ನಟ ಪ್ರಕಾಶ್ ರೈ 
ಸಿನಿಮಾ ಸುದ್ದಿ

'ಕನ್ನಡಿಗ' ಅಂಶ ಚುನಾವಣೆಯಲ್ಲಿ ಮುನ್ನಲೆಗೆ; ತೆಲುಗು ಸಿನಿಮಾ ಕಲಾವಿದರ ಸಂಘದ ಸದಸ್ಯತ್ವಕ್ಕೆ ಪ್ರಕಾಶ್ ರೈ ರಾಜೀನಾಮೆ

ತೆಲುಗು ಸಿನಿಮಾ ರಂಗದ ಕಲಾವಿದರ ಸಂಘಟನೆಯಾದ  ಮೂವಿ ಆರ್ಟಿಸ್ಟ್  ಅಸೋಸಿಯೇಶನ್ (MAA)  ಅಧ್ಯಕ್ಷ  ಸ್ಥಾನಕ್ಕೆ  ನಡೆದ  ಚುನಾವಣೆಯಲ್ಲಿ ತೆಲುಗು ನಟ ಮಂಚು  ವಿಷ್ಣು  ಗೆಲುವು   ಸಾಧಿಸಿದ್ದಾರೆ. ಭಾನುವಾರ ನಡೆದ   ಚುನಾವಣೆಯಲ್ಲಿ, ಮಂಚು ವಿಷ್ಣು, ಪ್ರಕಾಶ್  ರೈ  ವಿರುದ್ದ ಜಯಭೇರಿ  ಬಾರಿಸಿದ್ದಾರೆ.

ಹೈದ್ರಾಬಾದ್‌: ತೆಲುಗು ಸಿನಿಮಾ ರಂಗದ ಕಲಾವಿದರ ಸಂಘಟನೆಯಾದ  ಮೂವಿ ಆರ್ಟಿಸ್ಟ್  ಅಸೋಸಿಯೇಶನ್ (MAA)  ಅಧ್ಯಕ್ಷ  ಸ್ಥಾನಕ್ಕೆ  ನಡೆದ  ಚುನಾವಣೆಯಲ್ಲಿ ತೆಲುಗು ನಟ ಮಂಚು  ವಿಷ್ಣು  ಗೆಲುವು ಸಾಧಿಸಿದ್ದಾರೆ. ಭಾನುವಾರ ನಡೆದ   ಚುನಾವಣೆಯಲ್ಲಿ, ಮಂಚು ವಿಷ್ಣು, ಪ್ರಕಾಶ್  ರೈ  ವಿರುದ್ದ ಜಯಭೇರಿ  ಬಾರಿಸಿದ್ದಾರೆ.

ಪ್ರಕಾಶ್ ರೈ   ಅವರ   ಗುಂಪಿನಿಂದಲೂ   ಕೆಲವರು ಗೆದ್ದಿದ್ದಾರೆ. ಈ ಹಿನ್ನೆಲೆಯಲ್ಲಿ  ಸೋಮವಾರ ಹೈದ್ರಾಬಾದಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಕಾಶ್ ರೈ, ಮೂವಿ ಆರ್ಟ್ಸ್ ಅಸೋಸಿಯೇಷನ್' ಚುನಾವಣೆಗಳು  ಅತ್ಯಂತ  ಚೈತನ್ಯ ದಾಯಕವಾಗಿ  ನೆಡೆದಿದ್ದು,  ಗೆದ್ದ  ಸದಸ್ಯರಿಗೆ ಅಭಿನಂದಿಸುವುದಾಗಿ ತಿಳಿಸಿದರು. 

ಚಿತ್ರರಂಗ ಎದುರಿಸುತ್ತಿರುವ  ಸಮಸ್ಯೆಗಳು ಎಲ್ಲರಿಗೂ  ಗೊತ್ತು. ಈಗ   ಚುನಾಯಿತ  ಸಮಿತಿ  ಎಲ್ಲಾ ಭರವಸೆಗಳನ್ನು ಈಡೇರಿಸುವುದು ಮುಖ್ಯವಾಗಿದೆ ಎಂದರು.

ನಾನು  ಕರ್ನಾಟಕ ರಾಜ್ಯಕ್ಕೆ ಸೇರಿದವನು, ತೆಲುಗಿನವನಲ್ಲ, ಕನ್ನಡಿಗ ಎಂಬ ಅಂಶವನ್ನು   ಚುನಾವಣೆಯಲ್ಲಿ ಪ್ರಮುಖವಾಗಿ  ಮುನ್ನಲೆಗೆ  ತರಲಾಯಿತು. ನಾನು ತೆಲುಗಿನವನೇ. ನಾನು  ಒಬ್ಬ  ಕಲಾವಿದ ಎಂದು ಹೇಳಿದ ಪ್ರಕಾಶ್‌  ರೈ ಮೂವಿ ಆರ್ಟಿಸ್ಟ್ ಅಸೋಸಿಯೇಶನ್ (MAA) ಸದಸ್ಯತ್ವಕ್ಕೆ  ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

Indian Navy ಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ! Video

Idre Nemdiyaag Irbek: ಯೂ ಟ್ಯೂಬ್ ನಲ್ಲಿ ಧೂಳೆಬ್ಬಿಸುತ್ತಿರುವಂತೆ ವಿವಾದಕ್ಕೆ ಗುರಿಯಾದ Devil ಸಾಂಗ್! ಟ್ಯೂನ್ ಕದ್ದ ಆರೋಪ!

SCROLL FOR NEXT