ಪ್ರೀಮಿಯರ್ ಪದ್ಮಿನಿ ತಂಡ 
ಸಿನಿಮಾ ಸುದ್ದಿ

ಮತ್ತೆ ಬಂದ 'ಪ್ರೀಮಿಯರ್ ಪದ್ಮಿನಿ' ತಂಡ: ಹೊಸ ಪ್ರಾಜೆಕ್ಟ್ ಶುರು!

‘ಪ್ರೀಮಿಯರ್‌ ಪದ್ಮಿನಿ’ ಸಿನಿಮಾ ನಿರ್ಮಾಣ ಮಾಡಿದ್ದ ನಿರ್ದೇಶಕಿ ಶ್ರುತಿ ನಾಯ್ಡು ಅವರ ಹೊಸ ಚಿತ್ರ ಸೆಟ್ಟೇರಿದ್ದು, ಇದರಲ್ಲಿ ಪ್ರಮೋದ್‌ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.

‘ಪ್ರೀಮಿಯರ್‌ ಪದ್ಮಿನಿ’ ಸಿನಿಮಾ ನಿರ್ಮಾಣ ಮಾಡಿದ್ದ ನಿರ್ದೇಶಕಿ ಶ್ರುತಿ ನಾಯ್ಡು ಅವರ ಹೊಸ ಚಿತ್ರ ಸೆಟ್ಟೇರಿದ್ದು, ಇದರಲ್ಲಿ ಪ್ರಮೋದ್‌ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಪ್ರಮೋದ್‌ ‘ಗೀತಾ ಬ್ಯಾಂಗಲ್‌ ಸ್ಟೋರ್ಸ್’ ಸಿನಿಮಾ ಮೂಲಕ ನಾಯಕರಾಗಿ ಪರಿಚಯರಾಗಿದ್ದರೂ ‘ಪ್ರೀಮಿಯರ್‌ ಪದ್ಮಿನಿ’ ಅವರಿಗೆ ಉತ್ತಮ ಮೈಲೇಜ್‌ ಕೊಟ್ಟ ಸಿನಿಮಾ. ರಮೇಶ್‌ ಇಂದಿರಾ ನಿರ್ದೇಶನದ ಈ ಸಿನಿಮಾವನ್ನು ಶ್ರುತಿ ನಾಯ್ಡು ನಿರ್ಮಾಣ ಮಾಡಿದ್ದರು. ಅವರ ನಿರ್ಮಾಣದ ಸೀರಿಯಲ್‌ ಮೂಲಕವೇ ಪ್ರಮೋದ್‌ ಬಣ್ಣದ ಲೋಕದಲ್ಲಿ ಮಿಂಚಿದವರು. ಈಗ ಅದೇ ತಂಡ ಪ್ರಮೋದ್‌ಗೆ ಹೊಸ ಸಿನಿಮಾ ಮಾಡುತ್ತಿದೆ. ರಮೇಶ್‌ ಇಂದಿರಾ ಕಥೆ ಬರೆದು ನಿರ್ದೇಶನ ಮಾಡುತ್ತಿರುವ ಇದರ ಸ್ಕ್ರಿಪ್ಟ್ ಪೂಜೆ ಮೈಸೂರಿನಲ್ಲಿ ಸೋಮವಾರ ನಡೆದಿದೆ. ಜುಲೈ ಅಥವಾ ಆಗಸ್ಟ್ ನಲ್ಲಿ ಸಿನಿಮಾ ಶೂಟಿಂಗ್ ಆರಂಭವಾಗಲಿದೆ.

ಶ್ರುತಿ ನಾಯ್ಡು ನಿರ್ಮಿಸಿರುವ ಮತ್ತು ರಮೇಶ್ ಇಂದಿರಾ ಅವರ ಕಥೆ/ನಿರ್ದೇಶನದ ಈ ಯೋಜನೆ ದೊಡ್ಡ ಮಟ್ಟದ ಪ್ರಾಜೆಕ್ಟ್ ಆಗಿದೆ. ಪ್ರೀಮಿಯರ್ ಪದ್ಮಿನಿಯೊಂದಿಗೆ, ಅವರು ನನ್ನನ್ನು ನಟನಾಗಿಸಿದರು. ಈ ಸಿನಿಮಾದ ಕಥೆ ಕಂಪ್ಲೀಟ್‌ ಯೂತ್‌ಫುಲ್‌ ಆಗಿದ್ದು, ಪ್ರತಿ ಯುವಕರಿಗೂ ಇದು ಕನೆಕ್ಟ್ ಆಗುತ್ತದೆ.  ಹಾಗಾಗಿಯೇ ನಿರ್ದೇಶಕರು ಕಥೆ ಬರೆಯಲು ಸಾಕಷ್ಟು ಸಮಯ ತೆಗೆದುಕೊಂಡಿದ್ದಾರೆ. ಇದು ಕಾಲೇಜು ಹಿನ್ನೆಲೆಯ ಚಿತ್ರವಾಗಿದ್ದು, ಸ್ನೇಹ, ಪ್ರೀತಿ ಮತ್ತು ಕುಟುಂಬದ ಸುತ್ತ ಸುತ್ತುತ್ತದೆ. ಇದು ಇಂದಿನ ಟ್ರೆಂಡ್‌ಗಳಿಗೆ ಹೊಂದಿಕೆಯಾಗುತ್ತದೆ ಎಂದು ಪ್ರಮೋದ್ ಹೇಳುತ್ತಾರೆ.

ಈಗ, ನಿರ್ದೇಶಕ, ನಿರ್ಮಾಪಕರು ನನ್ನನ್ನು ಮಾತ್ರ ಫೈನಲ್ ಮಾಡಿದ್ದಾರೆ.  ಮುಂದಿನ ದಿನಗಳಲ್ಲಿ ಚಿತ್ರೀಕರಣದ ಸ್ಥಳ ಮತ್ತು ಉಳಿದ ಪಾತ್ರವರ್ಗ  ಹಾಗೂ ಸಿಬ್ಬಂದಿ ಆಯ್ಕೆ ನಡೆಯಲಿದೆ ಎಂದು ಹೇಳಿದ್ದಾರೆ.

ಪ್ರಮೋದ್‌ ಈ ಸಿನಿಮಾದಲ್ಲಿ ಕಾಲೇಜು ಹುಡುಗನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ‘ರಮೇಶ್‌ ಇಂದಿರಾ ಅದ್ಭುತ ಕಥೆ ಬರೆದಿದ್ದಾರೆ. ಬೇರೆಯದ್ದೇ ರೀತಿಯ ಸಿನಿಮಾವಿದು. ಸಿಕ್ಕಾಪಟ್ಟೆ ಇಂಟೆನ್ಸಿಟಿಯೂ ಇದರಲ್ಲಿದೆ. ಗಾಢ ಫ್ರೆಂಡ್‌ಶಿಪ್‌, ಫ್ಯಾಮಿಲಿ ಎಂಟರ್ಟೇನ್‌ಮೆಂಟ್‌, ಇಂದಿನ ಟ್ರೆಂಡ್‌ಗೆ ತಕ್ಕಂತಹ ಉತ್ತಮ ಸಬ್ಜೆಕ್ಟ್ ಇದಾಗಲಿದೆ ಎಂಬುದು ನಿರ್ದೇಶಕರ ಅಭಿಪ್ರಾಯ.

ಪ್ರೀಮಿಯರ್ ಪದ್ಮಿನಿ 2 ಕೂಡ ಬರಲಿದೆ ಎಂದು ಪ್ರಮೋದ್ ಬಹಿರಂಗಪಡಿಸಿದರು. ಹೊಸ ಪ್ರಾಜೆಕ್ಟ್ ಪೂರ್ಣಗೊಳಿಸಿದ ನಂತರ ಅದು  ಪ್ರಾರಂಭವಾಗುತ್ತದೆ ಎಂದು ತಿಳಿಸಿದ್ದಾರೆ. ಸದ್ಯ, ಪ್ರಮೋದ್ ಭುವನಂ ಗಗನಂ ಚಿತ್ರದ ಶೂಟಿಂಗ್‌ನಲ್ಲಿ ನಿರತರಾಗಿದ್ದಾರೆ, ಇನ್ನೂ 10 ದಿನಗಳ ಶೂಟಿಂಗ್ ಬಾಕಿ ಇದೆ. ಮುಂದಿನ 10 ದಿನಗಳಲ್ಲಿ ಅವರು ಪೃಥ್ವಿ ಅಂಬಾರ್ ಜೊತೆಗೆ ಶೂಟಿಂಗ್ ಮಾಡಲಿದ್ದಾರೆ.

ಚಿತ್ರೀಕರಣದ ಪ್ರಯಾಣದ ಭಾಗಗಳಿಗೆ ಹಸಿರು ಮತ್ತು ಮಳೆಯ ಅಗತ್ಯವಿರುತ್ತದೆ, ಮತ್ತು ನಾವು ಶೀಘ್ರದಲ್ಲೇ ಚಿತ್ರೀಕರಣ ಪ್ರಾರಂಭಿಸುತ್ತೇವೆ ಎಂದಿದ್ದಾರೆ.  ಪ್ರಶಾಂತ್ ನೀಲ್ ನಿರ್ದೇಶನದ, ಪ್ರಭಾಸ್ ಅಭಿನಯದ ಸಲಾರ್ ಚಿತ್ರದಲ್ಲಿ ಪ್ರಮೋದ್ ನಟಿಸಿದ್ದು ಬಿಡುಗಡೆಗಾಗಿ ನಟ ಕೂಡ ಕಾತರದಿಂದ ಕಾಯುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT