K G George 
ಸಿನಿಮಾ ಸುದ್ದಿ

ಮಲಯಾಳಂನ ಖ್ಯಾತ ಚಿತ್ರ ನಿರ್ದೇಶಕ ಕೆ ಜಿ ಜಾರ್ಜ್ ಕೊಚ್ಚಿಯಲ್ಲಿ ನಿಧನ

ಮಲಯಾಳಂನ ಹಿರಿಯ ನಿರ್ದೇಶಕ ಕೆ.ಜಿ.ಜಾರ್ಜ್ ಭಾನುವಾರ (77ವ) ನಿಧನರಾಗಿದ್ದಾರೆ. ಸ್ಥಳೀಯ ಮಾಧ್ಯಮಗಳ ಪ್ರಕಾರ, ಅವರು ಕೊಚ್ಚಿಯ ವೃದ್ಧಾಶ್ರಮದಲ್ಲಿ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ. 

ತಿರುವನಂತಪುರ: ಮಲಯಾಳಂನ ಹಿರಿಯ ನಿರ್ದೇಶಕ ಕೆ.ಜಿ.ಜಾರ್ಜ್ ಭಾನುವಾರ (77ವ) ನಿಧನರಾಗಿದ್ದಾರೆ. ಸ್ಥಳೀಯ ಮಾಧ್ಯಮಗಳ ಪ್ರಕಾರ, ಅವರು ಕೊಚ್ಚಿಯ ವೃದ್ಧಾಶ್ರಮದಲ್ಲಿ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ. 

ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದು, ಕಳೆದ ಕೆಲವು ವರ್ಷಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಕೆ.ಜಿ.ಜಾರ್ಜ್ (ಗೀವರ್ಗೀಸ್ ಜಾರ್ಜ್ ಕುಲಕ್ಕಟಿಲ್) ಅವರು ಮೇ 24, 1946 ರಂದು ತಿರುವಲ್ಲಾದಲ್ಲಿ ಸ್ಯಾಮ್ಯುಯೆಲ್ ಮತ್ತು ಅನ್ನಮ್ಮ ಅವರ ಹಿರಿಯ ಮಗನಾಗಿ ಜನಿಸಿದರು. ಅವರು ಪುಣೆ ಫಿಲ್ಮ್ ಇನ್‌ಸ್ಟಿಟ್ಯೂಟ್‌ನಲ್ಲಿ ತಮ್ಮ ಚಲನಚಿತ್ರ ನಿರ್ದೇಶನ ಕೋರ್ಸ್ ನ್ನು ಪೂರ್ಣಗೊಳಿಸಿದ್ದರು. ಖ್ಯಾತ ನಿರ್ದೇಶಕ ರಾಮು ಕಾರ್ಯತ್ ಅವರ ‘ಮಾಯಾ’ ಚಿತ್ರದಲ್ಲಿ ಸಹಾಯಕರಾಗಿ ಚಿತ್ರರಂಗ ಪ್ರವೇಶಿಸಿದರು.

ಜಾರ್ಜ್ ಅವರು, ಸ್ವಪ್ನದನಂ (1975) ಮೂಲಕ ತಮ್ಮ ಚೊಚ್ಚಲ ಪ್ರವೇಶ ಮಾಡಿದರು, ಇದು ಮಲಯಾಳಂನಲ್ಲಿ ಅತ್ಯುತ್ತಮ ಚಲನಚಿತ್ರಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದುಕೊಂಡಿತು.

ಅವರ ಪ್ರಸಿದ್ಧ ಚಲನಚಿತ್ರಗಳೆಂದರೆ ಉಳ್ಕಡಲ್ (1979), ಮೇಳ (1980), ಯವನಿಕಾ (1982), ಲೇಖನುದೇ ಮರಣಂ ಒರು ಫ್ಲ್ಯಾಶ್‌ಬ್ಯಾಕ್ (1983), ಅದಮಿಂತೆ ವಾರಿಯೆಲ್ಲು (1983), ಪಂಚವಡಿ ಪಾಲಂ (1984), ಇರಕಲ್ (1986), ಮತ್ತು ಮತ್ತೋರಲ್ (1988) ), ಅವರ ವಿವಿಧ ಚಿತ್ರಗಳಿಗಾಗಿ ಅವರು 9 ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಅವರ ಚಲನಚಿತ್ರಗಳು ವಿಡಂಬನಾತ್ಮಕ ಮತ್ತು ಸ್ತ್ರೀವಾದಿ ವಿಷಯಗಳಿಗಾಗಿ ಪ್ರಶಂಸಿಸಲ್ಪಟ್ಟಿವೆ. ಜಾರ್ಜ್ ಅವರು ಮಲಯಾಳಂ ಸಿನಿ ತಂತ್ರಜ್ಞರ ಸಂಘದ (MACTA) ಸ್ಥಾಪಕ ಮತ್ತು ಅಧ್ಯಕ್ಷರಾಗಿದ್ದಾರೆ ಮತ್ತು ಅದರ ಕಾರ್ಯಕಾರಿ ಸದಸ್ಯರಾಗಿದ್ದರು. ಕೇರಳ ರಾಜ್ಯ ಚಲನಚಿತ್ರ ಅಭಿವೃದ್ಧಿ ನಿಗಮದ ಅಧ್ಯಕ್ಷರೂ ಆಗಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT