ಬಿಸ್ಲೆರಿ ನೀರಿನ ಬಾಟಲಿ ಮೇಲೆ ಭೈರತಿ ರಣಗಲ್ ಚಿತ್ರದ ಪೋಸ್ಟರ್ 
ಸಿನಿಮಾ ಸುದ್ದಿ

Video: ಕನ್ನಡ ಚಿತ್ರರಂಗದಲ್ಲಿ ಇದೇ ಮೊದಲು; Bisleri ನೀರಿನ ಬಾಟಲ್ ಮೇಲೆ Bhairathi Ranagal ಪ್ರಚಾರ

ನೀರಿನ ಬಾಟಲಿ ಮೇಲೆ ಹಾಕುವ ಸ್ಟಿಕರ್ ಮೇಲೆ ಭೈರತಿ ರಣಗಲ್ ಚಿತ್ರದ ಪುಟ್ಟ ಪೋಸ್ಟರ್ ಮುದ್ರಣವಾಗುತ್ತಿರುವ ಮತ್ತು ನೀರಿನ ಬಾಟಲಿ ಮೇಲೆ ಪೋಸ್ಟರ್ ಸಹಿತ ಸ್ಟಿಕ್ಕರ್ ಇರುವ ನೀರಿನ ಬಾಟಲಿಗಳು ಹೊರಬರುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.

ಬೆಂಗಳೂರು: ಚಿತ್ರ ಪ್ರಚಾರದಲ್ಲಿ ನಟ ಶಿವರಾಜ್ ಕುಮಾರ್ ಅಭಿನಯದ ಭೈರತಿ ರಣಗಲ್ ಚಿತ್ರತಂಡ ಒಂದು ಹೆಜ್ಜೆ ಮುಂದೆ ಹೋಗಿದ್ದು, ಬಿಸ್ಲೇರಿ ನೀರಿನ ಬಾಟಲ್ ಮೇಲೆ Bhairathi Ranagal ಚಿತ್ರದ ಪೋಸ್ಟರ್ ಪ್ರಿಂಟ್ ಮಾಡಿಸುವ ಮೂಲಕ ಭರ್ಜರಿ ಪ್ರಚಾರ ನಡೆಸಿದೆ.

ಮೂಲಗಳ ಪ್ರಕಾರ ಕರ್ನಾಟಕದಾದ್ಯಂತ ಸುಮಾರು 1 ಕೋಟಿ ಬಿಸ್ಲೆರಿ ನೀರಿನ ಬಾಟಲ್ ಗಳ ಮೇಲೆ ಭೈರತಿ ರಣಗಲ್ ಪೋಸ್ಟರ್ ರಾರಾಜಿಸುತ್ತಿದ್ದು, ನೀರಿನ ಬಾಟಲಿ ಮೇಲೆ ಹಾಕುವ ಸ್ಟಿಕರ್ ಮೇಲೆ ಭೈರತಿ ರಣಗಲ್ ಚಿತ್ರದ ಪುಟ್ಟ ಪೋಸ್ಟರ್ ಮುದ್ರಣವಾಗುತ್ತಿದೆ.

ನೀರಿನ ಬಾಟಲಿ ಮೇಲೆ ಪೋಸ್ಟರ್ ಸಹಿತ ಸ್ಟಿಕ್ಕರ್ ಇರುವ ನೀರಿನ ಬಾಟಲಿಗಳು ಹೊರಬರುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.

ಶಿವರಾಜ್ ಕುಮಾರ್ ಅಭಿಮಾನಿಗಳು ಮತ್ತು ಕನ್ನಡ ಸಿನಿ ಅಭಿಮಾನಿಗಳು ಈ ವಿಡಿಯೋವನ್ನು ವ್ಯಾಪಕ ಶೇರ್ ಮಾಡುತ್ತಿದ್ದಾರೆ.

ಅಂದಹಾಗೆ ನಟ ಶಿವರಾಜ್ ಕುಮಾರ್ ಅಭಿನಯದ ಬಹು ನಿರೀಕ್ಷಿತ ಚಿತ್ರ 'ಭೈರತಿ ರಣಗಲ್’ ಚಿತ್ರ ನವೆಂಬರ್ 15ರಂದು ತೆರೆಗೆ ಬರಲಿದೆ. ಚಿತ್ರವನ್ನು ಮಫ್ತಿ ಖ್ಯಾತಿಯ ನರ್ತನ್ ನಿರ್ದೇಶಿಸಿದ್ದು, ಮಫ್ತಿ ಚಿತ್ರದಲ್ಲಿ ಶಿವಣ್ಣ ಭೈರತಿ ರಣಗಲ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರದಲ್ಲಿ ಭೈರತಿ ರಣಗಲ್ ಯಾರು? ಹೇಗೆ ಭೈರತಿ ರಣಗಲ್ ಆದ್ರು ಅನ್ನೋ ವಿಚಾರ ಕೂಡ ರಿವೀಲ್ ಆಗುತ್ತಿದೆ.

ಕನ್ನಡದ ಮೊದಲ ಪ್ರೀಕ್ವೆಲ್ ಸಿನಿಮಾ ಭೈರತಿ ರಣಗಲ್ ಚಿತ್ರ ಕನ್ನಡದ ಮೊದಲ ಪ್ರೀಕ್ವೆಲ್ ಚಿತ್ರವಾಗಿದ್ದು, ಈ ಮೂಲಕ ಭೈರತಿ ರಣಗಲ್ ಈ ವಿಚಾರದಲ್ಲೂ ವಿಶೇಷವಾಗಿದೆ. ಭೈರತಿ ರಣಗಲ್ ಚಿತ್ರದಲ್ಲಿ ರುಕ್ಮಿಣಿ ವಸಂತ್ ಮತ್ತು ಛಾಯಾ ಸಿಂಗ್ ನಟಿಸಿದ್ದಾರೆ. ಸಿಂಗ ಪಾತ್ರದಲ್ಲಿ ಮಧು ಗುರುಸ್ವಾಮಿ ಇದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಭಾರತೀಯ ಸೇನೆ ಸಹ ಮೇಲ್ಜಾತಿಯವರಿಂದ ನಿಯಂತ್ರಿಸಲ್ಪಡುತ್ತದೆ': ರಾಹುಲ್ ಗಾಂಧಿಯಿಂದ ಹೊಸ ವಿವಾದ

ರಾಜ್ಯದ ಜನಸಂಖ್ಯೆಯ ಶೇ. 60 ಕ್ಕಿಂತ ಹೆಚ್ಚು ಜನರು 35 ರ ವಯೋಮಾನದವರು- ಸಿಎಂ ಸಿದ್ದರಾಮಯ್ಯ

ಸಾರ್ವಜನಿಕ ಸ್ಥಳಗಳಲ್ಲಿ ಖಾಸಗಿ ಸಂಸ್ಥೆಗಳ ಚಟುವಟಿಕೆಗೆ ನಿರ್ಬಂಧ: ತಡೆಯಾಜ್ಞೆ ವಿರೋಧಿಸಿ ಸರ್ಕಾರದ ಮೇಲ್ಮನವಿ; 'ಆದೇಶ ಕಾಯ್ದಿರಿಸಿದ' ಹೈಕೋರ್ಟ್

ಏಷ್ಯಾ ಕಪ್ ವಿವಾದ: ಪಾಕ್ ಕ್ರಿಕೆಟಿಗ ಹ್ಯಾರಿಸ್ ರೌಫ್‌ಗೆ ಐಸಿಸಿ ಕಠಿಣ ಶಿಕ್ಷೆ, ಸೂರ್ಯಕುಮಾರ್ ಯಾದವ್‌ಗೆ ದಂಡ

ಭಾರತ ಸದ್ಯದಲ್ಲೇ ವಿಶ್ವದ ಮೂರನೇ ಅತಿ ದೊಡ್ಡ ಆರ್ಥಿಕತೆಯಾಗಲಿದೆ- ಕೇಂದ್ರ ಹಣಕಾಸು ಸಚಿವೆ

SCROLL FOR NEXT