ಪುನೀತ್ ರಾಜ್ ಕುಮಾರ್, ಪವನ್ ಒಡೆಯರ್ 
ಸಿನಿಮಾ ಸುದ್ದಿ

'ನಟ ಸಾರ್ವಭೌಮ' ಚಿತ್ರೀಕರಣ ವೇಳೆ ಪ್ರತಿಯೊಬ್ಬರೂ ಅತ್ಯುತ್ಸಾಹದಿಂದ ಕೆಲಸ: ಪವನ್ ಒಡೆಯರ್

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರೊಂದಿಗೆ ಕೆಲಸ ಮಾಡುವುದೇ ಒಂದು ರೀತಿಯ ಖುಷಿಯಾಗುತ್ತಿರುತ್ತದೆ ಎಂದು ನಟಸಾರ್ವಭೌಮ ಚಿತ್ರ ನಿರ್ದೇಶಕ ಪವನ್ ಒಡೆಯರ್ ಹೇಳಿದ್ದಾರೆ.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್  ಅವರೊಂದಿಗೆ ಕೆಲಸ ಮಾಡುವುದೇ ಒಂದು ರೀತಿಯ ಖುಷಿಯಾಗುತ್ತಿರುತ್ತದೆ ಎಂದು ನಟಸಾರ್ವಭೌಮ ಚಿತ್ರ ನಿರ್ದೇಶಕ ಪವನ್ ಒಡೆಯರ್ ಹೇಳಿದ್ದಾರೆ.

ರಣವಿಕ್ರಮದಂತಹ ಹಿಟ್ ಚಿತ್ರ ನೀಡಿದ ಪವನ್ ಒಡೆಯರ್ ಹಾಗೂ ಪುನೀತ್ ಕಾಂಬಿನೇಷ್ ನಲ್ಲಿ ನಟ ಸಾರ್ವಭೌಮ ಇದೇ ತಿಂಗಳ 7 ರಂದು ತೆರೆಗೆ ಬರುತ್ತಿದ್ದು, ಈ  ಚಿತ್ರದಲ್ಲಿ ಸೆಂಟಿಮೆಂಟ್ಸ್, ದ್ವೇಷ, ಹಾಸ್ಯ, ಪ್ರೀತಿ ಹಾಗೂ ಭಾವನೆ ಎಲ್ಲವೂ ಮಿತವಾಗಿ ಸಂಮ್ಮಿಳಿತವಾಗಿದೆ ಎಂದು ಪವನ್  ಒಡೆಯರ್ ತಿಳಿಸಿದ್ದಾರೆ.

ಆದಾಗ್ಯೂ, ಚಿತ್ರಕಥೆ, ಸಂಭಾಷಣೆ, ನಿರೂಪಣೆ, ತಾರಾಗಣ ಪ್ರತಿಯೊಂದು ಸಿನಿಮಾದಲ್ಲೂ ಬೇರೆ ಬೇರೆಯಾಗಿರುತ್ತದೆ ಎಂಬುದನ್ನು ಅವರು ನಂಬಿದ್ದಾರೆ.

ಗೂಗ್ಲಿ- ಯಶ್, ರಣವಿಕ್ರಮ- ಪುನೀತ್, ಗೋವಿಂದಾಯ ನಮಃ- ಕೋಮಲ್, ಜೆಸ್ಸಿ- ಧನಂಜಯ್ ಮತ್ತು ನಟರಾಜ ಸರ್ವೀಸ್ ಸಿನಿಮಾದಲ್ಲಿ ಶರಣ್ ಅವರನ್ನು ಬೇರೆ ಬೇರೆ ರೀತಿಯಲ್ಲಿ ತೋರಿಸಲಾಗಿದೆ. ಈಗ ಮತ್ತೊಂದು ಚಿತ್ರದಲ್ಲಿ ಪುನೀತ್ ಅವರನ್ನು ವಿಭಿನ್ನ ರೀತಿಯಲ್ಲಿ ತೋರಿಸಲಾಗುತ್ತಿದೆ ಎನ್ನುತ್ತಾರೆ.

