ವಿಕ್ಟೋರಿಯಾ ಮ್ಯಾನ್ಷನ್‌ ಚಿತ್ರದ ಪೋಸ್ಟರ್ - ಕಾಶಿಮಾ 
ಸಿನಿಮಾ ಸುದ್ದಿ

'ವಿಕ್ಟೋರಿಯಾ ಮ್ಯಾನ್ಷನ್‌' ಚಿತ್ರಕ್ಕಾಗಿ ನಟಿ ಕಾಶಿಮಾ ಹೊಸ ಅವತಾರ!

ಟೆಂಪರ್ ಮತ್ತು ನರೇಶ್ ಕುಮಾರ್ ನಿರ್ದೇಶನದ 'ಸೌತ್ ಇಂಡಿಯನ್ ಹೀರೋ' ಚಿತ್ರದಲ್ಲಿನ ಅಭಿನಯಕ್ಕಾಗಿ ಮೆಚ್ಚುಗೆ ಪಡೆದ ನಟಿ ಕಾಶಿಮಾ ಸದ್ಯ 'ವಿಕ್ಟೋರಿಯಾ ಮ್ಯಾನ್ಷನ್' ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರತಂಡದ ಪ್ರಕಾರ, ಈ ಚಿತ್ರವು ಕಾಶಿಮಾರನ್ನು ಹೊಸ ಅವತಾರದಲ್ಲಿ ತೋರಿಸಲಿದೆ.

ಟೆಂಪರ್ ಮತ್ತು ನರೇಶ್ ಕುಮಾರ್ ನಿರ್ದೇಶನದ 'ಸೌತ್ ಇಂಡಿಯನ್ ಹೀರೋ' ಚಿತ್ರದಲ್ಲಿನ ಅಭಿನಯಕ್ಕಾಗಿ ಮೆಚ್ಚುಗೆ ಪಡೆದ ನಟಿ ಕಾಶಿಮಾ ಸದ್ಯ 'ವಿಕ್ಟೋರಿಯಾ ಮ್ಯಾನ್ಷನ್' ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ವಿಕ್ಟೋರಿಯಾ ಮ್ಯಾನ್ಷನ್ ಚಿತ್ರವನ್ನು ರಾಜೇಶ್ ಬಾಲಿ ನಿರ್ದೇಶಿಸಿದ್ದು, ನಾಯಕನಾಗಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗಷ್ಟೇ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು, ಚಿತ್ರತಂಡ ಇತ್ತೀಚೆಗೆ ನಟ ಶಿವರಾಜಕುಮಾರ್ ಅವರಿಂದ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅನ್ನು ಬಿಡುಗಡೆ ಮಾಡಿಸಿದೆ.

ವಿಕ್ಟೋರಿಯಾ ಮ್ಯಾನ್ಷನ್ 1900 ರಲ್ಲಿ ಹನುಮನಗಿರಿಯಲ್ಲಿ ಸಂಭವಿಸಿದ ವಿಲಕ್ಷಣ ಘಟನೆಗಳು ಮತ್ತು ಆಚರಣೆಯಲ್ಲಿದ್ದ ವಿಶಿಷ್ಟ ಘಟನೆಗಳ ಸುತ್ತ ಸುತ್ತುತ್ತದೆ. ಇದು ಶತಮಾನಗಳಿಂದ ರಹಸ್ಯವಾಗಿಯೇ ಉಳಿದಿದೆ. ಪುರಾತತ್ತ್ವ ಇಲಾಖೆ ನಡೆಸಿದ ತನಿಖೆಯನ್ನು ಚಿತ್ರವು ಥ್ರಿಲ್ಲರ್ ನಾಟಕವಾಗಿ ತೆರೆಮೇಲಿಡುತ್ತದೆ. ಚಿತ್ರತಂಡದ ಪ್ರಕಾರ, ಈ ಚಿತ್ರವು ಕಾಶಿಮಾರನ್ನು ಹೊಸ ಅವತಾರದಲ್ಲಿ ತೋರಿಸಲಿದೆ.

ವಿಕ್ಟೋರಿಯಾ ಮ್ಯಾನ್ಷನ್‌ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿದ ಶಿವರಾಜ್‌ಕುಮಾರ್

ಚಿತ್ರವು ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳ ಜೊತೆಗೆ ಮೂಡುಬಿದಿರೆ, ಮಂಗಳೂರು, ಚಿಕ್ಕಮಗಳೂರು ಮತ್ತು ಬೇಲೂರು ಸೇರಿದಂತೆ ಇತರ ಸ್ಥಳಗಳಲ್ಲಿ ಚಿತ್ರೀಕರಣಗೊಂಡಿದೆ. ಈ ಹಿಂದೆ ಡಿಜಿಟಲ್ ವೇದಿಕೆಗಳಲ್ಲಿ ಚಲನಚಿತ್ರ ಪ್ರಚಾರಗಳಲ್ಲಿ ತೊಡಗಿಸಿಕೊಂಡಿದ್ದ ಉಮೇಶ್ ಕೆಎನ್ ಅವರೀಗ ರಾಜೇಶ್ ಬಾಲಿ ಅವರ ಸಹಯೋಗದೊಂದಿಗೆ ನಿರ್ಮಾಣಕ್ಕೆ ಮುಂದಾಗಿದ್ದಾರೆ ಮತ್ತು ಶ್ರೀ ಪದ್ಮಾವತಿ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಸಿನಿಮಾವನ್ನು ಬ್ಯಾಂಕ್‌ರೋಲ್ ಮಾಡಲಿದ್ದಾರೆ.

ವಿಕ್ಟೋರಿಯಾ ಮ್ಯಾನ್ಷನ್‌ನ ತಾಂತ್ರಿಕ ತಂಡದಲ್ಲಿ ಸಂಗೀತ ಸಂಯೋಜಕ ಕಿರಣ್ ರವೀಂದ್ರನಾಥ್, ಛಾಯಾಗ್ರಾಹಕ ವೀರೇಶ್ ಬುಗುಡೆ, ಸಂಕಲನಕಾರ ನಾನಿ ಕೃಷ್ಣ ಮತ್ತು ಸಾಹಸ ನೃತ್ಯ ನಿರ್ದೇಶಕ ಅಶೋಕ್ ಮಾಸ್ಟರ್ ಇದ್ದಾರೆ. ಚಿತ್ರದ ತಾರಾಗಣದಲ್ಲಿ ಮಿಮಿಕ್ರಿ ಗೋಪಿ, ಮಾತೆ ಕೊಪ್ಪಳ, ಶ್ರೀಧರ್, ಬಾಲ ರಾಜವಾಯಿ, ಗುರುದೇವ್ ನಾಗರಾಜ್, ಉಮೇಶ್, ಮದನ್ ರಾಜ್, ಅಂಜಿ ಹಿತೇಶ್, ಪಾಲ್ಟಿ ಗೋವಿಂದ್, ಶೈಲಜಾ ಮತ್ತು ಕೀರ್ತನ್ ಪ್ರಮುಖ ಪಾತ್ರಗಳಲ್ಲಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಿದ್ದರಾಮಯ್ಯ ಹೈಕಮಾಂಡ್ ಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಾರೆ: CM ಪುತ್ರ ಯತೀಂದ್ರ ಸ್ಫೋಟಕ ಹೇಳಿಕೆ; Video

CM ಕುರ್ಚಿಗಾಗಿ ಬಣ ಬಡಿದಾಟ: ಸಿದ್ದರಾಮಯ್ಯ vs ಡಿಕೆಶಿ 'ಹೈಡ್ರಾಮ' ಈಗ ದೆಹಲಿಗೆ ಶಿಫ್ಟ್; ಎಲ್ಲರ ಚಿತ್ತ ಹೈಕಮಾಂಡ್ ನತ್ತ!

ಅಸ್ಸಾಂ ವಿಧಾನಸಭೆಯಲ್ಲಿ ಬಹುಪತ್ನಿತ್ವ ನಿಷೇಧ ಮಸೂದೆ ಅಂಗೀಕಾರ; ಬುಡಕಟ್ಟು ಜನಾಂಗಕ್ಕೆ ವಿನಾಯಿತಿ

ಹವಾಯಿ ದ್ವೀಪದಲ್ಲಿ ಮತ್ತೆ ಸ್ಫೋಟಿಸಿದ ಜ್ವಾಲಾಮುಖಿ: ಬರೊಬ್ಬರಿ 400 ಅಡಿ ಎತರಕ್ಕೆ ಚಿಮ್ಮಿದ ಲಾವಾರಸ, ರಣರೋಚಕ ವಿಡಿಯೋ

'ಸಿಎಂ ಸ್ಥಾನದಿಂದ ಸಿದ್ದರಾಮಯ್ಯರ ಕೆಳಗಿಳಿಸಿದರೆ ನಿಮಗೇ ಅಪಾಯ': ಕಾಂಗ್ರೆಸ್ ಗೆ ಅಹಿಂದ ಸಮುದಾಯಗಳ ಖಡಕ್ ಎಚ್ಚರಿಕೆ

SCROLL FOR NEXT