ಪ್ರಿಯಾಂಕಾ ಉಪೇಂದ್ರ-ಚೇತನ್ 
ಸಿನಿಮಾ ಸುದ್ದಿ

ಫೈರ್ ಸಂಸ್ಧೆ ತೊರೆದ ಕಾರಣ ಬಹಿರಂಗ, ನಟ ಚೇತನ್ ವಿರುದ್ಧ ಮತ್ತೆ ಗುಡುಗಿದ ಪ್ರಿಯಾಂಕಾ ಉಪೇಂದ್ರ!

ನಟ ಚೇತನ್ ಒಬ್ಬ ಆ್ಯಕ್ಟಿವಿಸ್ಟ್ ಥರ ನಡೆದುಕೊಳ್ಳುತ್ತಿದ್ದರು. ಆತನ ಏಕಪಕ್ಷೀಯ ನಿರ್ಧಾರಗಳಿಂದ ಬೇರಸವಾಗಿ ಫೈರ್ ಸಂಸ್ಥೆಯಿಂದ ಹೊರ ಬಂದಿದ್ದಾಗಿ ನಟಿ ಪ್ರಿಯಾಂಕಾ ಉಪೇಂದ್ರ ಹೇಳಿದ್ದಾರೆ...

ಬೆಂಗಳೂರು: ನಟ ಚೇತನ್ ಒಬ್ಬ ಆ್ಯಕ್ಟಿವಿಸ್ಟ್ ಥರ ನಡೆದುಕೊಳ್ಳುತ್ತಿದ್ದರು. ಆತನ ಏಕಪಕ್ಷೀಯ ನಿರ್ಧಾರಗಳಿಂದ ಬೇರಸವಾಗಿ ಫೈರ್ ಸಂಸ್ಥೆಯಿಂದ ಹೊರ ಬಂದಿದ್ದಾಗಿ ನಟಿ ಪ್ರಿಯಾಂಕಾ ಉಪೇಂದ್ರ ಹೇಳಿದ್ದಾರೆ. 
ಫೈರ್ ಸಂಸ್ಥೆ ಕೆಲಸ ಮಾಡುವ ರೀತಿ ನನಗೆ ಇಷ್ಟವಾಗುತ್ತಿರಲಿಲ್ಲ. ಚೇತನ್ ಅತಿರೇಕದ ನಡವಳಿಕೆ, ನಿರ್ಧಾರಗಳು ತೆಗೆದುಕೊಂಡು ನಾನು ವಿದೇಶದಲ್ಲಿ ಇರುವಾಗ ಫೈರ್ ತಂಡದಲ್ಲಿ ಬಹಳಷ್ಟು ಬದಲಾವಣೆ ಮಾಡಿದ್ದರು. ಇದು ನನಗೆ ಬಹಳ ನೋವು ತಂದಿತ್ತು. ಹೀಗಾಗಿ ನಾನು ಫೈರ್ ಸಂಸ್ಥೆಯಿಂದ ಹೊರ ಬಂದಿದ್ದೇನೆ ಎಂದು ಹೇಳಿದ್ದಾರೆ. 
ಶೃತಿಗೂ ಮುನ್ನ ಹಲವು ಮಹಿಳೆಯರು ಅನ್ಯಾಯದ ಬಗ್ಗೆ ಮಾತನಾಡಿದ್ದರು. ಆದರೆ ಅವರೆಲ್ಲನ್ನು ಬಿಟ್ಟು ಶೃತಿ ವಿಚಾರವೇ ಚೇತನ್ ಗೆ ದೊಡ್ಡದಾಗಿ ಕಾಣಿಸಿದೆ. ಇನ್ನು ಶೃತಿಗೆ ಆದ ಅನ್ಯಾಯದ ಕುರಿತು ಕಮಿಟಿಯಲ್ಲಿ ಚರ್ಚಿಸದೇ ನೇರವಾಗಿ ಮಾಧ್ಯಮಗಳ ಮುಂದೆ ಹೋಗಿದ್ದಾರೆ. ಸಂಸ್ಧೆಯಲ್ಲಿ ಏನೇ ನಡೆಯಬೇಕಾದರೂ ಚೇತನ್ ಉದ್ದೇಶದಂತೆ ನಡೆಯಬೇಕಾಗಿತ್ತು. ಇದರಿಂದ ನಾನು ಫೈರ್ ನಿಂದ ಹೊರಬಂದಿದ್ದಾಗಿ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT