ನಟ ಶಿವರಾಜ್‌ಕುಮಾರ್ 
ಸಿನಿಮಾ ಸುದ್ದಿ

ಆರ್‌ಸಿ ಸ್ಟುಡಿಯೋಸ್ ನಿರ್ಮಾಣದ ಬಹುಭಾಷಾ ಚಿತ್ರದಲ್ಲಿ ನಟ ಶಿವರಾಜ್‌ಕುಮಾರ್

ಆರ್‌ಸಿ ಸ್ಟುಡಿಯೋಸ್ ಇತ್ತೀಚೆಗಷ್ಟೇ ಇನ್ವೆನಿಯೊ ಒರಿಜಿನ್ ಕಂಪನಿಯ ಅಲಂಕಾರ್ ಪಾಂಡಿಯನ್ ಮತ್ತು ಉದ್ಯಮಿ ಸೀಕಲ್ ರಾಮಚಂದ್ರ ಗೌಡ ಅವರ ಸಹಯೋಗದಲ್ಲಿ ಆರ್ ಚಂದ್ರು ಅವರ ಬ್ಯಾನರ್ ಅಡಿಯಲ್ಲಿ ಐದು ಸಿನಿಮಾಗಳನ್ನು ಬ್ಯಾಂಕ್‌ರೋಲ್ ಮಾಡುವುದಾಗಿ ಘೋಷಿಸಿದೆ.

ಆರ್‌ಸಿ ಸ್ಟುಡಿಯೋಸ್ ಇತ್ತೀಚೆಗಷ್ಟೇ ಇನ್ವೆನಿಯೊ ಒರಿಜಿನ್ ಕಂಪನಿಯ ಅಲಂಕಾರ್ ಪಾಂಡಿಯನ್ ಮತ್ತು ಉದ್ಯಮಿ ಸೀಕಲ್ ರಾಮಚಂದ್ರ ಗೌಡ ಅವರ ಸಹಯೋಗದಲ್ಲಿ ಆರ್ ಚಂದ್ರು ಅವರ ಬ್ಯಾನರ್ ಅಡಿಯಲ್ಲಿ ಐದು ಸಿನಿಮಾಗಳನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಫಾದರ್, ಪಿಒಕೆ, ಶ್ರೀ ರಾಮಬಾಣ ಚಿರಿತಾ, ಡಾಗ್ ಮತ್ತು ಕಬ್ಜಾ 2 ಚಿತ್ರಗಳನ್ನು ಘೋಷಿಸಲಾಗಿದೆ. ಜೊತೆಗೆ, ಪ್ರೊಡಕ್ಷನ್ ಹೌಸ್ ಮತ್ತೊಂದು ಮಹತ್ವದ ಘೋಷಣೆ ಮಾಡಲು ಸಿದ್ಧವಾಗಿದೆ.

ಮೂಲಗಳ ಪ್ರಕಾರ, ಸಂಸ್ಥೆಯು ತಮ್ಮ ಆರನೇ ಸಿನಿಮಾಗಾಗಿ ನಟ ಶಿವರಾಜ್‌ಕುಮಾರ್ ಅವರೊಂದಿಗೆ ಕೆಲಸ ಮಾಡಲಿದೆ. ಸೋಮವಾರ ಈ ಬಗ್ಗೆ ಅಧಿಕೃತ ಘೋಷಣೆ ಮಾಡಲಿದ್ದು, ಈ ಬ್ಯಾನರ್‌ನಿಂದ ಮತ್ತೊಂದು ಬಹುಭಾಷಾ ಸಿನಿಮಾ ತಯಾರಾಗಲಿದೆ.

ಫಾದರ್ ಚಿತ್ರದಲ್ಲಿ ನಟ ಕೃಷ್ಣ ಕಾಣಿಸಿಕೊಳ್ಳಲಿದ್ದಾರೆ ಮತ್ತು ಈ ಚಿತ್ರದ ಶೂಟಿಂಗ್ ಪ್ರಾರಂಭವಾಗಿದೆ. ಹೆಚ್ಚುವರಿಯಾಗಿ, ನಟ ಸುದೀಪ್ ಅವರೊಂದಿಗೂ ಒಂದು ಯೋಜನೆ ಇದ್ದು, ಅದರ ವಿವರಗಳು ಶೀಘ್ರದಲ್ಲೇ ಬಹಿರಂಗಗೊಳ್ಳಲಿವೆ. ಚಂದ್ರು ಈ ಹಿಂದೆ ಶಿವರಾಜಕುಮಾರ್ ಅವರ ಮೈಲಾರಿ ಚಿತ್ರ ನಿರ್ದೇಶಿಸಿದ್ದರು ಮತ್ತು ಸೆಂಚುರಿ ಸ್ಟಾರ್ ಶಿವಣ್ಣ ಕೂಡ ಉಪೇಂದ್ರ ನಾಯಕನಾಗಿ ನಟಿಸಿದ್ದ ಆರ್ ಚಂದ್ರು ನಿರ್ದೇಶನದ ಕಬ್ಜ ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ನಿರ್ಮಾಣ ಸಂಸ್ಥೆ ಇದೀಗ ಶಿವರಾಜ್‌ಕುಮಾರ್ ಅವರೊಂದಿಗೆ ಸಿನಿಮಾ ಘೋಷಿಸಿದ್ದು, ನಿರ್ದೇಶಕರು ಮತ್ತು ಇತರ ವಿವರಗಳನ್ನು ಶೀಘ್ರದಲ್ಲೇ ಬಹಿರಂಗಪಡಿಸಲಿದೆ.

ಸದ್ಯ ಶಿವರಾಜಕುಮಾರ್ ಅವರು ನರ್ತನ್ ನಿರ್ದೇಶನದ ಭೈರತಿ ರಣಗಲ್ ಮತ್ತು ಅರ್ಜುನ್ ಜನ್ಯ ಅವರ 45 ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಅಲ್ಲದೆ, IV ರಿಟರ್ನ್ಸ್‌ ಚಿತ್ರದಲ್ಲಿಯೂ ತೊಡಗಿಸಿಕೊಂಡಿದ್ದಾರೆ ಮತ್ತು ರಾಮಚರಣ್ ಅವರ ಮುಂಬರುವ ತೆಲುಗು ಚಿತ್ರದ ಭಾಗವಾಗಿದ್ದಾರೆ. ಅದರಲ್ಲಿ ಅವರು ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ; Indian Army ಹೆಲಿಕಾಪ್ಟರ್ ರೋಚಕ ಕಾರ್ಯಾಚರಣೆ! Video

ಡಿ ಕೆ ಶಿವಕುಮಾರ್ ಹಿಂದೂ ಜನರ ಭಾವನೆಗಳಿಗೆ ನೋವುಂಟುಮಾಡಿದ್ದು ಕ್ಷಮೆಯಾಚಿಸಬೇಕು: ಶೋಭಾ ಕರಂದ್ಲಾಜೆ

Tamil Nadu: ನಟ-ರಾಜಕಾರಣಿ ದಳಪತಿ ವಿಜಯ್ ಬೌನ್ಸರ್ ಗಳಿಂದ ವ್ಯಕ್ತಿಯ ಮೇಲೆ ಹಲ್ಲೆ ಆರೋಪ! ಕೇಸ್ ದಾಖಲು, ವಿಡಿಯೋದಲ್ಲಿ ಏನಿದೆ?

SCROLL FOR NEXT