ಕಿರುತೆರೆಗೂ ಕೊರೋನಾ ಭೀತಿ! ಮಾರ್ಚ್ 31ರವರೆಗೆ ಧಾರಾವಾಹಿ ಚಿತ್ರೀಕರಣಕ್ಕೆ ಬ್ರೇಕ್ 
ಸಿನಿಮಾ ಸುದ್ದಿ

ಕಿರುತೆರೆಗೂ ಕೊರೋನಾ ಭೀತಿ! ಮಾರ್ಚ್ 31ರವರೆಗೆ ಧಾರಾವಾಹಿ ಚಿತ್ರೀಕರಣಕ್ಕೆ ಬ್ರೇಕ್

ಜಗತ್ತಿನಾದ್ಯಂತ ವ್ಯಾಪಿಸುತ್ತಿರುವ ಕೊರೋನಾವೈರಸ್ ಇದೀಗ ಕಿರುತೆರೆಗೆ ಸಹ ಬಿಸಿ ಮುಟ್ಟಿಸಿದೆ. ಕೊರೋನಾ ಕಾರಣದಿಂದಾಗಿ ಮನೆ ಮನೆಗಳಲ್ಲಿ ಮಹಿಳೆಯರು ಕುಳಿತು ನೋಡುವ ಮೆಗಾ ಧಾರಾವಾಹಿಗಳ ಚಿತ್ರೀಕರಣವನ್ನು ನಿಲ್ಲಿಸಲು  ತೀರ್ಮಾನಿಸಲಾಗಿದೆ. ಮುಂದಿನ ಹದಿಮೂರು ದಿನಗಳ ಕಾಲ ಜನಪ್ರಿಯ ಟಿವಿ ವಾಹಿನಿಗಳಲ್ಲಿ ಪ್ರಸಾರ ಕಾಣುವ ಎಲ್ಲಾ ಧಾರಾವಾಹಿಗಳ ಚಿತ್ರೀಕರಣ ಬಂದ್ ಆಗಲಿದೆ.

ಜಗತ್ತಿನಾದ್ಯಂತ ವ್ಯಾಪಿಸುತ್ತಿರುವ ಕೊರೋನಾವೈರಸ್ ಇದೀಗ ಕಿರುತೆರೆಗೆ ಸಹ ಬಿಸಿ ಮುಟ್ಟಿಸಿದೆ. ಕೊರೋನಾ ಕಾರಣದಿಂದಾಗಿ ಮನೆ ಮನೆಗಳಲ್ಲಿ ಮಹಿಳೆಯರು ಕುಳಿತು ನೋಡುವ ಮೆಗಾ ಧಾರಾವಾಹಿಗಳ ಚಿತ್ರೀಕರಣವನ್ನು ನಿಲ್ಲಿಸಲು  ತೀರ್ಮಾನಿಸಲಾಗಿದೆ. ಮುಂದಿನ ಹದಿಮೂರು ದಿನಗಳ ಕಾಲ ಜನಪ್ರಿಯ ಟಿವಿ ವಾಹಿನಿಗಳಲ್ಲಿ ಪ್ರಸಾರ ಕಾಣುವ ಎಲ್ಲಾ ಧಾರಾವಾಹಿಗಳ ಚಿತ್ರೀಕರಣ ಬಂದ್ ಆಗಲಿದೆ.

ಮುಂದಿನ 13 ದಿನಗಳ ಕಾಲ ಧಾರಾವಾಹಿಗಳ ಚಿತ್ರೀಕರಣ ಸ್ಥಗಿತವಾಗಲಿದೆ. ಇದಾಗಲೇ ಮಹಾರಾಷ್ಟ್ರದಲ್ಲಿ ಹಿಂದಿ ಧಾರಾವಾಹಿಗಳ ಶೂಟಿಂಗ್ ಸ್ಥಗಿತವಾಗಿದೆ. ಮಾರ್ಚ್ 19ರಿಂದ ಮಾರ್ಚ್ 31ರವರೆಗೆ ಕನ್ನಡದ ಎಲ್ಲಾ ಧಾರಾವಾಹಿಗಳ ಶೂಟಿಂಗ್ ಸ್ತಬ್ದವಾಗಲಿದೆ ಎಂದು ಕರ್ನಾಟಕ ಟಿವಿ ಅಸೋಸಿಯೇಷನ್ ಹೇಳಿದೆ.

ಧಾರಾವಾಹಿಗಳು ನಿತ್ಯವೂ ಪ್ರಸಾರ ಕಾಣಬೇಕಾಗಿರುವ ಕಾರಣ ಇದುವರೆಗೆ ಶೂಟಿಂಗ್ ನಿಲ್ಲಿಸಿಲ್ಲ. ಆದರೆ ಇದೀಗ ದಿನ ದಿನಕ್ಕೆ ಪರಿಸ್ಥಿತಿ ಬಿಗಡಾಯಿಸುತ್ತಿರುವ ಹಿನೆಲೆ ಮುಂಜಾಗ್ರತೆ ಕ್ರಮವಾಗಿ ಮುಂದಿನ ದಿನಗಳಲ್ಲಿ ಶುತಿಂಗ್ ನಿಲ್ಲಿಸುತ್ತೇವೆ. ಇದಾಗಲೇ ನಿರ್ಮಾಪಕರು, ಪ್ರಾಯೋಜಕರಿಗೆ ಈ ಕುರಿತು ಮಾಹಿತಿ ನೀಡಲಾಗಿದೆ. ಅಲ್ಲದೆ ಶೂಟಿಂಗ್ ಸಾಧ್ಯವಾದಷ್ಟು ಮುಗಿಸಿಕೊಳ್ಲಲುಲ್ ಮೂರು ದಿನಗಳ ಕಾಲಾವಕಾಶ ಕಲ್ಪಿಸಿದ್ದು ಆ ನಂತರ ಮಾರ್ಚ್ 31ರವರೆಗೆ ಯಾವ ಧಾರಾವಾಹಿಗಳೂ ಇರುವುದಿಲ್ಲ. ಇದರ ಸಂಬಂಧ ಕಿರುತೆರೆ ನಟ ನಟಿಯರು, ತಾಂತ್ರಿಕ ವರ್ಗಕ್ಕೆ ಸಹ ಸೂಚನೆ ನೀಡಲಾಗಿದೆ ಎಂದು ಕರ್ನಾಟಕ ಟಿವಿ ಅಸೋಸಿಯೇಷನ್ ಪ್ರಕಟಣೆ ಹೇಳಿದೆ.

ಒಂದೊಮ್ಮೆ ಧಾರಾವಾಹಿ ಚಿತ್ರೀಕರಣ ಸ್ಥಗಿತವಾಗಿ ಧಾರಾವಾಹಿ ಪ್ರಸಾರ ನಿಂತರೆ ವೀಕ್ಷಕರು ಒಮ್ಮೆ ನೋಡಿದ ಎಪಿಸೋಡ್ ಗಳನ್ನೇ ಮತ್ತೆ ಮತ್ತೆ ನೋಡುವಂತಾಗಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಸಿದ್ದರಾಮಯ್ಯ ಮೇಲೆ ತೂಗುಗತ್ತಿ: ಅಧಿಕಾರದಲ್ಲಿ ಉಳಿಯಲು ಸಂಪುಟ ಪುನಾರಚನೆ ಕಸರತ್ತು; ಬಿಹಾರ-ಕೇರಳ ಚುನಾವಣೆಯತ್ತ ಡಿಕೆಶಿ ಚಿತ್ತ!

ವೀರೇಂದ್ರ ಪಪ್ಪಿ ಕರ್ಮಕಾಂಡ ನೋಡುತ್ತಿದ್ದರೆ CM- DCM ಇನ್ಯಾವ ಪರಿ ಲೂಟಿ ಮಾಡಿ ಹೈಕಮಾಂಡ್ ಗೆ ಕಪ್ಪ ನೀಡುತ್ತಿರಬೇಡಾ?

ಈ ಬಾರಿ ನಾನು ಸಚಿವನಾಗುವ ಭರವಸೆ ಇದೆ: ಸಂಪುಟ ವಿಸ್ತರಣೆಯೇ ನವೆಂಬರ್ ಕ್ರಾಂತಿಯಿರಬಹುದು; ಸಲೀಂ ಅಹ್ಮದ್

BDA ಯೋಜನಾ ಪ್ರಾಧಿಕಾರದ ಜವಾಬ್ದಾರಿ ಹಸ್ತಾಂತರ: GBA ವಿರೋಧಿಸುವವರು ಪಾಲಿಕೆ ಚುನಾವಣೆ ಬಹಿಷ್ಕರಿಸಲಿ; ಡಿಕೆಶಿ ಸವಾಲು

ಮೈಸೂರು ಪೊಲೀಸರಿಗೆ CM ಪುತ್ರನ ಕಾಟ: ಯಾವುದೇ ವರ್ಗಾವಣೆಯಾಗಬೇಕಾದರೂ ಯತೀಂದ್ರಗೆ ಟ್ಯಾಕ್ಸ್ ಕಟ್ಟಬೇಕು; ಪ್ರತಾಪ್ ಸಿಂಹ

SCROLL FOR NEXT