ಮ್ಯೂಟಂಟ್ ರಘು, ಅಶ್ವಿನಿ ಗೌಡ 
ಸಿನಿಮಾ ಸುದ್ದಿ

BBK 12: ರಘು V/S ಅಶ್ವಿನಿ ಗೌಡ; ಏಯ್.. ಏಯ್.. ದೊಡ್ಮನೆಯಲ್ಲಿ ಏಕ ವಚನ ಪ್ರಯೋಗ! ವೀಕ್ಷಕರು ಏನಂತಾರೆ?

ಅದರಲ್ಲಿ ಬೆಳಂ ಬೆಳಗ್ಗೆ ಮೈಕ್ ಜೊತೆಗೆ ಬಿಗ್ ಬಾಸ್ ಮನೆಗೆ ಎಂಟ್ರಿ ನೀಡುವ ಮ್ಯೂಟಂಟ್ ರಘು, 'ಇದು ರೆಸಾರ್ಟ್ ಅಲ್ಲ. ಬಿಗ್ ಬಾಸ್ ಮನೆ' ಎದ್ದೇಳಿ ಎಂದು ಬಡಿದೆಬ್ಬಿಸಿದ್ದಾರೆ.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 12 ನಾಲ್ಕನೇ ವಾರಕ್ಕೆ ಕಾಲಿಟ್ಟಿರುವಂತೆಯೇ ದೊಡ್ಮನೆಯಲ್ಲಿ ಏಕ ವಚನ ಪ್ರಯೋಗ ನಡೆದಿದೆ.

ಈಗಾಗಲೇ ಬಿಗ್ ಬಾಸ್ ಮನೆಯಿಂದ ಮೂವರು ಸ್ಪರ್ಧಿಗಳು ಹೊರ ಹೋಗಿದ್ದು, ಈಗ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿ ನೀಡಿರುವ ಮ್ಯೂಟಂಟ್ ರಘು ಹಾಗೂ ಅಶ್ವಿನಿ ಗೌಡ ನಡುವೆ ಏಯ್.. ಏಯ್... ಅಂತಾ ಕರೆದುಕೊಳ್ಳುವ ಮೂಲಕ ಪರಸ್ಪರ ಏಕ ವಚನದಲ್ಲಿ ಕೂಗಾಡಿದ್ದಾರೆ.

ಕಲರ್ಸ್ ಕನ್ನಡ ವಾಹಿನಿ ಬಿಡುಗಡೆ ಮಾಡಿರುವ ಭಾನುವಾರದ ಸಂಚಿಕೆಯ ಪ್ರೊಮೋದಲ್ಲಿ ಇದು ಕಂಡುಬಂದಿದೆ. ಅದರಲ್ಲಿ ಬೆಳಂ ಬೆಳಗ್ಗೆ ಮೈಕ್ ಜೊತೆಗೆ ಬಿಗ್ ಬಾಸ್ ಮನೆಗೆ ಎಂಟ್ರಿ ನೀಡುವ ಮ್ಯೂಟಂಟ್ ರಘು, 'ಇದು ರೆಸಾರ್ಟ್ ಅಲ್ಲ. ಬಿಗ್ ಬಾಸ್ ಮನೆ' ಎದ್ದೇಳಿ ಎಂದು ಬಡಿದೆಬ್ಬಿಸಿದ್ದಾರೆ.

ತದನಂತರ ಗಾರ್ಡನ್ ಪ್ರದೇಶದಲ್ಲಿ ಸ್ಪರ್ಧಿಗಳ ಮೇಲೆ ನೀರು ಸುರಿದು ಕಾರಣ ನೀಡಿದ್ದಾರೆ. ಅಶ್ವಿನಿ ಗೌಡ ಅವರ ಮೇಲೆ ನೀರು ಸುರಿದ ನಂತರ ಇಬ್ಬರ ನಡುವೆ ಏಕವಚನದ ಪ್ರಯೋಗ ನಡೆದಿದೆ. ಇದರಿಂದ ಆಕ್ರೋಶಗೊಂಡ ಅಶ್ವಿನಿ, ನೀವು ಒಬ್ಬ ಸ್ಪರ್ಧಿ, ಹಾಗೇ ಇರಿ ಎಂದು ರೇಗಾಡಿದ್ದಾರೆ. ಆಗ ಜಾಹ್ನವಿ, ನಮ್ಮ ಹತ್ತಿರ ಬಂದು ಏಕವಚನದಲ್ಲಿ ಮಾತನಾಡಿದರೆ ಇಲ್ಲಿಂದ ಹೋಗಬಹುದು ಎಂದಿದ್ದಾರೆ. ಹೀಗೆ ಅಶ್ವಿನಿ ಗೌಡ ಹಾಗೂ ರಘು ಮಧ್ಯೆ ಗಲಾಟೆ ನಡೆದಿದೆ.

ಈ ಪ್ರೋಮೊ ವೀಕ್ಷಿಸಿದ ಪ್ರೇಕ್ಷಕರು, ಅಶ್ವಿನಿ ಗೌಡಗೆ ಎದಿರೇಟು ನೀಡಲು ರಘು ಸೂಕ್ತ ಸ್ಪರ್ಧಿ ಎಂದು ಹೇಳುತ್ತಿದ್ದಾರೆ. ಈ ಹಿಂದೆ ರಕ್ಷಿತಾ ಶೆಟ್ಟಿ ಅವರಿಗೆ 'S' ಪದ ಬಳಕೆ ಮಾಡುವ ಮೂಲಕ ನಿಂದಿಸಿದ್ದ ಅಶ್ವಿನಿ ಗೌಡ ಹಾಗೂ ಜಾಹ್ನವಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದ ವೀಕ್ಷಕರು, ಇದೀಗ ವೈಲ್ಡ್ ಕಾರ್ಡ್ ಆಗಿ ಮನೆ ಪ್ರವೇಶಿಸಿರುವ ಆಕ್ರಮಣಕಾರಿ ಸ್ವಭಾವದ ರಘು ಅವರ ಪರವಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಆಗ ಸಿದ್ಧಾರ್ಥ್, ಈಗ CJ Roy': 'ತೆರಿಗೆ ಭಯೋತ್ಪಾದನೆ'; ಐಟಿ ದಾಳಿ ಕುರಿತು ಕೇಂದ್ರಕ್ಕೆ ಉದ್ಯಮಿ Mohandas Pai ಪತ್ರ! Video

U19 World Cup: ಪಾಕಿಸ್ತಾನವನ್ನು ಬಗ್ಗು ಬಡಿದು ಸೆಮಿಫೈನಲ್‌ಗೆ ಲಗ್ಗೆ ಇಟ್ಟ ಭಾರತ, ಸೆಮಿಸ್‌ನಲ್ಲಿ ಅಫ್ಘಾನ್ ಜೊತೆ ಗುದ್ದಾಟ!

ಇನ್ಮುಂದೆ ಷೇರು ಮರುಖರೀದಿ ಲಾಭಕ್ಕೂ ತೆರಿಗೆ! capital gain tax ಎಂದು ಪರಿಗಣಿಸುವ ಘೋಷಣೆ

ಕೇಂದ್ರ ಬಜೆಟ್ 2026: ಷೇರುಮಾರುಕಟ್ಟೆ 'ರಕ್ತಪಾತ', ಹೂಡಿಕೆದಾರರ 9.40 ಲಕ್ಷ ಕೋಟಿ ರೂ ನಷ್ಟ! ಕುಸಿತಕ್ಕೆ ಕಾರಣವೇನು?

ಕೊಟ್ಟೂರು 'ತ್ರಿವಳಿ ಮರ್ಡರ್' ಕೇಸ್ ಗೆ ಬಿಗ್ ಟ್ವಿಸ್ಟ್!

SCROLL FOR NEXT