ವಸಿಷ್ಠ ಸಿಂಹ ಮತ್ತು ಹರಿ ಪ್ರಿಯಾ 
ಸಿನಿಮಾ ಸುದ್ದಿ

ನಾಯಿ ಕೊಟ್ಟು ದೇವ್ರಾಣೆ ಪಟಾಯಿಸಿಲ್ಲ, ಹರಿಪ್ರಿಯಾ ತಂದೆ ಶ್ರಾದ್ಧದ ದಿನ ನನ್ನ ಪ್ರೇಮ ನಿವೇದಿಸಿದೆ: ಸಿಂಹ-ಪ್ರಿಯಾ ಪ್ರೀತಿಯ ಬಗ್ಗೆ 'ವಸಿಷ್ಠ' ಸ್ಪಷ್ಟನೆ

ಹೊಸ ಬಾಳಿಗೆ ಕಾಲಿಡುವ ಸಂಭ್ರಮದಲ್ಲಿರುವ ಸ್ಯಾಂಡಲ್​​ವುಡ್​​ನ ಸ್ಟಾರ್ ಜೋಡಿ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಮಾಧ್ಯಮಗಳ ಮುಂದೆ ಕಾಣಿಸಿಕೊಂಡರು. ಈ ವೇಳೆ ತಮ್ಮ ಮದುವೆ ಆಮಂತ್ರಣ ಪತ್ರಿಕೆಯನ್ನು ಪ್ರದರ್ಶಿಸಿದ್ದಾರೆ.

ಬೆಂಗಳೂರು: ಹೊಸ ಬಾಳಿಗೆ ಕಾಲಿಡುವ ಸಂಭ್ರಮದಲ್ಲಿರುವ ಸ್ಯಾಂಡಲ್​​ವುಡ್​​ನ ಸ್ಟಾರ್ ಜೋಡಿ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಮಾಧ್ಯಮಗಳ ಮುಂದೆ ಕಾಣಿಸಿಕೊಂಡರು. ಈ ವೇಳೆ ತಮ್ಮ ಮದುವೆ ಆಮಂತ್ರಣ ಪತ್ರಿಕೆಯನ್ನು ಪ್ರದರ್ಶಿಸಿದ್ದಾರೆ.

ಮದುವೆ ಆಮಂತ್ರಣ ಕಾರ್ಡಿನಲ್ಲಿ ‘ಸಿಂಹಪ್ರಿಯಾ’ ಎಂಬ ಟ್ಯಾಗ್​​ಲೈನ್ ಇದೆ. ಅದು, ಅಭಿಮಾನಿಗಳು ಪ್ರೀತಿಯಿಂದ ಕೊಟ್ಟಿರೋದು. ಅವರನ್ನು ಬಿಡಬಾರದು ಎಂದು ಎಲ್ಲಾ ಕಡೆ ಹಾಕಿಸಿದ್ದೇವೆ. ಮದುವೆಗಾಗಿ ತುಂಬಾ ದಿನಗಳಿಂದ ಕಷ್ಟಪಡುತ್ತಿದ್ದೇನೆ. ಹೀಗಾಗಿ ನಮ್ಮಿಬ್ಬರ ಮದುವೆ ಅದ್ದೂರಿಯಾಗಿ ನಡೆಯಲಿದೆ ಎಂದರು.

ಜನವರಿ 26ರಂದು ಮೈಸೂರಿನಲ್ಲಿ ಈ ಜೋಡಿ ಅದ್ದೂರಿಯಾಗಿ ಹಸೆಮಣೆ ಏರುತ್ತಿದೆ. ಜನವರಿ 28ರಂದು ಬೆಂಗಳೂರಿನಲ್ಲಿ ಆರತಕ್ಷತೆ ಕಾರ್ಯಕ್ರಮ ನೆರವೇರಲಿದೆ. ವಸಿಷ್ಠ ಸಿಂಹ ಅವರು ನಾಯಿ ಕೊಟ್ಟು ಹರಿಪ್ರಿಯಾಗೆ ಪ್ರೀತಿ ಹುಟ್ಟುವಂತೆ ಮಾಡಿದರು ಎಂಬಿತ್ಯಾದಿ ಸುದ್ದಿ ಹರಡಿತ್ತು. ಆದರೆ, ಇದನ್ನು ಈ ಜೋಡಿ ಅಲ್ಲಗಳೆದಿದೆ.

ಇಬ್ಬರೂ ಕಷ್ಟಪಟ್ಟಿದ್ದೇವೆ. ಗೆಳೆತನದಿಂದ ಪರಸ್ಪರ ಇಬ್ಬರ ಕಷ್ಟಗಳು ಗೊತ್ತಾದವು. ಪರಸ್ಪರ ನಾವು ಹೆಗಲುಕೊಟ್ಟೆವು. ನಾನು ಚಿಕ್ಕವಯಸ್ಸಿನಲ್ಲಿ ತಾಯಿ ಕಳೆದುಕೊಂಡೆ. ಅವರು ತಂದೆಯನ್ನು ಕಳೆದುಕೊಂಡಿದ್ದರು. ನಾನು ನನ್ನ ತಾಯಿಯನ್ನು ಇವರಲ್ಲಿ ಕಂಡೆ’ ಎಂದಿದ್ದಾರೆ ವಸಿಷ್ಠ ಸಿಂಹ. ‘ನಾನು ಚಿಕ್ಕವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡೆ. ನನ್ನ ತಂದೆಯಲ್ಲಿರುವ ಅನೇಕ ಗುಣಗಳು ಸಿಂಹನಲ್ಲಿದೆ’ ಎಂದರು ಹರಿಪ್ರಿಯಾ.

