ನವರಸ ನಾಯಕ ಜಗ್ಗೇಶ್ ಗೆ ಸಿದ್ದಗಂಗೆ ಶ್ರೀಗಳ ಪಾದುಕೆ ಸಿಕ್ಕ ಕಥೆ! 
ಸಿನಿಮಾ ಸುದ್ದಿ

ನವರಸ ನಾಯಕ ಜಗ್ಗೇಶ್ ಗೆ ಸಿದ್ದಗಂಗೆ ಶ್ರೀಗಳ ಪಾದುಕೆ ಸಿಕ್ಕ ಕಥೆ!

: ಸ್ಯಾಂಡಲ್ ವುಡ್ ನಟ, ನವರಸ ನಾಯಕ ಜಗ್ಗೇಶ್ ಸಿದ್ದಗಂಗೆಯ ಕಾಯಕಯೋಗಿ, ಶತಾಯುಷಿ ಡಾ. ಶಿವಕುಮಾರ ಶ್ರೀಗಳ ಪರಮ ಭಕ್ತರಾಗಿದ್ದವರು. ಇವರ ಭಕ್ತಿಗೆ ಶ್ರೀಗಳಿಂದ ಅಪೂರ್ವ ಕಾಣಿಕೆಯೇ ಸಿಕ್ಕಿತ್ತು

ಬೆಂಗಳೂರು: ಸ್ಯಾಂಡಲ್ ವುಡ್ ನಟ, ನವರಸ ನಾಯಕ ಜಗ್ಗೇಶ್ ಸಿದ್ದಗಂಗೆಯ ಕಾಯಕಯೋಗಿ, ಶತಾಯುಷಿ ಡಾ. ಶಿವಕುಮಾರ ಶ್ರೀಗಳ ಪರಮ ಭಕ್ತರಾಗಿದ್ದವರು. ಇವರ ಭಕ್ತಿಗೆ ಶ್ರೀಗಳಿಂದ ಅಪೂರ್ವ ಕಾಣಿಕೆಯೇ ಸಿಕ್ಕಿತ್ತು. ಅದೇನೆಂದರೆ ಶ್ರೀಗಳು ಜಗ್ಗೇಶ್ ಅವರಿಗೆ ತಮ್ಮ ಪಾದುಕೆಗಳನ್ನೇ ನೀಡಿದ್ದರು. 
ಹೀಗೆ ಜಗ್ಗೇಶ್ ಅವರಿಗೆ ಶ್ರೀಗಳ ಪಾದುಕೆ ಸಿಕ್ಕಿದ್ದ ಹಿನ್ನೆಲೆ ಅತ್ಯಂತ ವಿಶಿಷ್ಟವಾಗಿತ್ತು. 
ಕೆಲ ವರ್ಷಗಳ ಹಿಂದೆ ಜಗ್ಗೇಶ್ ತಮ್ಮ ಪತ್ನಿ ಪರಿಮಳ ಅವರೊಡನೆ ಸಿದ್ದಗಂಗೆ ಶ್ರೀಮಠಕ್ಕೆ ಭೇಟಿ ನೀಡಿದ್ದರು.ಆಗ ಶ್ರೀಗಳ ಪಾದಪೂಜೆ ಮಾಡಿ ಆಶೀರ್ವಾದ ಪಡೆದಿದ್ದರು. ಆವೇಳೆ ಶಿವಕುಮಾರ ಶ್ರೀಗಳು ಪಾದಪೂಜೆ ಮಾಡಿದ್ದ ಪಾದುಕೆಗಳನ್ನೇ ಜಗ್ಗೇಶ್ ದಂಪತಿಗಳಿಗೆ ನೀಡಿ ಆಶೀರ್ವದಿಸಿದ್ದರು.
ಹೀಗೆ ಶ್ರೀಗಳು ತಮ್ಮ ಆಶೀರ್ವಾದಪೂರ್ವಕ ನೀಡಿದ್ದ ಪಾದುಕೆಗಳನ್ನು ಧನ್ಯರಾಗಿದ್ದ ಜಗ್ಗೇಶ್ತಮ್ಮ ಮನೆ ದೇವರ ಕೋಣೆಯಲ್ಲಿ ಅದನ್ನು ಇಟ್ಟಿದ್ದು ನಿತ್ಯವೂ ಪೂಜೆ ನೆರವೇರಿಸುತ್ತಿದ್ದಾರೆ.ಶ್ರೀಗಳು ಇಂದು (ಸೋಮವಾರ) ಅಗಲಿದ ಹಿನ್ನೆಲೆಯಲ್ಲಿ ನಟ ಈ ನೆನಪನ್ನು ಟ್ವಿಟ್ಟರ್ ಮೂಲಕ ಹಂಚಿಕೊಂಡಿದ್ದಾರೆ.
ನಿಮ್ಮ ಆತ್ಮ ಶಿವನಲ್ಲಿ ಲೀನವಾಗಲಿ..
ನಿಮ್ಮ ಆಶೀರ್ವಾದ ಪಡೆದ ನಾವು ಧನ್ಯ..
ಓಂ ನಮಃ ಶಿವಾಯಃ..ಓಂ ಶಾಂತಿ.. 
ಎಂದು ನಟ ಜಗ್ಗೇಶ್ ಒಂದು ಟ್ವೀಟ್ ನಲ್ಲಿ ಹೇಳಿದ್ದರೆ ಇನ್ನೊಂದು ಟ್ವೀಟ್ ನಲ್ಲಿ ಶ್ರೀ ಶ್ರೀ ಶಿವಕುಮಾರಸ್ವಾಮಿಜೀ ಪಾದುಕೆ ಪಡೆದ ನಾವೆ ಧನ್ಯರು.. ಓಂ ನಮಃ ಶಿವಾಯಃ.. ಎಂದು ಬರೆದುಕೊಂಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT