ನಿರ್ದೇಶಕ ಪ್ರಜ್ವಲ್ ಎಸ್‌ಪಿ - ಬಾಂಡ್ ರವಿ ಚಿತ್ರದಲ್ಲಿ ಪ್ರಮೋದ್ 
ಸಿನಿಮಾ ಸುದ್ದಿ

ಜೈಲು ಹಕ್ಕಿಯ ಜೀವನವನ್ನು ತೋರಿಸುವ ಸುಂದರ ಪ್ರೇಮಕಥೆಯೇ 'ಬಾಂಡ್ ರವಿ': ನಿರ್ದೇಶಕ ಪ್ರಜ್ವಲ್

'ಚಿತ್ರವು ಕಂಟೆಂಟ್ ಆಧಾರಿತ ಕಮರ್ಷಿಯಲ್ ಸ್ಕ್ರಿಪ್ಟ್ ಆಗಿದ್ದು, ಬಲವಾದ ಪ್ರೇಮಕಥೆಯೊಂದಿಗೆ ತೆರೆಗೆ ತರಲಾಗುತ್ತಿದೆ' ಎಂದು ಚೊಚ್ಚಲ ಚಿತ್ರವನ್ನು ನಿರ್ದೇಶಿಸಿರುವ ಪ್ರಜ್ವಲ್ ಎಸ್‌ಪಿ ಹೇಳುತ್ತಾರೆ. ಚಿತ್ರ ಡಿಸೆಂಬರ್ 9 ರಂದು ಬಿಡುಗಡೆಯಾಗಲಿದೆ.

ಪುನೀತ್ ರಾಜ್‌ಕುಮಾರ್ ಅವರ ಕಟ್ಟಾ ಅಭಿಮಾನಿಯಾಗಿರುವ ನಟ ಪ್ರಮೋದ್ ಖಡಕ್ ಪಾತ್ರವನ್ನು ನಿರ್ವಹಿಸುತ್ತಿರುವುದನ್ನು ಬಾಂಡ್ ರವಿ ಟ್ರೇಲರ್‌ನಲ್ಲಿ ನೋಡಿದ್ದೇವೆ. 'ಇದಲ್ಲದೆ, ಚಿತ್ರವು ಕಂಟೆಂಟ್ ಆಧಾರಿತ ಕಮರ್ಷಿಯಲ್ ಸ್ಕ್ರಿಪ್ಟ್ ಆಗಿದ್ದು, ಬಲವಾದ ಪ್ರೇಮಕಥೆಯೊಂದಿಗೆ ತೆರೆಗೆ ತರಲಾಗುತ್ತಿದೆ' ಎಂದು ಚೊಚ್ಚಲ ಚಿತ್ರವನ್ನು ನಿರ್ದೇಶಿಸಿರುವ ಪ್ರಜ್ವಲ್ ಎಸ್‌ಪಿ ಹೇಳುತ್ತಾರೆ. ಚಿತ್ರ ಡಿಸೆಂಬರ್ 9 ರಂದು ಬಿಡುಗಡೆಯಾಗಲಿದೆ.

ಎಸ್ ಮಹೇಂದರ್, ಪ್ರಶಾಂತ್ ರಾಜ್ ಮತ್ತು ಕಾಂತ ಕನ್ನಲಿಯಂತಹ ನಿರ್ದೇಶಕರ ಬಳಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವ ಪ್ರಜ್ವಲ್ ಅವರು ತಮ್ಮ ಚೊಚ್ಚಲ ಚಿತ್ರದಲ್ಲಿ ಜೈಲಿನಲ್ಲಿರುವುದು ಹಣ ಸಂಪಾದಿಸುವ ಸಾಧನವಾಗಿ ಕಂಡುಕೊಂಡಿರುವ ಜೈಲು ಹಕ್ಕಿಯ ಜೀವನದ ಸುತ್ತ ಕಥೆಯನ್ನು ಹೆಣೆದಿದ್ದಾರೆ.

