ನವೀನ್ ಶಂಕರ್ ಮತ್ತು ಜನಾರ್ದನ್ ಚಿಕ್ಕಣ್ಣ 
ಸಿನಿಮಾ ಸುದ್ದಿ

ಮತ್ತೆ ಒಂದಾದ 'ಗುಳ್ಟು' ಜೋಡಿ : ಹೊಸ ಸಿನಿಮಾದಲ್ಲಿ ನವೀನ್ ಶಂಕರ್- ಜನಾರ್ದನ್ ಚಿಕ್ಕಣ್ಣ ಮೋಡಿ!

'ಗುಳ್ಟು' ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಹೀರೋ ಆಗಿ ಗುರುತಿಸಿಕೊಂಡವರು ನವೀನ್ ಶಂಕರ್. ಈಚೆಗೆ ತೆರೆಕಂಡ ಅವರ 'ಧರಣಿ ಮಂಡಲ ಮಧ್ಯದೊಳಗೆ' ಸಿನಿಮಾಕ್ಕೂ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು.

'ಗುಳ್ಟು' ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಹೀರೋ ಆಗಿ ಗುರುತಿಸಿಕೊಂಡವರು ನವೀನ್ ಶಂಕರ್. ಈಚೆಗೆ ತೆರೆಕಂಡ ಅವರ 'ಧರಣಿ ಮಂಡಲ ಮಧ್ಯದೊಳಗೆ' ಸಿನಿಮಾಕ್ಕೂ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು.

ನವೀನ್ ಶಂಕರ್ ಮತ್ತು ನಿರ್ದೇಶಕ ಜನಾರ್ದನ್ ಚಿಕ್ಕಣ್ಣ ಮತ್ತೊಂದು ಸಿನಿಮಾಗೆ ಕೈಜೋಡಿಸಲು ಯೋಜಿಸುತ್ತಿದ್ದಾರೆ. ಈ ಸಂಬಂಧ ಚರ್ಚೆಗಳು ನಡೆಯುತ್ತಿದ್ದು ನವೀನ್ ಖಚಿತಪಡಿಸಿದ್ದಾರೆ.

ಈಮಧ್ಯೆ ಜನಾರ್ದನ್ ತಮ್ಮ ಎರಡನೇ ಚಿತ್ರ ಅಜ್ಞಾತವಾಸಿಯಲ್ಲಿ ನಿರತರಾಗಿದ್ದಾರೆ. ನನ್ನ ಕಡೆಯಿಂದ ಕ್ಷೇತ್ರಪತಿ ಬಿಡುಗಡೆಗೆ ಸಿದ್ಧವಾಗುತ್ತಿದೆ, ಇದಾದ ಬಳಿಕವಷ್ಟೇ ಜನಾರ್ದನ್ ಅವರ ಜತೆ ನನ್ನ ಮುಂದಿನ ಸಿನಿಮಾದ ಬಗ್ಗೆ ಚರ್ಚೆ ನಡೆಸುತ್ತೇನೆ ಎಂದು ನವೀನ್ ಹೇಳಿದ್ದಾರೆ. ನಾವು ಹೊಸತಾದನ್ನು ಮಾಡಬೇಕು, ಹೀಗಾಗಿ ಇದಕ್ಕೆ ಸಮಯ ಹಿಡಿಯುತ್ತದೆ ಎಂದಿದ್ದಾರೆ.

ನವೀನ್ ತಮ್ಮ ಚಿತ್ರಗಳ ಮೂಲಕ ಸತತ ಯಶಸ್ಸು ಪಡೆಯುತ್ತಿದ್ದಾರೆ. ಹೊಂದಿಸಿ ಬರೆಯಿರಿ (2023) ಉತ್ತಮ  ಪ್ರದರ್ಶನವನ್ನು ಹೊಂದಿದ್ದು ಪ್ರಸ್ತುತ ಡಿಜಿಟಲ್ ವೇದಿಕೆಗಳಲ್ಲಿ ಭರ್ಜರಿ ಪ್ರತಿಕ್ರಿಯೆ ಕಂಡಿದೆ.

ಎಲ್ಲಕ್ಕಿಂತ ಹೆಚ್ಚಾಗಿ, ಹೊಯ್ಸಳ ಸಿನಿಮಾದಲ್ಲಿ ಮಾಡಿರುವ ಖಳನಾಯಕನ ಪಾತ್ರ ಗಮನ ಸೆಳೆದಿದೆ. ಹೊಯ್ಸಳ ನಂತರ, ನಾನು ಅಂತಹ ಹೆಚ್ಚಿನ ಪಾತ್ರಗಳನ್ನು ಸ್ವೀಕರಿಸುತ್ತೇನೆ ಎಂದು ನಿರೀಕ್ಷಿಸಿದ್ದೇನೆ, ಆದರೆ ಕುತೂಹಲಕಾರಿಯಾಗಿ, ನಾಯಕನ ಪಾತ್ರಕ್ಕಾಗಿ ಆಹ್ವಾನ ಬರುತ್ತಿದೆ ಎಂದು ನವೀನ್ ಹೇಳುತ್ತಾರೆ.

ಇತ್ತೀಚೆಗೆ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದಾಗ ನನಗೆ ಆ ಅನುಭವವಾಯಿತು. ಸಿನಿಮಾ ನಿರ್ಮಾಪಕರು ಕೂಡ ಮಾಸ್ ಸಬ್ಜೆಕ್ಟ್‌ಗಳೊಂದಿಗೆ ನನ್ನನ್ನು ಸಂಪರ್ಕಿಸುತ್ತಿದ್ದಾರೆ. ಆದರೆ ಸರಿಯಾದ ಸ್ಕ್ರಿಪ್ಟ್‌ಗಳ ಆಯ್ಕೆಯಲ್ಲಿ ನಾನು ಹೆಚ್ಚು ಜಾಗರೂಕನಾಗಿರುತ್ತೇನೆ. ಜನಾರ್ದನ್ ಜೊತೆಗಿನ ಪ್ರಾಜೆಕ್ಟ್ ವಿಶೇಷವಾಗಿರುತ್ತದೆ ಎಂದು ನವೀನ್ ಹೇಳಿದ್ದಾರೆ. ಇದರ ನಡುವೆ ಅವರು ಮುಂದಿನ ಕ್ಷೇತ್ರಪತಿ ಸಿನಿಮಾ ಜುಲೈ ನಲ್ಲಿ ರಿಲೀಸ್ ಆಗಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

US ವಲಸೆ ನೀತಿ ಮತ್ತಷ್ಟು ಕಠಿಣ: ಅರ್ಜಿದಾರರಿಗೆ ಟ್ರಂಪ್‌ ಸರ್ಕಾರ ಶಾಕ್‌: ವಿಶ್ವದಾದ್ಯಂತ VISA ಸಂದರ್ಶನಗಳಿಗೆ ಬ್ರೇಕ್‌!

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಡವರ ಬದುಕಿಗೆ ಬೆಲೆ ಏರಿಕೆ ಬರೆ: ‘ಅಚ್ಛೇ ದಿನ್ ಆಯ್ತು ದುಬಾರಿ ದಿನ್: ಅಗತ್ಯ ವಸ್ತುಗಳ ಬೆಲೆ ಏರಿಕೆ ಬೆನ್ನಲ್ಲೇ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!