ಹರಿಪ್ರಿಯಾ 
ಸಿನಿಮಾ ಸುದ್ದಿ

ಕನ್ನಡಿಗರೇ ‘ಕನ್ನಡ್ ಗೊತ್ತಿಲ್ಲ’ ಎಂದರೆ ಮೈ ಉರಿಯತ್ತೆ: ಸಂತೋಷ್ ಆನಂದರಾಮ್

ಕನ್ನಡ ಭಾಷೆಯ ಬಗೆಗಿನ ಸಂಕುಚಿತ ಮನೋಭಾವ ಹೋಗಲಾಡಿಸಿ, ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮಯೂರ ರಾಘವೇಂದ್ರ ನಿರ್ದೇಶನದ ‘ಕನ್ನಡ್ ಗೊತ್ತಿಲ್ಲ’ ಚಿತ್ರ ಸಿದ್ಧವಾಗಿದೆ

ಕನ್ನಡ ಭಾಷೆಯ ಬಗೆಗಿನ ಸಂಕುಚಿತ ಮನೋಭಾವ ಹೋಗಲಾಡಿಸಿ, ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮಯೂರ ರಾಘವೇಂದ್ರ ನಿರ್ದೇಶನದ ‘ಕನ್ನಡ್ ಗೊತ್ತಿಲ್ಲ’ ಚಿತ್ರ ಸಿದ್ಧವಾಗಿದೆ ಚಂದನವನದ ಸೊಬಗಿನ ತಾರೆ ಹರಿಪ್ರಿಯಾ ಪ್ರಮುಖ ಪಾತ್ರದಲ್ಲಿದ್ದು, ಭಾಷಾ ಪ್ರೇಮದ ಜೊತೆ ಸಸ್ಪೆನ್ಸ್, ಥ್ರಿಲ್ಲರ್ ಹೊಂದಿರುವ ಮಹಿಳಾ ಪ್ರಧಾನ ಚಿತ್ರಕಥೆಯನ್ನೊಳಗೊಂಡಿದೆ 
ಚಿತ್ರದ ಅಧಿಕೃತ ಟೀಸರ್ ಬಿಡುಗಡೆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನಿರ್ದೇಶಕ ಆನಂದ ರಾಮ್, “ಕನ್ನಡಿಗರಲ್ಲದವರು ಕನ್ನಡ್ ಗೊತ್ತಿಲ್ಲ ಎಂದರೆ ಹೇಗಾದರೂ ಹೇಳಿಕೊಡಬಹುದು ಆದರೆ ಕನ್ನಡದವರಾಗಿಯೂ ಕನ್ನಡ ತಿಳಿಯದಂತೆ ವರ್ತಿಸುವವರನ್ನು, ಕನ್ನಡವೆಂದರೆ ಕೀಳೆಂದು ಮೂಗು ಮುರಿಯುವವರನ್ನು ಮನ್ನಿಸಲಾಗದು ಅಂತಹವರನ್ನು ಕಂಡರೆ ಮೈ ಕೆಂಡವಾಗುತ್ತದೆ” ಎಂದರು 
ಚಿತ್ರದ ನಿರ್ದೇಶಕ ಮಯೂರ ರಾಘವೇಂದ್ರ,  “ಈ ಹಿಂದೆ ಕಂಪನಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ಕನ್ನಡೇತರರು ಕನ್ನಡ ಭಾಷೆಯ ಬಗ್ಗೆ ತೋರುತ್ತಿದ್ದ ಅನಾದರಣೆ, ಅಗೌರವದಿಂದ ಮನನೊಂದು, ಚಿತ್ರದ ಮೂಲಕ ಉತ್ತರ ನೀಡಬೇಕೆಂದು ಬಯಸಿದ್ದೆ ಅದಕ್ಕೆ ಅನೇಕ ಗೆಳೆಯರು ಸಹಕರಿಸಿದರು ನಿರ್ಮಾಪಕ ಕುಮಾರ ಕಂಠೀರವ ಬಂಡವಾಳ ಹೂಡಿದ್ದರಿಂದ ಚಿತ್ರ ತಯಾರಾಗಿದ್ದು, ಶೀಘ್ರದಲ್ಲೇ ಬಿಡುಗಡೆಯಾಗಲಿದೆ” ಎಂದು ತಿಳಿಸಿದರು ನಾಯಕಿ ಹರಿಪ್ರಿಯಾ, “ಚಿತ್ರದಲ್ಲಿ ತನಿಖಾಧಿಕಾರಿಯ ಪಾತ್ರ ನಿರ್ವಹಿಸುತ್ತಿದ್ದೇನೆ ‘ಕನ್ನಡ್ ಗೊತ್ತಿಲ್ಲ’ ಕಣಕಣದಲ್ಲೂ ಕನ್ನಡ ಎಂಬ ಅಡಿಬರಹ ಹೊಂದಿದೆ ಹೀಗಾಗಿ ಕನ್ನಡ ಭಾಷೆಗೂ ಸಸ್ಪೆನ್ಸ್, ಥ್ರಿಲ್ಲರ್ ಚಿತ್ರಕಥೆಗೂ ಸಂಬಂಧವೇನು ಎಂಬುದನ್ನು ಚಿತ್ರ ನೋಡಿಯೇ ತಿಳಿದುಕೊಳ್ಳಬೇಕು” ಎಂದು ಹೇಳಿದರು 
ಶ್ರೀ ರಾಮರತ್ನ, ಪ್ರೊಡಕ್ಷನ್ಸ್ ಅಡಿಯಲ್ಲಿ ಚಿತ್ರ ನಿರ್ಮಾಣವಾಗಿದ್ದು, ಖ್ಯಾತ ಸಂಗೀತ ನಿರ್ದೇಶಕ ಎ ಆರ್ ರೆಹಮಾನ್ ತಂಡದಲ್ಲಿರುವ ಏಕೈಕ ಕನ್ನಡಿಗ ನಕುಲ್ ಅಭ್ಯಂಕರ್ ‘ಕನ್ನಡ್ ಗೊತ್ತಿಲ್ಲ’ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ ಗಿರಿಧರ್ ಛಾಯಾಗ್ರಹಣವಿದೆ ತಾರಾಗಣದಲ್ಲಿ ಹರಿಪ್ರಿಯಾ, ಸುಧಾರಾಣಿ, ಮಜಾ ಟಾಕೀಸ್ ಖ್ಯಾತಿಯ ಪವನ್ ಗೌಡ, ರೋಹಿತ್ ಭಾನುಪ್ರಕಾಶ್, ರೆಮೊ ಮೊದಲಾದವರಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT