ಸ್ಪರ್ಧಿಗಳೊಂದಿಗೆ ಮಾತನಾಡುತ್ತಿರುವ ನಟಿ ಸಂಗೀತಾ. 
ಸಿನಿಮಾ ಸುದ್ದಿ

Bigg Boss Kannada 10: ಹೈಡ್ರಾಮಾ ಬಳಿಕ ಮನೆಯಲ್ಲಿ ಕಾಣಿಸಿಕೊಂಡ ನಟಿ ಸಂಗೀತಾ ಶೃಂಗೇರಿ!

ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳು ಕಡಿಮೆ ಆಗುತ್ತಿದ್ದಂತೆಯೇ ಸ್ಪರ್ಧೆ ಕೂಡ ಜೋರಾಗಿದೆ. ಬಿಗ್ ಮನೆಯಲ್ಲಿ ಕಾರ್ತಿಕ್-ಸಂಗೀತಾ ಕಿರಿಕ್ ಮಾಡಿಕೊಂಡಿದ್ದು, ಈ ಹಗ್ಗಜಗ್ಗಾಟದ ಬಳಿಕ ನಟಿ ಸಂಗೀತಾ ಶೃಂಗೇರಿ ಅವರು ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದಾರೆಂದು ಹೇಳಲಾಗುತ್ತಿತ್ತು. ಆದರೆ, ಸಂಗೀತಾ ಆವರು ಮನೆಯಲ್ಲೇ ಉಳಿದುಕೊಂಡಿರುವುದು ಕಂಡು ಬಂದಿದೆ.

ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳು ಕಡಿಮೆ ಆಗುತ್ತಿದ್ದಂತೆಯೇ ಸ್ಪರ್ಧೆ ಕೂಡ ಜೋರಾಗಿದೆ. ಬಿಗ್ ಮನೆಯಲ್ಲಿ ಕಾರ್ತಿಕ್-ಸಂಗೀತಾ ಕಿರಿಕ್ ಮಾಡಿಕೊಂಡಿದ್ದು, ಈ ಹಗ್ಗಜಗ್ಗಾಟದ ಬಳಿಕ ನಟಿ ಸಂಗೀತಾ ಶೃಂಗೇರಿ ಅವರು ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದಾರೆಂದು ಹೇಳಲಾಗುತ್ತಿತ್ತು. ಆದರೆ, ಸಂಗೀತಾ ಆವರು ಮನೆಯಲ್ಲೇ ಉಳಿದುಕೊಂಡಿರುವುದು ಕಂಡು ಬಂದಿದೆ.

ಕಾರ್ತಿಕ್ ಮಹೇಶ್, ತನಿಷಾ ಕುಪ್ಪಂಡ ಸ್ನೇಹಿತರಿಂದ ದೂರವಾಗಿ ವಿನಯ್ ಗೌಡ ತಂಡ ಸೇರಿಕೊಂಡಿದ್ದ ಸಂಗೀತಾ ಶೃಂಗೇರಿ ಅವರು, ಟಾಸ್ಕ್ ವೊಂದರಲ್ಲಿ ಕಾರ್ತಿಕ್‌ ತಲೆಬೋಳಿಸಿಕೊಳ್ಳುವ ಸವಾಲ್‌ ಹಾಕಿದ್ದರು. ಹಾಗೆಯೇ ತನಿಷಾ ಕುಪ್ಪಂಡ ಅವರು ಮೆಣಸಿನಕಾಯಿ ತಿನ್ನಲೂ ಕಾರಣರಾಗಿದ್ದರು. ಇದಾದ ಬಳಿಕ ಎಲ್ಲರೂ ಸಂಗೀತಾರನ್ನು ದೂಷಿಸಿದ್ದರು.

ಈ ನಡುವಲ್ಲೇ ಕಾರ್ತಿಕ್, ಸಂತೋಷ್ ತಲೆ ಬೋಳಿಸಿಕೊಂಡಿದ್ದು, ತನಿಷಾ ಮೆಣಸಿನ ಕಾಯಿ ತಿಂದು ನೋವು ಅನುಭವಿಸಿದ್ದು ಸಂಗೀತಾ ಮನಸ್ಸಿನಲ್ಲಿ ಪಶ್ಚಾತ್ತಾಪ ಹುಟ್ಟಿಸಿದೆಯಾ ಎಂಬ ಅನುಮಾನ ಮೂಡಿಸಿತ್ತು.

ಇದಾದ ಬಳಿಕ ಕಾರ್ತಿಕ್ ಜೊತೆ ಸಂಗೀತಾ ಅವರು ಜಗಳ ಮಾಡಿಕೊಂಡಿದ್ದು, ಈ ಜಗಳ ಸಂಗೀತಾ ಅವರಿಗೆ ಸಾಕಷ್ಟು ಬೇಸರ ತರಿಸಿದೆ ಎನ್ನಲಾಗಿತ್ತು. ಈ  ನಡುವಲ್ಲೇ JioCinema ಬಿಡುಗಡೆ ಮಾಡಿದ್ದ ಪ್ರೋಮೋ ವಿಡಿಯೋವೊಂದು ಸಂಗೀತಾ ಅವರು ಬಿಗ್ ಬಾಸ್ ಮನೆಯಿಂದ ಹೊರಬಂದಿರುವ ಕುರಿತು ಗೊಂದಲಗಳನ್ನು ಸೃಷ್ಟಿಸಿತ್ತು.

ಪ್ರೋಮೋದಲ್ಲಿ ಸಂಗೀತಾ ಅವರು ಅಳುತ್ತಿರುವುದು, ನನಗೆ ಈ ಗೇಮ್ ಆಡಲು ಇಷ್ಟವಿಲ್ಲ. ಪ್ಲೀಸ್ ಬಿಗ್ ಬಾಸ್’ ಎಂದು ಬೇಡಿಕೊಳ್ಳುತ್ತಿರುವುದು, ಅದರ ಬೆನ್ನಿಗೇ ಮನೆಯ ಮುಖ್ಯದ್ವಾರ ತೆರೆದುಕೊಂಡಿರುವುದು ಕಂಡು ಬಂದಿತ್ತು.

ವಿಡಿಯೋ ಬೆನ್ನಲ್ಲೇ ಸಂಗೀತಾ ಮನೆಯಿಂದ ಹೊರಗೆ ಹೋದರಾ? ಅಥವಾ ಒಳಗೇ ಉಳಿದುಕೊಂಡಿದ್ದಾರಾ? ಎಂಬುದರ ಕುರಿತು ಪ್ರಶ್ನೆಗಳನ್ನು ಹುಟ್ಟುಹಾಕಿದ್ದವು. ಆದರೆ, ಇಂದು ಸಂಗೀತಾ ಅವರು ಮನೆಯಲ್ಲಿಯೇ ಉಳಿದುಕೊಂಡಿರುವುದ ಕಂಡು ಬಂದಿದೆ.

JioCinemaದಲ್ಲಿ ಪ್ರಸಾರವಾಗುತ್ತಿರುವ ಬಿಗ್‌ಬಾಸ್ ಕನ್ನಡದ ನೇರಪ್ರಸಾರದಲ್ಲಿ ಸಂಗೀತಾ ಅವರು ಬಿಗ್ ಬಾಸ್ ಮನೆಯಲ್ಲಿಯೇ ಇರುವುದು ಕಂಡು ಬಂದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT