ಸಿನಿಮಾ ಸುದ್ದಿ

ಜಾಲತಾಣ ಬಲ್ಲವನಿಗೆ ಕೋಟಿಕಣ್ಣು ಅರಿವಿರಲಿ ಮನುಜ: ಜಾರುವ ಪರದೆಯ ಮುಂದೆ ನಾಟಕ ನೈಜವಿರಲಿ

Shilpa D

ಬೆಂಗಳೂರು: ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಈಡಾಗಿರುವ ಡ್ರೋನ್ ಪ್ರತಾಪ್ ಖಾಸಗಿ ವಾಹಿನಿಯೊಂದರಲ್ಲಿ ಸುಮಾರು ಮೂರು ಗಂಟೆಗಳ ಕಾಲ ಕುಳಿತು ತನ್ನ ಬಗೆಗಿನ ಆರೋಪಗಳಿಗೆ ಉತ್ತರ ನೀಡಿದ್ದಾನೆ. 

ಡ್ರೋಣ್ ಪ್ರತಾಪ್ ನನ್ನು ನಾಡಿಗೆ ಪರಿಚಯಿಸಿ ತಪ್ಪು ಮಾಡಿದೆ’ ಎಂದು ಇತ್ತೀಚೆಗಷ್ಟೇ ಹೇಳಿದ್ದ ಹಿರಿಯ ನಟ ಜಗ್ಗೇಶ್, ಈತನ ಉತ್ತರಗಳನ್ನೆಲ್ಲ ಟಿವಿಯಲ್ಲಿ ನೋಡಿ ತಮ್ಮ ಅಭಿಪ್ರಾಯವನ್ನು ಟ್ವಿಟ್ಟರ್ ನಲ್ಲಿ ಮಾರ್ಮಿಕವಾಗಿ ಹಂಚಿಕೊಂಡಿದ್ದಾರೆ.

ಪ್ರತಾಪ್ ಸಂದರ್ಶನ ನಡೆಯುತ್ತಿದ್ದ ಸಮಯದಲ್ಲೇ ಸರಣಿ ಟ್ವೀಟ್‌ಗಳನ್ನು ಮಾಡಿರುವ ಜಗ್ಗೇಶ್ ಎಲ್ಲಿಯೂ ಪ್ರತಾಪ್‌ನ ಹೆಸರನ್ನು ಪ್ರಸ್ತಾಪಿಸಿಲ್ಲ. ‘‘ಪ್ರಾಮಾಣಿಕವಾಗಿ ಕಲಿತು ಅರಿತ ಜ್ಞಾನಿ ಸಾವಿರ ಅನುಮಾನದ ಪ್ರಶ್ನೆಗೆ ಒಂದೆ ಮಾತಿನಲ್ಲಿ ಸಾಕ್ಷಿಸಮೇತ ಉತ್ತರಕೊಟ್ಟು ಪುಟಿದೇಳುತ್ತಾನೆ! ಆಂತರ್ಯದಲ್ಲಿ ಗೆದ್ದು ಗಳಿಸಲು ವಾಮಮಾರ್ಗ ಅನುಸರಿಸುವವ ಮಾತಿಗೆ ಮಾತು ಪೋಣಿಸಿ ಅನುಮಾನಿಸಿದವರ ದಾರಿ ತಪ್ಪಿಸಿ ಬೀಸುವ ದೊಣ್ಣೆ ತಪ್ಪಿಸಿಕೊಳ್ಳಲು ಯತ್ನಿಸುತ್ತಾನೆ! ಜಾಲತಾಣ ಬಲ್ಲವರಿಗೆ ಕೋಟಿ ಕಣ್ಣು ಅರಿವಿರಲಿ ಮನುಜ!’’ ಎಂದು ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ.
 

SCROLL FOR NEXT