವುದು ಕಷ್ಟವೆಂದು ಅನಿಸಲಿಲ್ಲವಂತೆ. ಮಾಸ್ಟರ್ ಪೀಸ್ ನಂತಹ ಚಿತ್ರಗಳನ್ನು ನಿರ್ದೇಶಿಸಿದ ಅವರು 30ಕ್ಕೂ ಹೆಚ್ಚು ಚಿತ್ರಗಳಿಗೆ ಕಥೆ ಬರೆದಿದ್ದಾರೆ.

ಶ್ರೀ ಭರತ ಬಾಹುಬಲಿಯಲ್ಲಿ ಸ್ಟಾನ್ ಎಂಬ ವಿದೇಶಿಗ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಇನ್ನು ನಟ ರಿಶಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮುಂಬೈಯ ಪ್ರವೀಣ್ ಎಂಬುವವರ ಛಾಯಾಗ್ರಹಣ ಮತ್ತು ಮಣಿಕಾಂತ್ ಕದ್ರಿಯವರ ಸಂಗೀತ ಚಿತ್ರಕ್ಕಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

AI- ಚಾಲಿತ ಡಿಜಿಟಲೀಕರಣ, SIR ಕುರಿತು CECಗೆ ಐದನೇ ಪತ್ರ ಬರೆದ ಮಮತಾ ಬ್ಯಾನರ್ಜಿ

Vijay Hazare Trophy: ಸೆಮಿಫೈನಲ್‌ಗೆ ಲಗ್ಗೆ ಇಟ್ಟ ಕರ್ನಾಟಕ

ಪ್ಯಾಕ್ಸ್ ಸಿಲಿಕಾ ಅಲೈಯನ್ಸ್‌ನ ಸದಸ್ಯ ದೇಶವಾಗಲಿದೆ; ಅಮೆರಿಕಕ್ಕೆ ಭಾರತಕ್ಕಿಂತ ಮುಖ್ಯ ದೇಶ ಮತ್ತೊಂದಿಲ್ಲ: ಸೆರ್ಗಿಯೊ ಗೋರ್

UP ದಲಿತ ಮಹಿಳೆ ಕೊಲೆ: ಯೋಗಿ ಸರ್ಕಾರ ಜಾತಿ, ಧರ್ಮದ ಆಧಾರದಲ್ಲಿ ದ್ವೇಷಕ್ಕೆ ಪ್ರಚೋದನೆ- ಕಾಂಗ್ರೆಸ್ ಕಿಡಿ!

Indian Stock Market: 5 ದಿನಗಳ ಸತತ ಕುಸಿತಕ್ಕೆ ಕೊನೆಗೂ ಬ್ರೇಕ್, Sensex 301 ಅಂಕ ಏರಿಕೆ!

SCROLL FOR NEXT