ಪ್ರಶಾಂತ್ ನೀಲ್ ಮತ್ತು ಅಜಿತ್ ಕುಮಾರ್ 
ಸಿನಿಮಾ ಸುದ್ದಿ

ಹೊಂಬಾಳೆ ಸಂಸ್ಥೆ ನಿರ್ಮಾಣದಲ್ಲಿ ಅಜಿತ್ ಸಿನಿಮಾಗೆ ಪ್ರಶಾಂತ್ ನೀಲ್ ನಿರ್ದೇಶನ?

ಕನ್ನಡ, ತೆಲುಗು ಸಿನಿಮಾಗಳ ಬಳಿಕ ಈಗ ತಮಿಳಿನ ಸ್ಟಾರ್ ನಟ ಅಜಿತ್ ನಿರ್ದೇಶನ ಮಾಡಲು ಸಜ್ಜಾಗಿದ್ದಾರೆ. ಈಗಾಗಲೇ ಅಜಿತ್‌ ಅವರನ್ನು ಭೇಟಿಯಾಗಿ ಪ್ರಶಾಂತ್ ನೀಲ್ ಕಥೆ ಹೇಳಿದ್ದಾರೆ. ಅವರು ಹೆಣೆದಿರುವ ಕಥೆ ಅಜಿತ್‌ಗೂ ಕೂಡ ಇಷ್ಟವಾಗಿ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎನ್ನಲಾಗಿದೆ.

ಕೆಜಿಎಫ್ ಮತ್ತು ಸಲಾರ್ ಸಿನಿಮಾ ಯಶಸ್ಸಿನಲ್ಲಿರುವ ನಿರ್ದೇಶಕ ಪ್ರಶಾಂತ್ ನೀಲ್ ಈಗ ಮತ್ತೊಂದು ಮೆಗಾ ಬಜೆಟ್ ಸಿನಿಮಾ ಮಾಡಲು ಸಜ್ಜಾಗುತ್ತಿದ್ದಾರೆ.

ಕನ್ನಡ, ತೆಲುಗು ಸಿನಿಮಾಗಳ ಬಳಿಕ ಈಗ ತಮಿಳಿನ ಸ್ಟಾರ್ ನಟ ಅಜಿತ್ ನಿರ್ದೇಶನ ಮಾಡಲು ಸಜ್ಜಾಗಿದ್ದಾರೆ. ಈಗಾಗಲೇ ಅಜಿತ್‌ ಅವರನ್ನು ಭೇಟಿಯಾಗಿ ಪ್ರಶಾಂತ್ ನೀಲ್ ಕಥೆ ಹೇಳಿದ್ದಾರೆ. ಅವರು ಹೆಣೆದಿರುವ ಕಥೆ ಅಜಿತ್‌ಗೂ ಕೂಡ ಇಷ್ಟವಾಗಿ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎನ್ನಲಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಈ ಹೆಸರಾಂತ ನಟ-ನಿರ್ದೇಶಕರು ಎರಡು ಸಿನಿಮಾಗಳಲ್ಲಿ ಕೆಲಸ ಮಾಡಲು ತಯಾರಿ ನಡೆಸುತ್ತಿದ್ದಾರೆ. ಈ ಚಿತ್ರಗಳನ್ನು ದಕ್ಷಿಣದ ಹೆಸರಾಂತ ಚಲನಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ನಿರ್ಮಿಸಲಿದ್ದಾರೆ. ಸಲಾರ್ 2 ನಂತರ ಪ್ರಶಾಂತ್ ಅವರು ಅಜಿತ್‌ಗಾಗಿ ಸತತ ಎರಡು ಚಿತ್ರಗಳನ್ನು ನಿರ್ದೇಶಿಸಲು ರೆಡಿಯಾಗಿದ್ದಾರೆ.

ವರದಿಗಳ ಪ್ರಕಾರ, ಕಳೆದ ತಿಂಗಳು 'ವಿದಾಮುಯಾರ್ಚಿ' ಸಿನಿಮಾ ಶೆಡ್ಯೂಲ್ ಬ್ರೇಕ್ ಸಮಯದಲ್ಲಿ ಅಜಿತ್ ಮತ್ತು ಪ್ರಶಾಂತ್ ಭೇಟಿಯಾಗಿದ್ದರು. ಕೆಜಿಎಫ್ ನಿರ್ದೇಶಕರು ಅಜಿತ್‌ ಬಳಿ ಮೂರು ವರ್ಷಕ್ಕಿಂತ ಹೆಚ್ಚಿನ ಸಮಯ ಕೋರಿದ್ದರು. ಈ ಜೋಡಿ ಕಾಂಬಿನೇಶನ್​ನಲ್ಲಿ ಮೊದಲು ಎಕೆ 64 (ತಾತ್ಕಾಲಿಕ ಶೀರ್ಷಿಕೆ) ಬರಬಹುದು. 2025ರಲ್ಲಿ ಸೆಟ್ಟೇರಿ, 2026ರಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ. ಅದಾಗ್ಯೂ, ಅವರ ಎರಡನೇ ಸಿನಿಮಾ ಎಕೆ 65 ಅಥವಾ 66 (ಯಾವುದನ್ನು ಪ್ರಶಾಂತ್​ ನೀಲ್​​​ ನಿರ್ದೇಶಿಸುತ್ತಾರೆಂಬುದು ಇನ್ನಷ್ಟೇ ತಿಳಿಯಬೇಕಿದೆ) ರಲ್ಲಿ ಪ್ರಶಾಂತ್ ನೀಲ್ ತಮ್ಮದೇ ಸಿನಿಮ್ಯಾಟಿಕ್​​ ಯೂನಿವರ್ಸ್​​​ ರಚಿಸಲಿದ್ದಾರಂತೆ.

ಇನ್ನೂ ಕೆಲ ವರದಿಗಳ ಪ್ರಕಾರ, ಈ ಮೇಲಿನ ಎರಡು ಚಿತ್ರಗಳಲ್ಲಿ ಒಂದರ ಕ್ಲೈಮ್ಯಾಕ್ಸ್ ಕೆಜಿಎಫ್ 3ಗೆ ನಾಂದಿ ಹಾಡಲಿದೆ.ಮುಂಬರುವ 'ಕೆಜಿಎಫ್‌'ನಲ್ಲಿ ಅಜಿತ್ ಮತ್ತು ಯಶ್ ಸ್ಕ್ರೀನ್ ಹಂಚಿಕೊಳ್ಳುತ್ತಾರೆ ಎಂದು ಹೇಳಲಾಗುತ್ತಿದೆ. ಎಲ್ಲದಕ್ಕೂ ಅಧಿಕೃತ ಘೋಷಣೆ ಬರಬೇಕಿದ್ದು, ಮುಂದಿನ ವರ್ಷಾರಂಭ ಆಗುವ ನಿರೀಕ್ಷೆಗಳಿವೆ.

ಸದ್ಯ ಪ್ರಶಾಂತ್ ನೀಲ್ ಜ್ಯೂ.ಎನ್‌ಟಿಆರ್ ಜೊತೆಗಿನ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತ ಅಜಿತ್ ಕುಮಾರ್, ‘ವಿದಾ ಮುಯರ್ಚಿ’ ಚಿತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಎರಡು ಪಾಜೆಕ್ಟ್‌ಗಳ ನಂತರ ಪ್ರಶಾಂತ್‌ ಮತ್ತು ಅಜಿತ್‌ ಕುಮಾರ್‌ ಹೊಸ ಸಿನಿಮಾ ಶುರುವಾಗಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ನಮ್ಮ ಪಾತ್ರವಿಲ್ಲ': ಆಫ್ಘನ್ ಸಚಿವರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಕುರಿತು 'ಕೇಂದ್ರ' ಸ್ಪಷ್ಟನೆ

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

2nd test, Day 2: 518 ರನ್ ಗಳಿಗೆ ಭಾರತ ಇನ್ನಿಂಗ್ಸ್ ಡಿಕ್ಲೇರ್!

CM ಆಗುವ ಕಾಲ ಹತ್ತಿರ ಬಂದಿದೆ ಎಂದು ನಾನು ಹೇಳಿಲ್ಲ: ಸುದ್ದಿ ತಿರುಚಿ ಪ್ರಸಾರ ಮಾಡಿದರೆ ಮಾನನಷ್ಟ ಮೊಕದ್ದಮೆ ಅನಿವಾರ್ಯ; ಡಿ ಕೆ ಶಿವಕುಮಾರ್

2nd test, Day 2: 2ನೇ ದಿನದಾಟದ ಆರಂಭದಲ್ಲೇ ಭಾರತಕ್ಕೆ ಆಘಾತ, ಭೋಜನ ವಿರಾಮದ ವೇಳೆಗೆ 427/4

SCROLL FOR NEXT