ರವೀನಾ ಟಂಡನ್ 
ಸಿನಿಮಾ ಸುದ್ದಿ

ನಾಗರಹೊಳೆ, ಕಬಿನಿಗೆ ಹೋಗುವುದೆಂದರೆ ನಂಗಿಷ್ಟ: ರವೀನಾ ಟಂಡನ್

ತಮ್ಮ ನೆಚ್ಚಿನ ನಗರಗಳ ಬಗೆಗೆ ಹೇಳುವಾಗ ಬಾಲಿವುಡ್ ನಟಿ ರವೀನಾ ಟಂಡನ್ ಗೆ ಬೆಂಗಳೂರು ಹಾಗೂ ಮೈಸೂರುಗಳ ನಡುವೆ ವ್ಯತ್ಯಾಸ ಹುಡುಕುವುದು ಕಷ್ಟವಾಗುತ್ತದೆಯಂತೆ. "ಒಂದು ಕಾಲದಲ್ಲಿ ಬೆಂಗಳೂರನ್ನು ಗಾರ್ಡನ್ ಸಿಟಿ ಎನ್ನಲಾಗುತ್ತಿತ್ತು.ನಗರದ ಕೆರೆಗಳಿಂದ ಅದು ಹೆಸರಾಗಿತ್ತು. ಆದರೆ ಇಂದು, ಬೆಂಗಳೂರು ಭಾರೀ ವಾಹನ ದಟ್ಟಣೆಗೆಹೆಸರುವಾಸಿಯಾಗಿದೆ, ” ನಟಿ ಹೇಳೀದ್ದಾರೆ.

ತಮ್ಮ ನೆಚ್ಚಿನ ನಗರಗಳ ಬಗೆಗೆ ಹೇಳುವಾಗ ಬಾಲಿವುಡ್ ನಟಿ ರವೀನಾ ಟಂಡನ್ ಗೆ ಬೆಂಗಳೂರು ಹಾಗೂ ಮೈಸೂರುಗಳ ನಡುವೆ ವ್ಯತ್ಯಾಸ ಹುಡುಕುವುದು ಕಷ್ಟವಾಗುತ್ತದೆಯಂತೆ. "ಒಂದು ಕಾಲದಲ್ಲಿ ಬೆಂಗಳೂರನ್ನು ಗಾರ್ಡನ್ ಸಿಟಿ ಎನ್ನಲಾಗುತ್ತಿತ್ತು.ನಗರದ ಕೆರೆಗಳಿಂದ ಅದು ಹೆಸರಾಗಿತ್ತು. ಆದರೆ ಇಂದು, ಬೆಂಗಳೂರು ಭಾರೀ ವಾಹನ ದಟ್ಟಣೆಗೆಹೆಸರುವಾಸಿಯಾಗಿದೆ, ” ನಟಿ ಹೇಳೀದ್ದಾರೆ.

ಕೆಜಿಎಫ್ ಚಾಪ್ಟರ್ 2ಚಿತ್ರದ ಚಿತ್ರೀಕರಣಕ್ಕಾಗಿ ಮೈಸೂರಿನಲ್ಲಿ ಶೂಟಿಂಗ್ ನಡೆಯಲಿದ್ದು ಇದಕ್ಕೆ ನಟಿ ರವೀನಾ ಬೆಂಗಳೂರಿಗೆ ಆಗಮಿಸಿದ್ದಾರೆ..."ಅವರು ಕೆಜಿಎಫ್ ಚಿತ್ರೀಕರಣದ ಬಗ್ಗೆ ಚರ್ಚಿಸುತ್ತಿದ್ದಾಗ ನಾನವರಿಗೆ ಮೈಸೂರಿನಲ್ಲಿ ಶೂಟಿಂಗ್ ನಡೆಸಲು ಒತ್ತಾಯಿಸಿದ್ದೆ," ರವೀನಾ ಹೇಳಿದರು.

"ಮೈಸೂರಿನೊಡನೆ ನಾನು ವಿಶೇಷ ಲಿಂಕ್ ಹೊಂದಿದ್ದೇನೆ. ಇದು ನನಗೆ 80-90 ರ ದಶಕದ ಹಳೆಯ ಬೆಂಗಳೂರನ್ನು ನೆನಪಿಸುತ್ತದೆ. ನನ್ನ ಕೆಲವು ಆತ್ಮೀಯ ಗೆಳೆಯರು ನಗರದಲ್ಲಿ ವಾಸಿಸುತ್ತಿರುವುದರಿಂದ ನಾನು ಅನೇಕ ಬಾರಿ ಮೈಸೂರಿಗೆ ಬರುತ್ತೇನೆ.ಈ ಸ್ಥಳದ ಬಗ್ಗೆ ನನಗೆ ತುಂಬಾ ಪರಿಚಯವಿದೆ ”ಎಂದು ಅವರು ಹೇಳಿದರು.ರವೀನಾ ನಾಗರಹೊಳೆ ಹಾಗೂ ಕಬಿನಿಗಳಿಗೆ ತೆರಳುವುದನ್ನು ಇಷ್ಟಪಡುತ್ತಾರೆ.

“ನಾನು ಕಾಡಿಗೆ ಹೋಗುವುದನ್ನು ಇಷ್ಟಪಡುತ್ತೇನೆ, ಮತ್ತು ನಾನು ಮುಂಬೈಗೆ ಹಿಂದಿರುಗುವ ಮೊದಲು ಆ ಪ್ರವಾಸ ಕೈಗೊಳ್ಳುತ್ತೇನೆ.  ಮೈಸೂರಿನ ಜನರು ನಿಜವಾಗಿಯೂ ಅದೃಷ್ಟವಂತರು ಎಂದು ನಾನು ಯಾವಾಗಲೂ ಹೇಳುತ್ತೇನೆ.ಮತ್ತು ಮುಂದಿನ ದಿನಗಳಲ್ಲಿ ಮೈಸೂರು ಕೂಡ ಬೆಂಗಳೂರಿನಂತೆ ಆಗುವುದಿಲ್ಲ ಎಂದು ನಾನು ಭಾವಿಸುತ್ತೇನೆ, ” ನಟಿ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT