ಎದ್ದೇಳು ಮಂಜುನಾಥ 2 ಚಿತ್ರದ ಸ್ಟಿಲ್ 
ಸಿನಿಮಾ ಸುದ್ದಿ

'ಎದ್ದೇಳು ಮಂಜುನಾಥ 2' ಬಿಡುಗಡೆಗೆ ದಿನಾಂಕ ಫಿಕ್ಸ್: ಚಿತ್ರದ ಗಳಿಕೆಯಲ್ಲಿ ಅರ್ಧದಷ್ಟು ಗುರುಪ್ರಸಾದ್ ಮಗಳಿಗೆ!

ರಂಗನಾಯಕ ಚಿತ್ರದಲ್ಲಿ ಜಗ್ಗೇಶ್ ಅವರಿಗೆ ಜೋಡಿಯಾಗಿದ್ದ ರಚಿತಾ ಮಹಾಲಕ್ಷ್ಮಿ ನಾಯಕಿ

ದಿವಂಗತ ನಿರ್ದೇಶಕ ಗುರುಪ್ರಸಾದ್ ಅವರ ಅಂತಿಮ ಚಿತ್ರವಾದ 'ಎದ್ದೇಳು ಮಂಜುನಾಥ 2' ಫೆಬ್ರುವರಿ 21ಕ್ಕೆ ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಗುರುಪ್ರಸಾದ್ ಬರೆದು, ನಿರ್ದೇಶಿಸಿದ್ದ 'ಎದ್ದೇಳು ಮಂಜುನಾಥ 2' ಚಿತ್ರದಲ್ಲಿ ಅವರೇ ನಟಿಸಿದ್ದಾರೆ. ಮಠ ಮತ್ತು ಎದ್ದೇಳು ಮಂಜುನಾಥದಂತಹ ಅವಿಸ್ಮರಣೀಯ ಚಿತ್ರಗಳನ್ನು ನೀಡಿದ್ದ ಗುರುಪ್ರಸಾದ್ ಅವರು 2024ರ ನವೆಂಬರ್ ತಮ್ಮ 52ನೇ ವಯಸ್ಸಿನಲ್ಲಿ ಆತ್ಮಹತ್ಯೆ ಮಾಡಿಕೊಂಡು ದುರಂತ ಅಂತ್ಯ ಕಂಡಿದ್ದರು.

ಅವರ ಹಠಾತ್ ನಿಧನದಿಂದಾಗಿ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದ್ದು, ಕ್ರೈಂ ಕಾಮಿಡಿ ಚಿತ್ರವಾಗಿರುವ 'ಎದ್ದೇಳು ಮಂಜುನಾಥ 2' ಇದೀಗ ಅವರ ಅಪಾರ ಪ್ರತಿಭೆ ಮತ್ತು ಚಿತ್ರರಂಗಕ್ಕೆ ನೀಡಿದ ಕೊಡುಗೆಗೆ ಅಂತಿಮ ಗೌರವವಾಗಿ ಕಾರ್ಯನಿರ್ವಹಿಸಲಿದೆ. ಗುರುಪ್ರಸಾದ್ ಅವರ ಕೊಡುಗೆಯನ್ನು ಸ್ಮರಿಸಲು ಹೆಚ್ಚುವರಿಯಾಗಿ ಅಭಿಮಾನಿಗಳಿಗೆ ಚಿತ್ರದ ಮೇಕಿಂಗ್ ಮತ್ತು ಗುರುಪ್ರಸಾದ್ ಅವರು ಈ ಯೋಜನೆಗೆ ನೀಡಿದ ಸಮರ್ಪಣೆಯ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತದೆ.

ಎದ್ದೇಳು ಮಂಜುನಾಥ 2 ಚಿತ್ರದ ಅರ್ಧದಷ್ಟು ಗಳಿಕೆಯನ್ನು ಗುರುಪ್ರಸಾದ್ ಅವರ ಪುತ್ರಿ ನಾಗು ಶರ್ಮಾ ಅವರಿಗೆ ಸಲ್ಲಿಸುವುದಾಗಿ ನಿರ್ಮಾಪಕ ಮೈಸೂರು ರಮೇಶ್ ಘೋಷಿಸಿದ್ದಾರೆ.

ಎದ್ದೇಳು ಮಂಜುನಾಥ ಚಿತ್ರವನ್ನು ಗುರುಪ್ರಸಾದ್ ಅವರೇ ನಿರ್ದೇಶಿಸಿದ್ದರು. ಇದೀಗ ಎದ್ದೇಳು ಮಂಜುನಾಥ 2 ಅವರ ಕೊನೆಯ ಸಿನಿಮಾವಾಗಿದೆ. ಕೋವಿಡ್-19 ಸಾಂಕ್ರಾಮಿಕದ ಸಮಯದಲ್ಲಿ ಚಿತ್ರದ ಕಥೆಯನ್ನು ಬರೆದಿದ್ದರು ಮತ್ತು ಲಾಕ್‌ಡೌನ್‌ನ ಅಂತಿಮ ಹಂತದಲ್ಲಿ ಚಿತ್ರದ ನಿರ್ಮಾಣ ಪ್ರಾರಂಭವಾಯಿತು. ಚಿತ್ರವು ನಾಟಕೀಯ ತಿರುವುಗಳೊಂದಿಗೆ ಹಾಸ್ಯವನ್ನು ಸಂಯೋಜಿಸುವ ಗುರುಪ್ರಸಾದ್ ಅವರ ಅಸಲಿ ಶೈಲಿಯನ್ನು ಪ್ರದರ್ಶಿಸುತ್ತದೆ.

ಗುರುಪ್ರಸಾದ್ ಅವರೇ ಬರೆದಿರುವ ಸಾಹಿತ್ಯದೊಂದಿಗೆ 'ಕಿತ್ತೋದ ಪ್ರೇಮ' ಎಂಬ ಭಾವಪೂರ್ಣ ಹಾಡನ್ನು ಸಹ ಚಿತ್ರತಂಡ ಬಿಡುಗಡೆ ಮಾಡಿದೆ. ಈ ಹಾಡನ್ನು ನವೀನ್ ಸಜ್ಜು ಹಾಡಿದ್ದು, ಅನೂಪ್ ಸೀಳಿನ್ ಅವರ ಸಂಗೀತ ಸಂಯೋಜನೆ ಇದೆ. ಈ ಹಾಡಿಗೆ ಈಗಾಗಲೇ ಸಕಾರಾತ್ಮಕ ಪ್ರತಿಕ್ರಿಯೆ ಲಭ್ಯವಾಗುತ್ತಿದೆ.

ರಂಗನಾಯಕ ಚಿತ್ರದಲ್ಲಿ ಜಗ್ಗೇಶ್ ಅವರಿಗೆ ಜೋಡಿಯಾಗಿದ್ದ ರಚಿತಾ ಮಹಾಲಕ್ಷ್ಮಿಯವರೇ ಈ ಚಿತ್ರದಲ್ಲಿ ನಟಿಸಿದ್ದಾರೆ. ಇನ್ನುಳಿದಂತೆ ಚಿತ್ರದ ತಾರಾಗಣದಲ್ಲಿ ಶರತ್ ಲೋಹಿತಾಶ್ವ ಮತ್ತು ರವಿ ದೀಕ್ಷಿತ್ ಸೇರಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಜ್ಯದಲ್ಲಿ ಸಿಎಂ ಗದ್ದುಗೆ ಗುದ್ದಾಟ: ಎಲ್ಲ ಗೊಂದಲಗಳಿಗೆ ಹೈಕಮಾಂಡ್ ತೆರೆ ಎಳೆಯಬೇಕು- ಸಿಎಂ ಸಿದ್ದರಾಮಯ್ಯ

ಇದು ಕೇವಲ ಧ್ವಜವಲ್ಲ ಭಾರತೀಯ ನಾಗರಿಕತೆಯ ಪುನರ್‌ ಜಾಗೃತಿಯ ಧ್ವಜ, ಶತಮಾನಗಳಷ್ಟು ಹಳೆಯ ಗಾಯ ಈಗ ವಾಸಿಯಾಗುತ್ತಿದೆ: ಪ್ರಧಾನಿ ಮೋದಿ

ಕೆಲಸದ ಹೊರೆ ಖಂಡಿಸಿ ಪಶ್ಚಿಮ ಬಂಗಾಳ CEO ಕಚೇರಿ ಮುಂದೆ BLOಗಳಿಂದ ಅಹೋರಾತ್ರಿ ಧರಣಿ!

ಅಯೋಧ್ಯೆ ರಾಮ ಮಂದಿರ ನಿರ್ಮಾಣ ಪೂರ್ಣ: ರಾಮ-ಸೀತೆ ವಿವಾಹ ಪರ್ವದಂದೇ ದೇಗುಲದ ಶಿಖರದ ಮೇಲೆ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ

"Misfit For Army": ಗುರುದ್ವಾರ ಪ್ರವೇಶಿಸಲು ನಿರಾಕರಣೆ; ಕ್ರಿಶ್ಚಿಯನ್ ಸೇನಾ ಅಧಿಕಾರಿಗೆ ಸುಪ್ರೀಂ ಕೋರ್ಟ್ ತರಾಟೆ!

SCROLL FOR NEXT