'ಖೈದಿಯ ಜೀವನವು ಕಟ್ಟಕಡೆಯೆಂದು ಪರಿಗಣಿಸುವ ಕಾಲದಲ್ಲಿ, ಇಲ್ಲಿ ನಾವು ಜೈಲಿನ ಸೌಕರ್ಯವನ್ನು ಇಷ್ಟಪಡುವವರನ್ನು ಹೊಂದಿದ್ದೇವೆ. ಆದಾಗ್ಯೂ, ಆತ ಪ್ರೀತಿಯಲ್ಲಿ ಬಿದ್ದಾಗ ಆತನ ದೃಷ್ಟಿಕೋನವು ಬದಲಾಗುತ್ತದೆ ಮತ್ತು ಈ ಭಾವನೆಯನ್ನು ಒಂದು ಸುಂದರವಾದ ರೊಮ್ಯಾಂಟಿಕ್ ಸಿನಿಮಾವಾಗಿ ಹೊರತರಲಾಗುತ್ತಿದೆ' ಎಂದು ಪ್ರಜ್ವಲ್ ಹೇಳುತ್ತಾರೆ.

ಈ ಚಿತ್ರವು ನೈಜ ಘಟನೆಯನ್ನು ಆಧರಿಸಿದೆ. ಇದನ್ನು ತನ್ನ ಸ್ನೇಹಿತರ ಮೂಲಕ ತಿಳಿದುಕೊಂಡೆ. 'ಕೈದಿಯಾಗಿ ಜೀವನ ಸಾಗಿಸುವ ಜನರಿದ್ದಾರೆ ಎಂದು ತಿಳಿದು ನನಗೆ ಆಶ್ಚರ್ಯವಾಯಿತು. ಸಿನಿಮಾ ಮಾಡಲು ಇದು ಆಸಕ್ತಿದಾಯಕ ವಿಷಯ ಎಂದು ನಾನು ಭಾವಿಸಿದೆ. ಚಿತ್ರವು ಎಲ್ಲಾ ಕಮರ್ಷಿಯಲ್ ಅಂಶಗಳನ್ನು ಹೊಂದಿದೆ ಮತ್ತು ಮನೋಮೂರ್ತಿಯವರ ಸಂಗೀತವು ಹೈಲೈಟ್‌ಗಳಲ್ಲಿ ಒಂದಾಗಿದೆ' ಎಂದು ಹೇಳುತ್ತಾರೆ.

ನರಸಿಂಹಮೂರ್ತಿ ಅವರು ಚಿತ್ರವನ್ನು ನಿರ್ಮಿಸಿದ್ದು, ಕೆ.ಎಸ್. ಚಂದ್ರಶೇಖರ್ ಅವರು ಛಾಯಾಗ್ರಹಣ ನಿರ್ವಹಿಸಿದ್ದಾರೆ. ಕಾಜಲ್ ಕುಂದರ್ ನಾಯಕಿಯಾಗಿರುವ ಈ ಚಿತ್ರದಲ್ಲಿ ರವಿಕಾಳೆ, ಧರ್ಮ, ರವಿ ಪ್ರಕಾಶ್, ಗೋವಿಂದ ಗೌಡ ಮತ್ತು ವಿಜಯ್ ಚೆಂಡೂರ್ ಪ್ರಮುಖ ಪಾತ್ರಗಳಲ್ಲಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ವಿಶ್ವಕಪ್ ವಿಜೇತ ಅಂಧ ಕರ್ನಾಟಕದ ಆಟಗಾರ್ತಿಯರಿಗೆ ತಲಾ 10 ಲಕ್ಷ ನಗದು, ಸರ್ಕಾರಿ ಉದ್ಯೋಗ: ಸಿಎಂ ಸಿದ್ದರಾಮಯ್ಯ ಘೋಷಣೆ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಮತ್ತೊಂದು ಹೆಣ್ಣಿನೊಂದಿಗೆ ಮೋಹ, ನಂಬಿಕೆ ದ್ರೋಹ; ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

ಬರವಣಿಗೆಯಲ್ಲಿ ಖುಷಿ ಕಂಡ ಪೊಲೀಸ್ ಅಧಿಕಾರಿ: 'ಬಸವಣ್ಣನ ವಚನ' ಗಳನ್ನು ಇಂಗ್ಲೀಷ್ ಗೆ ಅನುವಾದ ಮಾಡ್ತಿರೋ DYSP ಬಸವರಾಜ್ ಯಲಿಗಾರ್!

ರಾಜ್ಯದಲ್ಲಿ ಸಿಎಂ ಗದ್ದುಗೆ ಗುದ್ದಾಟ: ಎಲ್ಲ ಗೊಂದಲಗಳಿಗೆ ಹೈಕಮಾಂಡ್ ತೆರೆ ಎಳೆಯಬೇಕು- ಸಿಎಂ ಸಿದ್ದರಾಮಯ್ಯ

SCROLL FOR NEXT