ವಂಶಿ ಕೃಷ್ಣ 
ಸಿನಿಮಾ ಸುದ್ದಿ

ನನ್ನ ಮೊದಲ ಚಿತ್ರ ಕಲಾತ್ಮಕ- ಕಮರ್ಷಿಯಲ್ ಆಗಿರುತ್ತದೆ: ನಿರ್ದೇಶಕ-ನಟ ವಂಶಿ ಕೃಷ್ಣ

ರಾಧಾಕೃಷ್ಣ ರೆಡ್ಡಿ ಅವರ ಮಾಯಾಬಜಾರ್ ಚಿತ್ರದ ಮೂಲಕ ಸಹಾಯಕ ನಿರ್ದೇಶಕರಾಗಿ ವಂಶಿ ತಮ್ಮ ಸಿನಿಮಾ ಪಯಣ ಆರಂಭಿಸಿದ್ದರು. ಈ ಯುವ ಪ್ರತಿಭೆ ಇದೀಗ ನಿರ್ದೇಶಕರಾಗಿ ಪದಾರ್ಪಣೆ ಮಾಡಲಿದ್ದು, ಚಿತ್ರದಲ್ಲಿ ಅವರು ಪೂರ್ಣ ಪ್ರಮಾಣದ ಪಾತ್ರದಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ.

ರಾಧಾಕೃಷ್ಣ ರೆಡ್ಡಿ ಅವರ ಮಾಯಾಬಜಾರ್ ಚಿತ್ರದ ಮೂಲಕ ಸಹಾಯಕ ನಿರ್ದೇಶಕರಾಗಿ ವಂಶಿ ತಮ್ಮ ಸಿನಿಮಾ ಪಯಣ ಆರಂಭಿಸಿದ್ದರು. ಅವರು ಪೆಂಟಗನ್ (2023) ಸಿನಿಮಾ ಮೂಲಕ ನಟನೆಯಲ್ಲೂ ಗುರುತಿಸಿಕೊಂಡರು. ಈ ಯುವ ಪ್ರತಿಭೆ ಇದೀಗ ನಿರ್ದೇಶಕರಾಗಿ ಪದಾರ್ಪಣೆ ಮಾಡಲಿದ್ದು, ಚಿತ್ರದಲ್ಲಿ ಅವರು ಪೂರ್ಣ ಪ್ರಮಾಣದ ಪಾತ್ರದಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ.

'ನಿವೇದಿತಾ ವೆಬ್ ಸರಣಿಯ ವಿಷಯಕ್ಕಾಗಿ ಹುಡುಕುತ್ತಿದ್ದರು. ಕಮರ್ಷಿಯಲ್ ಆಗಿ ಅಷ್ಟೇನೂ ಕೆಲಸ ಮಾಡದ ಎರಡು ಕಥೆಗಳನ್ನು ಅವರಿಗೆ ಹೇಳಿದೆ. ನಂತರ ನಾನು ಅವರಿಗೆ ಸ್ಕ್ರಿಪ್ಟ್ ಅನ್ನು ವಿವರಿಸಿದೆ. ನಾನೇ ನಿರ್ದೇಶಿಸಲು ಯೋಜಿಸಿದ್ದೆ. ಅದೃಷ್ಟವಶಾತ್, ಅವರು ಕಥೆಯನ್ನು ಇಷ್ಟಪಟ್ಟರು ಮತ್ತು ಅದಕ್ಕೆ ಹಸಿರು ನಿಶಾನೆ ನೀಡಿದರು ಎನ್ನುತ್ತಾರೆ ವಂಶಿ.

ಇಂಜಿನಿಯರ್ ಆಗಿರುವ ವಂಶಿ ಅವರು ತಮ್ಮ ಕಾಲೇಜು ದಿನಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುವ ಅವಕಾಶವನ್ನು ಪಡೆದರು. ಮೇಕಿಂಗ್‌ನಲ್ಲಿರುವ ನಿರ್ದೇಶಕರು ತಮ್ಮ ಯೋಜನೆಯನ್ನು 'ಅದರದೇ ಆದ ರೀತಿಯಲ್ಲಿ ಕಲಾತ್ಮಕ ಮತ್ತು ವಾಣಿಜ್ಯಿಕವಾಗಿರುವ ನೈಜ-ಜೀವನದ ಸಿನಿಮಾ' ಎಂದು ವಿವರಿಸುತ್ತಾರೆ. 

ಚಿತ್ರವು ಜೂನ್‌ನಲ್ಲಿ ಸೆಟ್ಟೇರಲು ಸಿದ್ಧವಾಗಿದ್ದು, ಅವರು ಚಿತ್ರದ ತಾರಾಗಣವನ್ನು ಅಂತಿಮಗೊಳಿಸುವ ಪ್ರಕ್ರಿಯೆಯಲ್ಲಿದ್ದಾರೆ. ಈ ಚಿತ್ರವನ್ನು ನಟ ಶಿವರಾಜ್‌ಕುಮಾರ್ ಅವರ ಪುತ್ರಿ ನಿವೇದಿತಾ ಅವರು 'ಶ್ರೀ ಮುತ್ತು ಸಿನಿ ಸರ್ವಿಸಸ್ ಬ್ಯಾನರ್' ಅಡಿಯಲ್ಲಿ ನಿರ್ಮಿಸಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಡಿಕೆಶಿ ಸಂಪುಟಕ್ಕೆ ಮತ್ತೆ ಸರ್ಜರಿ? ಭಾರಿ ಬದಲಾವಣೆ, 3-5 ಸಚಿವರಿಗೆ ಕೊಕ್?; ಮಹಿಳೆ ಸೇರಿ ಕೆಲ ರೆಬೆಲ್ ನಾಯಕರಿಗೆ ಅವಕಾಶ ಸಾಧ್ಯತೆ

KPSC ಪಶುವೈದ್ಯಾಧಿಕಾರಿ ನೇಮಕಾತಿ ಹಗರಣ: ಎಲ್ಲಾ 329 ಅಭ್ಯರ್ಥಿಗಳಿಗೆ CID ಶಾಕ್, ಇಂದೇ ವಿಚಾರಣೆಗೆ ಹಾಜರಾಗುವಂತೆ ನೋಟಿಸ್!

ನಮ್ಮಲ್ಲೂ ಅಸ್ತ್ರಗಳಿವೆ, ದಾಳಿಗೆ ಸಂಪೂರ್ಣ ಸಿದ್ಧ: ಅಮೆರಿಕಾ ಆರ್ಥಿಕ ದಿಗ್ಬಂಧನಕ್ಕೆ ಇರಾನ್‌ ಪ್ರತಿರೋಧ, ಭಾರೀ ಪ್ರತೀಕಾರದ ಎಚ್ಚರಿಕೆ

‘Iran ನನ್ನ ಪುತ್ರನನ್ನು ಹತ್ಯೆ ಮಾಡಲು ಯತ್ನಿಸಿತ್ತು’: ಟೆಹ್ರಾನ್‌ ವಿರುದ್ಧ ನೆತನ್ಯಾಹು ಗಂಭೀರ ಆರೋಪ

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!