ಸಿನಿಮಾ ಸುದ್ದಿ

ಕಾಮಿಡಿ ಕಿಲಾಡಿ ಖ್ಯಾತಿಯ ಶಿವರಾಜ್ ಕೆ ಆರ್ ಪೇಟೆಗೆ ಪಿತೃ ವಿಯೋಗ

Shilpa D

ಬೆಂಗಳೂರು: ಜೀ ಕನ್ನಡದ ರಿಯಾಲಿಟಿ ಶೋ ಕಾಮಿಡಿ ಕಿಲಾಡಿಗಳು ಖ್ಯಾತಿಯ ನಟ ಶಿವರಾಜ್ ಕೆ ಆರ್ ಪೇಟೆ  ಅವರ ತಂದೆ ರಾಮೇಗೌಡ ಅವರು ಆಗಸ್ಟ್ 31ರಂದು ನಿಧನರಾದರು. ಕೆ.ಆರ್.ಪೇಟೆ ತಾಲೂಕಿನ ಶೀಳನೆರೆ ಹೋಬಳಿಯ ರಾಜಘಟ್ಟ ಗ್ರಾಮದ ನಿವಾಸಿಯಾಗಿದ್ದರು.

ಡ್ರಾಮಾ ಮಾಸ್ಟರ್ ರಾಮೇಗೌಡ ಅವರಿಗೆ 80 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ರಾಮೇಗೌಡ ಅವರು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ. ಅವರಿಗೆ ನಾಲ್ಕು ಗಂಡು ಮಕ್ಕಳು ಮೂರು ಹೆಣ್ಣುಮಕ್ಕಳು ಇದ್ದಾರೆ.  ಹುಟ್ಟೂರು ಕೆ.ಆರ್‌. ಪೇಟೆ ತಾಲೂಕಿನ ರಾಜಘಟ್ಟದಲ್ಲಿ ಸೆ. 1ರ ಶುಕ್ರವಾರ ಮಧ್ಯಾಹ್ನದ ವೇಳೆಗೆ ಅಂತ್ಯಕ್ರಿಯೆ ನೆರವೇರಲಿದೆ.

ರಾಮೇಗೌಡರು ಡ್ರಾಮಾ ಮಾಸ್ಟರ್‌ ಆಗಿ ಕಳೆದ ಕೆಲ ದಶಕಗಳಿಂದ ಗುರುತಿಸಿಕೊಂಡಿದ್ದರು. ನಾಟಕ ನಿರ್ದೇಶನದಲ್ಲಿಯೂ ತೊಡಗಿಸಿಕೊಂಡು, ಅಪಾರ ಶಿಷ್ಯವೃಂದವನ್ನೂ ಹೊಂದಿದ್ದರು. ಅಪ್ಪನ ಗರಡಿಯಲ್ಲಿಯೇ ‌ಶಿವರಾಜ್‌ ಕೆ.ಆರ್‌. ಪೇಟೆ ನಟನೆಯನ್ನು ಕರಗತ ಮಾಡಿಕೊಂಡಿದ್ದರು.

SCROLL FOR NEXT