ಕಿರುತೆರೆಗೂ ಕೊರೋನಾ ಭೀತಿ! ಮಾರ್ಚ್ 31ರವರೆಗೆ ಧಾರಾವಾಹಿ ಚಿತ್ರೀಕರಣಕ್ಕೆ ಬ್ರೇಕ್ 
ಸಿನಿಮಾ ಸುದ್ದಿ

ಕಿರುತೆರೆಗೂ ಕೊರೋನಾ ಭೀತಿ! ಮಾರ್ಚ್ 31ರವರೆಗೆ ಧಾರಾವಾಹಿ ಚಿತ್ರೀಕರಣಕ್ಕೆ ಬ್ರೇಕ್

ಜಗತ್ತಿನಾದ್ಯಂತ ವ್ಯಾಪಿಸುತ್ತಿರುವ ಕೊರೋನಾವೈರಸ್ ಇದೀಗ ಕಿರುತೆರೆಗೆ ಸಹ ಬಿಸಿ ಮುಟ್ಟಿಸಿದೆ. ಕೊರೋನಾ ಕಾರಣದಿಂದಾಗಿ ಮನೆ ಮನೆಗಳಲ್ಲಿ ಮಹಿಳೆಯರು ಕುಳಿತು ನೋಡುವ ಮೆಗಾ ಧಾರಾವಾಹಿಗಳ ಚಿತ್ರೀಕರಣವನ್ನು ನಿಲ್ಲಿಸಲು  ತೀರ್ಮಾನಿಸಲಾಗಿದೆ. ಮುಂದಿನ ಹದಿಮೂರು ದಿನಗಳ ಕಾಲ ಜನಪ್ರಿಯ ಟಿವಿ ವಾಹಿನಿಗಳಲ್ಲಿ ಪ್ರಸಾರ ಕಾಣುವ ಎಲ್ಲಾ ಧಾರಾವಾಹಿಗಳ ಚಿತ್ರೀಕರಣ ಬಂದ್ ಆಗಲಿದೆ.

ಜಗತ್ತಿನಾದ್ಯಂತ ವ್ಯಾಪಿಸುತ್ತಿರುವ ಕೊರೋನಾವೈರಸ್ ಇದೀಗ ಕಿರುತೆರೆಗೆ ಸಹ ಬಿಸಿ ಮುಟ್ಟಿಸಿದೆ. ಕೊರೋನಾ ಕಾರಣದಿಂದಾಗಿ ಮನೆ ಮನೆಗಳಲ್ಲಿ ಮಹಿಳೆಯರು ಕುಳಿತು ನೋಡುವ ಮೆಗಾ ಧಾರಾವಾಹಿಗಳ ಚಿತ್ರೀಕರಣವನ್ನು ನಿಲ್ಲಿಸಲು  ತೀರ್ಮಾನಿಸಲಾಗಿದೆ. ಮುಂದಿನ ಹದಿಮೂರು ದಿನಗಳ ಕಾಲ ಜನಪ್ರಿಯ ಟಿವಿ ವಾಹಿನಿಗಳಲ್ಲಿ ಪ್ರಸಾರ ಕಾಣುವ ಎಲ್ಲಾ ಧಾರಾವಾಹಿಗಳ ಚಿತ್ರೀಕರಣ ಬಂದ್ ಆಗಲಿದೆ.

ಮುಂದಿನ 13 ದಿನಗಳ ಕಾಲ ಧಾರಾವಾಹಿಗಳ ಚಿತ್ರೀಕರಣ ಸ್ಥಗಿತವಾಗಲಿದೆ. ಇದಾಗಲೇ ಮಹಾರಾಷ್ಟ್ರದಲ್ಲಿ ಹಿಂದಿ ಧಾರಾವಾಹಿಗಳ ಶೂಟಿಂಗ್ ಸ್ಥಗಿತವಾಗಿದೆ. ಮಾರ್ಚ್ 19ರಿಂದ ಮಾರ್ಚ್ 31ರವರೆಗೆ ಕನ್ನಡದ ಎಲ್ಲಾ ಧಾರಾವಾಹಿಗಳ ಶೂಟಿಂಗ್ ಸ್ತಬ್ದವಾಗಲಿದೆ ಎಂದು ಕರ್ನಾಟಕ ಟಿವಿ ಅಸೋಸಿಯೇಷನ್ ಹೇಳಿದೆ.

ಧಾರಾವಾಹಿಗಳು ನಿತ್ಯವೂ ಪ್ರಸಾರ ಕಾಣಬೇಕಾಗಿರುವ ಕಾರಣ ಇದುವರೆಗೆ ಶೂಟಿಂಗ್ ನಿಲ್ಲಿಸಿಲ್ಲ. ಆದರೆ ಇದೀಗ ದಿನ ದಿನಕ್ಕೆ ಪರಿಸ್ಥಿತಿ ಬಿಗಡಾಯಿಸುತ್ತಿರುವ ಹಿನೆಲೆ ಮುಂಜಾಗ್ರತೆ ಕ್ರಮವಾಗಿ ಮುಂದಿನ ದಿನಗಳಲ್ಲಿ ಶುತಿಂಗ್ ನಿಲ್ಲಿಸುತ್ತೇವೆ. ಇದಾಗಲೇ ನಿರ್ಮಾಪಕರು, ಪ್ರಾಯೋಜಕರಿಗೆ ಈ ಕುರಿತು ಮಾಹಿತಿ ನೀಡಲಾಗಿದೆ. ಅಲ್ಲದೆ ಶೂಟಿಂಗ್ ಸಾಧ್ಯವಾದಷ್ಟು ಮುಗಿಸಿಕೊಳ್ಲಲುಲ್ ಮೂರು ದಿನಗಳ ಕಾಲಾವಕಾಶ ಕಲ್ಪಿಸಿದ್ದು ಆ ನಂತರ ಮಾರ್ಚ್ 31ರವರೆಗೆ ಯಾವ ಧಾರಾವಾಹಿಗಳೂ ಇರುವುದಿಲ್ಲ. ಇದರ ಸಂಬಂಧ ಕಿರುತೆರೆ ನಟ ನಟಿಯರು, ತಾಂತ್ರಿಕ ವರ್ಗಕ್ಕೆ ಸಹ ಸೂಚನೆ ನೀಡಲಾಗಿದೆ ಎಂದು ಕರ್ನಾಟಕ ಟಿವಿ ಅಸೋಸಿಯೇಷನ್ ಪ್ರಕಟಣೆ ಹೇಳಿದೆ.

ಒಂದೊಮ್ಮೆ ಧಾರಾವಾಹಿ ಚಿತ್ರೀಕರಣ ಸ್ಥಗಿತವಾಗಿ ಧಾರಾವಾಹಿ ಪ್ರಸಾರ ನಿಂತರೆ ವೀಕ್ಷಕರು ಒಮ್ಮೆ ನೋಡಿದ ಎಪಿಸೋಡ್ ಗಳನ್ನೇ ಮತ್ತೆ ಮತ್ತೆ ನೋಡುವಂತಾಗಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ವಿಶ್ವಕಪ್ ವಿಜೇತ ಅಂಧ ಕರ್ನಾಟಕದ ಆಟಗಾರ್ತಿಯರಿಗೆ ತಲಾ 10 ಲಕ್ಷ ನಗದು, ಸರ್ಕಾರಿ ಉದ್ಯೋಗ: ಸಿಎಂ ಸಿದ್ದರಾಮಯ್ಯ ಘೋಷಣೆ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಮತ್ತೊಂದು ಹೆಣ್ಣಿನೊಂದಿಗೆ ಮೋಹ, ನಂಬಿಕೆ ದ್ರೋಹ; ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

ಅಯೋಧ್ಯ ಧ್ವಜಾರೋಹಣ: ಸ್ವಿಚ್ ಅಥವಾ ಹಗ್ಗ ಬಳಸದ ಪ್ರಧಾನಿ, ಹೇಗೆ ನೆರವೇರಿಸಿದ್ರು?ಈ ಅದ್ಭುತ Video ನೋಡಿ..

ಬರವಣಿಗೆಯಲ್ಲಿ ಖುಷಿ ಕಂಡ ಪೊಲೀಸ್ ಅಧಿಕಾರಿ: 'ಬಸವಣ್ಣನ ವಚನ' ಗಳನ್ನು ಇಂಗ್ಲೀಷ್ ಗೆ ಅನುವಾದ ಮಾಡ್ತಿರೋ DYSP ಬಸವರಾಜ್ ಯಲಿಗಾರ್!

SCROLL FOR NEXT