ಹಾಗಾದರೆ ವಸಿಷ್ಠ ಸಿಂಹ ಪ್ರಪೋಸ್ ಮಾಡಿದ್ದು ಯಾವಾಗ? ಈ ಪ್ರಶ್ನೆಗೆ ವಸಿಷ್ಠ ಸಿಂಹ ಅವರೇ ಉತ್ತರ ಕೊಟ್ಟಿದ್ದಾರೆ. ‘ಅದು ಹರಿಪ್ರಿಯಾ ಅವರ ತಂದೆಯ ಕಾರ್ಯದ ದಿನ. ಆದಿನ ನಾನು ಹರಿಪ್ರಿಯಾಗೆ ಪ್ರಪೋಸ್ ಮಾಡಲೇಬೇಕು ಎಂದು ನಿರ್ಧರಿಸಿದ್ದೆ. ತಡೆಯಲಾರದೇ ಪ್ರಪೋಸ್ ಮಾಡಿದ್ದೆ. ಅದು ಮಧ್ಯರಾತ್ರಿ ಆಗಿತ್ತು. ಮುಂಜಾನೆ ಕಾರ್ಯ ಇದ್ದಿದ್ದರಿಂದ ಅವರು ನಿದ್ದೆ ಮಾಡಬೇಕಿತ್ತು. ನೀವು ಏನೂ ಉತ್ತರಿಸಬಾರದು ಎಂದು ಪ್ರಪೋಸ್ ಮಾಡಿದ್ದೆ, ‘ದೇವ್ರಾಣೆ ನಾಯಿ ಕೊಟ್ಟಿ ಪಟಾಯಿಸಿಕೊಂಡಿಲ್ಲ’ ಎಂದು ಹೇಳಿದ್ದಾರೆ ವಸಿಷ್ಠ ಸಿಂಹ.

‘ವಸಿಷ್ಠ ಸಿಂಹ ಅವರನ್ನು ಕಂಡರೆ ನನಗೂ ಇಷ್ಟ ಇತ್ತು. ಅದನ್ನು ಹೇಳಿಕೊಳ್ಳಬೇಕು ಎನ್ನುವ ಆಸೆ ನನಗೂ ಇತ್ತು. ನನನ್ನು ವಿಶೇಷವಾಗಿ ನೋಡಿಕೊಂಡರು. ನನ್ನ ತಂದೆ ತೀರಿಕೊಂಡ ದಿನವೇ ಇವರು ನನಗೆ ಸಿಕ್ಕರು. ನನ್ನ ತಂದೆಯೇ ನನಗೆ ಇವರನ್ನು ನೀಡಿದರು ಅನಿಸಿತು’ ಎಂದಿದ್ದಾರೆ ಹರಿಪ್ರಿಯಾ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

India-Pakistan ಯುದ್ಧವನ್ನು ನಾನು ತಡೆಯದೇ ಹೋಗಿದ್ದರೆ 3.5 ಕೋಟಿ ಜನರು ಸಾಯುತ್ತಿದ್ದರು: ಡೊನಾಲ್ಡ್ ಟ್ರಂಪ್

ಪ್ರಧಾನಿ ಮೋದಿ ಎರಡು ದಿನಗಳ ಇಸ್ರೇಲ್‌ ಪ್ರವಾಸ ಆರಂಭ; ಸಂಸತ್ತು ನೆಸ್ಸೆಟ್ ಭಾಷಣ ಮಾಡುವ ಮೊದಲ ಭಾರತ ಪ್ರಧಾನಿ-Video

Ranji Trophy final: ಕರ್ನಾಟಕದ ಕೆವಿ ಅನೀಶ್‌ಗೆ ಡಿಚ್ಚಿ ಹೊಡೆದ ಜಮ್ಮು ಮತ್ತು ಕಾಶ್ಮೀರದ ನಾಯಕ, Video

'ವಿರಾಟ್ ಕೊಹ್ಲಿ ಇದ್ದಿದ್ದರೆ ಫಲಿತಾಂಶ ಬೇರೆಯೇ ಆಗಿರುತ್ತಿತ್ತು'; ಗೌತಮ್ ಗಂಭೀರ್ ವಿರುದ್ಧ ಪಾಕ್ ಅನುಭವಿ ಆಟಗಾರ ಅಹ್ಮದ್ ಶೆಹಜಾದ್ ವಾಗ್ದಾಳಿ

'ಮತ್ತೆ ವೈಭವದತ್ತ ಮರಳಿದ್ದೇವೆ, ಹಿಂದೆಂದಿಗಿಂತ ಶ್ರೀಮಂತ ಮತ್ತು ಬಲಿಷ್ಠರಾಗಿದ್ದೇವೆ': ದೇಶವನ್ನುದ್ದೇಶಿಸಿ Donald Trump ಭಾಷಣ-Video

SCROLL FOR NEXT