 ಜನಾರ್ಧನ್ ಮಹರ್ಷಿ ಧೀರ್ಘ ಕಾಲದಿಂದ ರಚಿಸಿದ  ಕಥೆಗೆ ಕೆಲ ಬದಲಾವಣೆ ಮಾಡಿ ಚಿತ್ರಕಥೆ ಸೃಷ್ಟಿಸಿದ್ದು, ಹೊಸ ಕಥೆ, ಪಾತ್ರ ವಿಶೇಷವಾಗಿ ಪುನೀತ್ ವಿಭಿನ್ನ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ಪವನ್ ಒಡೆಯರ್ ಹೇಳಿದ್ದಾರೆ.

ಪುನೀತ್ ರಾಜ್ ಕುಮಾರ್ ನಿರಂತರವಾಗಿ ಮಾಸ್ ಹಿರೋ ಅಲ್ಲ.  ಅವರೊಬ್ಬ ಸಂಪೂರ್ಣ ಪ್ಯಾಕೇಜ್ ಇದ್ದ ಹಾಗೆ. ತೆರೆಯ ಮೇಲೆ ಚೆನ್ನಾಗಿ ಹೊಡೆಯಬಲ್ಲರೂ, ಅದೇ ರೀತಿಯಲ್ಲಿ ಚೆನ್ನಾಗಿ ನೃತ್ಯ ಮಾಡಬಲ್ಲರು, ಈ ಚಿತ್ರದಲ್ಲಿ ಅವರು ಪೋಟೋಜರ್ನಲಿಸ್ಟ್ ಆಗಿ ಕಾಣಿಸಿಕೊಂಡಿದ್ದಾರೆ.  ಅವರ ಅತ್ಸುತ್ಸಾಹ ಮತ್ತೊಂದು ಪೂರಕ ಅಂಶವಾಗಿದೆ ಎಂದಿದ್ದಾರೆ.

ನಟ ಸಾರ್ವಭೌಮ ಚಿತ್ರೀಕರಣ ವೇಳೆಯಲ್ಲಿ ಪ್ರತಿಯೊಬ್ಬರು ಅತ್ಯುತ್ಸಾಹದಿಂದ ಕೆಲಸ ಮಾಡಿದರು. ಎಲ್ಲ ತಂತ್ರಜ್ಞರು ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸಿದ್ದಾರೆ. ರಾಕ್ ಲೈನ್ ವೆಂಕಟೇಶ್ ಬ್ಯಾನರ್ ಅಡಿಯಲ್ಲಿ ಅನುಪಮ ಪರಮೇಶ್ವರನ್ ಮತ್ತು ರಚಿತಾರಾಮ್ ಅವರೊಂದಿಗೆ ಮೊದಲ ಬಾರಿಗೆ ಕೆಲಸ ಮಾಡಿದ್ದಾಗಿ ಪವನ್ ಒಡೆಯರ್ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Delhi Red Fort blast: ಉಗ್ರ ಉಮರ್‌ಗೆ ಆಶ್ರಯ ನೀಡಿದ್ದ ಆರೋಪಿ ಬಂಧನ, NIA ವಿಚಾರಣೆ

ಸಾಂವಿಧಾನಿಕ ಕರ್ತವ್ಯಗಳು ಪ್ರಜಾಪ್ರಭುತ್ವದ ಅಡಿಪಾಯ: ದೇಶದ ನಾಗರಿಕರಿಗೆ ಪ್ರಧಾನಿ ಮೋದಿ ಪತ್ರ

ಅರುಣಾಚಲ ಪ್ರದೇಶ ಭಾರತದ "ಅವಿಭಾಜ್ಯ-ಅಳಿಸಲಾಗದ" ಭಾಗ: ಚೀನಾಗೆ ಭಾರತ ತಿರುಗೇಟು

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಹಳದಿ ಮಾರ್ಗದ ಸಂಚಾರ ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇ ಶುರು..!

ಅಯೋಧ್ಯೆ ಧರ್ಮಧ್ವಜದಲ್ಲಿರುವ ಕೋವಿದಾರ ಮರ: ರಾಜವೃಕ್ಷಕ್ಕೂ, ಶ್ರೀರಾಮಚಂದ್ರನಿಗೂ ಅದೆಂಥ ನಂಟು? ತ್ರೇತಾಯುಗದಲ್ಲಿದ್ದ ದೈವಿಕ ಮರದ ವಿಶೇಷತೆ ಏನು?

SCROLL FOR NEXT