ಕಿರಣ್‌ರಾಜ್ 
ಸಿನಿಮಾ ಸುದ್ದಿ

777 ಚಾರ್ಲಿ ನಂತರ ಮುಂದಿನ ಸಿನಿಮಾಗೆ ಕಿರಣ್‌ರಾಜ್ ರೆಡಿ; ಹಾರರ್ ಕಾಮಿಡಿ ಚಿತ್ರ ತಯಾರಿಸಲು ಸಿದ್ಧತೆ

777 ಚಾರ್ಲಿ ಸಿನಿಮಾ ನಿರ್ದೇಶನಕ್ಕಾಗಿ ಇಂದಿಗೂ ಮೆಚ್ಚುಗೆಯನ್ನು ಪಡೆಯುತ್ತಿರುವ ನಿರ್ದೇಶಕ ಕಿರಣರಾಜ್ ಅವರು ತಮ್ಮ ಮುಂದಿನ ಸಿನಿಮಾದ ಕೆಲಸವನ್ನು ಈಗಾಗಲೇ ಪ್ರಾರಂಭಿಸಿದ್ದಾರೆ. ಚಿತ್ರವು ಹಾರರ್ ಕಾಮಿಡಿ-ಫ್ಯಾಂಟಸಿ ಆಗಿದೆ ಎಂದು ಹೇಳಲಾಗುತ್ತಿದೆ.

777 ಚಾರ್ಲಿ ಸಿನಿಮಾ ನಿರ್ದೇಶನಕ್ಕಾಗಿ ಇಂದಿಗೂ ಮೆಚ್ಚುಗೆಯನ್ನು ಪಡೆಯುತ್ತಿರುವ ನಿರ್ದೇಶಕ ಕಿರಣರಾಜ್ ಅವರು ತಮ್ಮ ಮುಂದಿನ ಸಿನಿಮಾದ ಕೆಲಸವನ್ನು ಈಗಾಗಲೇ ಪ್ರಾರಂಭಿಸಿದ್ದಾರೆ. ಚಿತ್ರವು ಹಾರರ್ ಕಾಮಿಡಿ-ಫ್ಯಾಂಟಸಿ ಆಗಿದೆ ಎಂದು ಹೇಳಲಾಗುತ್ತಿದೆ. 

ನಿರ್ದೇಶಕರ ಪ್ರಕಾರ, ಚಿತ್ರವು ವಿಶಿಷ್ಟವಾದ ಹಾರರ್ ಕಾಮಿಡಿಯಾಗಿರುವುದಿಲ್ಲ, ಆದರೆ, ಆ ಪ್ರಕಾರವನ್ನು ತಾರ್ಕಿಕವಾಗಿ ತೆಗೆದುಕೊಳ್ಳುತ್ತದೆ. ಚಿತ್ರವು 777 ಚಾರ್ಲಿಗಿಂತ ದೊಡ್ಡ ಪ್ರಮಾಣದಲ್ಲಿ ತಯಾರಾಗುತ್ತದೆ ಮತ್ತು ಸ್ಕ್ರಿಪ್ಟಿಂಗ್ ಹಂತದಲ್ಲಿ ಸಾಕಷ್ಟು ಸಂಶೋಧನೆಗಳನ್ನು ಮಾಡಲಾಗುತ್ತಿದೆ. ಬಹು ಭಾಷೆಗಳಲ್ಲಿ ಡಬ್ಬಿಂಗ್ ಆವೃತ್ತಿಗಳೊಂದಿಗೆ ದ್ವಿಭಾಷಾ ಚಲನಚಿತ್ರವನ್ನು ಮಾಡುವ ಯೋಜನೆಯನ್ನು ಅವರು ಬಹಿರಂಗಪಡಿಸಿದರು.

ಕಿರಣರಾಜ್ ಅವರು 777 ಚಾರ್ಲಿ ಚಿತ್ರಕ್ಕೆ ಸ್ಕ್ರಿಪ್ಟ್ ಬರೆಯಲು ಒಂದು ವರ್ಷ ತೆಗೆದುಕೊಂಡರು ಮತ್ತು ಅವರು ತಮ್ಮ ಎರಡನೇ ಯೋಜನೆಗೆ ಅದೇ ಸಮಯವನ್ನು ತೆಗೆದುಕೊಳ್ಳುತ್ತಾರೆ ಎಂದು ನಿರೀಕ್ಷಿಸುತ್ತಾರೆ. 'ತಾವು ಸ್ಕ್ರಿಪ್ಟ್ ಬರೆಯುವ ಅರ್ಧದಾರಿಯಲ್ಲೇ ಇದ್ದಾರೆ ಮತ್ತು 777 ಚಾರ್ಲಿ ಸಿನಿಮಾಗಾಗಿ ಸ್ಕ್ರಿಪ್ಟ್ ಬರೆಯುವಾಗ ತಮಗಿದ್ದ ಅದೇ ಉತ್ಸಾಹ ಮತ್ತು ಸೃಜನಶೀಲ ಶಕ್ತಿಯನ್ನು ಅನುಭವಿಸುತ್ತಿದ್ದೇನೆ. ಈಗ ಇದು ಸಮಯ ತೆಗೆದುಕೊಳ್ಳುತ್ತಿದ್ದರೂ, ಸಿದ್ಧಪಡಿಸಿದ ಉತ್ಪನ್ನವನ್ನು ಪ್ರೇಕ್ಷಕರಿಗೆ ಪ್ರಸ್ತುತಪಡಿಸಲು ನಾನು ಕಾಯಲು ಸಾಧ್ಯವಿಲ್ಲ. ಸದ್ಯ ಪ್ರಿ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ' ಎನ್ನುತ್ತಾರೆ ಅವರು.

'ಹಾರರ್ ಕಾಮಿಡಿ ನನಗೆ ಸಾಕಷ್ಟು ಸವಾಲಾಗಿದೆ. 777 ಚಾರ್ಲಿ ಕೂಡ ಸರಳ ಪ್ರಕಾರವಾಗಿರಲಿಲ್ಲ. ಯಾರನ್ನಾದರೂ ನಗಿಸುವುದು ಮತ್ತು ಹೆದರಿಸುವುದು ಸಂಕೀರ್ಣವಾಗಿದೆ. ಇದೊಂದು ವಿಚಿತ್ರ ಪ್ರಕಾರವಾಗಿದ್ದು, ಈ ಸಾಧನೆಯನ್ನು ಸಾಧಿಸುವುದು ಸವಾಲಾಗಿದೆ. ಅದಕ್ಕಾಗಿಯೇ ಅನೇಕ ಚಲನಚಿತ್ರ ನಿರ್ದೇಶಕರು ಇದನ್ನು ಪ್ರಯತ್ನಿಸುವುದಿಲ್ಲ. ಕಮರ್ಷಿಯಲ್ ಚಲನಚಿತ್ರಗಳು, ಲವ್ ಎಂಟರ್‌ಟೈನರ್‌ಗಳು ಮತ್ತು ಥ್ರಿಲ್ಲರ್‌ಗಳು ಸುರಕ್ಷಿತ ಎಂದೆನಿಸಿದರೂ, ಹಾರರ್ ಕಾಮಿಡಿ ಚಿತ್ರಗಳು ಅಪರೂಪ ಮತ್ತು ಸಮಯ ತೆಗೆದುಕೊಳ್ಳುತ್ತದೆ' ಎಂದು ಹೇಳಿದರು.

ಈ ಸಿನಿಮಾದಲ್ಲಿ ಸಾಕಷ್ಟು ನೈಜ ಅಂಶಗಳನ್ನು ಅಳವಡಿಸಲು ಯೋಜಿಸಿದೆ. '777 ಚಾರ್ಲಿಯು ಕಾಲ್ಪನಿಕ ಅಂಶಗಳನ್ನು ಹೊಂದಿದ್ದರೂ, ಇದು ಸಾಪೇಕ್ಷ ಮತ್ತು ವಾಸ್ತವದ ಕ್ಷಣಗಳನ್ನು ಹೊಂದಿದೆ. ಅದೇ ಕಲ್ಪನೆಯನ್ನು ಈ ಯೋಜನೆಯಲ್ಲಿ ಅಳವಡಿಸಲಾಗುವುದು ಎಂದು ಕಿರಣ್‌ರಾಜ್ ಹೇಳಿದರು. 

ನೀವು ವೈಯಕ್ತಿಕವಾಗಿ ಭಯವನ್ನು ಅನುಭವಿಸಿದ್ದೀರಾ ಎಂದು ಕೇಳಿದ್ದಕ್ಕೆ ಉತ್ತರಿಸಿದ ಅವರು, 'ತಮ್ಮ ಜೀವನದ ಒಂದು ಹಂತದಲ್ಲಿ ಕತ್ತಲೆಯಲ್ಲಿ ಹೊರಗೆ ಹೋಗಲು ಹೆದರುತ್ತಿದ್ದರು. ಆದರೆ, ಒಂದು ಸಮಯ ಬಂದಿತು. ಆಗ ನಾನು ರಾತ್ರಿ ವೇಳೆಯಲ್ಲೇ ಕೆಲಸ ಮಾಡಬೇಕಾಗಿತ್ತು. ಒಬ್ಬರು ಕಂಫರ್ಟ್ ಝೋನ್‌ನಿಂದ ಹೊರಗೆ ಬರುವುದು ಅವರ ಬೆಳವಣಿಗೆ ಮತ್ತು ಸೃಜನಶೀಲತೆಗೆ ಕಾರಣವಾಗುತ್ತದೆ ಎಂದು ನಾನು ನಂಬುತ್ತೇನೆ' ಎನ್ನುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

Aligarh Businessman Murder: ಹಿಂದೂ ಮಹಾಸಭಾ ನಾಯಕಿ ಪೂಜಾ ಶಕುನ್ ಪಾಂಡೆ ಬಂಧನ! ಉದ್ಯಮಿಗೆ ಲೈಂಗಿಕ ಕಿರುಕುಳ ನೀಡಿದ್ರಾ?

SCROLL FOR NEXT